ಸಿದ್ದರಾಮಯ್ಯಗೆ ಆಶೀರ್ವಾದ ಮಾಡಲು ಕಾದು ಕುಳಿತ ತೃತೀಯಲಿಂಗಿ ಸಮುದಾಯ

By

Published : May 13, 2023, 5:05 PM IST

thumbnail

ಮೈಸೂರು: ಇಲ್ಲಿನ ಮತ ಎಣಿಕೆ ಕೇಂದ್ರದ ಹೊರಗೆ ಸಿದ್ದರಾಮಯ್ಯ ಅವರಿಗೆ ಧನ್ಯವಾದ ಮತ್ತು ಆಶೀರ್ವಾದಕ್ಕಾಗಿ ತೃತೀಯಲಿಂಗಿ ಸಮುದಾಯದ ಸದಸ್ಯರು ಕಾದುಕುಳಿತಿದ್ದರು. ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ತೃತೀಯಲಿಂಗಿ ಸಮುದಾಯದ ಚಾಂದಿನಿ ಹೇಳಿದ್ದಾರೆ.

ಕರ್ನಾಟಕದಲ್ಲಿ 1 ಲಕ್ಷ ತೃತೀಯ ಸಮುದಾಯದ ಜನ ಇದ್ದು ಎಲ್ಲಾರೂ ಕಾಂಗ್ರೆಸ್​ಗೆ ಮತ ಹಾಕಿದ್ದಾರೆ. ಕಾಂಗ್ರೆಸ್​ನಿಂದ ಎಲ್ಲರಿಗೂ ಒಳ್ಳೆಯದಾಗುವ ನಿರೀಕ್ಷೆ ಇದೆ. ಮಹಿಳೆಯರಿಗೆ ಸರ್ಕಾರ ನೀಡಿದ ಭರವಸೆ ಈಡೇರಿಸಲಿದೆ. ಅಡುಗೆ ಅನಿಲದ ದರ 500ಕ್ಕೆ ಇಳಿಕೆ ಆಗಲಿದೆ. ಮಹಿಳೆಯರಿಗೆ ಬಸ್​ ಪ್ರಯಾಣ ಉಚಿತವಾಗಲಿದೆ. ಉಚಿತ ವಿದ್ಯುತ್ ನೀಡುವ ಭರವಸೆಯನ್ನೂ ಸರ್ಕಾರ ಈಡೇರಿಸಲಿದೆ ಎಂದು ಭರವಸೆ ವ್ಯಕ್ತ ಪಡಿಸಿದ್ದಾರೆ. 

ಸಿದ್ದರಾಮಯ್ಯ ಅವರ ಕ್ಷೇತ್ರದಲ್ಲಿ 10,000 ಮತ ನಮ್ಮ ಸಮುದಾಯದಿಂದ ಹಾಕಿದ್ದಾರೆ. ಚಾಮರಾಜನಗರ ಕ್ಷೇತ್ರದ ಹರೀಶ್​ ಗೌಡ ಅವರಿಗೂ ಮತಹಾಕಿಸಿದ್ದೇವೆ. ನಾವು ಇಲ್ಲಿ ನಾಲ್ವರು ಗೆದ್ದ ಅಭ್ಯರ್ಥಿಗಳಿಗಾಗಿ ಅವರಿಗೆ ಧನ್ಯವಾದ ತಿಳಿಸಲು ಇಲ್ಲಿಗೆ ಬಂದಿದ್ದೇವೆ ಎಂದು ಚಾಂದಿನಿ ಹೇಳುತ್ತಾರೆ.  ಅಲ್ಲಿ ಸೇರಿದ್ದ ತೃತೀಯಲಿಂಗಿ ಸಮುದಾಯದ ಸದಸ್ಯರು ಸಿದ್ದರಾಮಯ್ಯ ಅವರಿಗೆ ಈ ವೇಳೆ ಜೈಕಾರ ಹಾಕಿದರು. 

ಇದನ್ನೂ ಓದಿ: ಕರ್ನಾಟಕದಲ್ಲಿ ಕಾಂಗ್ರೆಸ್​ ಗೆಲುವಿಗೆ ಈ ಅಂಶಗಳು ಕಾರಣವೇ?

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.