ದೊಡ್ಡಬಳ್ಳಾಪುರ: ರಸ್ತೆಯಲ್ಲಿ ಚಿರತೆ ಪ್ರತ್ಯಕ್ಷ- ವಿಡಿಯೋ

By ETV Bharat Karnataka Team

Published : Jan 2, 2024, 1:03 PM IST

thumbnail

ದೊಡ್ಡಬಳ್ಳಾಪುರ: ಕಳೆದ ಹತ್ತು ದಿನಗಳಿಂದ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದ್ದು ಜನಾತಂಕಕ್ಕೆ ಕಾರಣವಾಗಿದೆ. ಅರಳುಮಲ್ಲಿಗೆ-ಕುಂಟನಹಳ್ಳಿ ಮಾರ್ಗಮಧ್ಯೆ ಚಿರತೆ ವಾಹನ ಸವಾರರ ಕಣ್ಣಿಗೆ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರಿಗೆ ಕಾಡುಪ್ರಾಣಿಯ ದರ್ಶನವಾಗಿದೆ. ಮೊಬೈಲ್​ನಲ್ಲಿ ಓಡಾಟದ ವಿಡಿಯೋವನ್ನು ಅವರು ಸೆರೆಹಿಡಿದಿದ್ದಾರೆ.

ದೊಡ್ಡಬಳ್ಳಾಪುರದ ಅಪೆರಲ್ ಪಾರ್ಕ್, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ, ವೀರಾಪುರದಲ್ಲಿ ಕಾಣಿಸಿಕೊಂಡ ಚಿರತೆ ಮತ್ತು ಕುಂಟನಹಳ್ಳಿಯಲ್ಲಿ ಕಾಣಿಸಿಕೊಂಡ ಚಿರತೆ ಒಂದೇ ಎಂದು ಅರಣ್ಯಾಧಿಕಾರಿಗಳಿಂದ ತಿಳಿದು ಬಂದಿದೆ. 

ಇದೇ ರೀತಿ, ಕಳೆದ ಡಿಸೆಂಬರ್​ನಲ್ಲಿ ಚಾಲಕನಿಗೆ ಚಿರತೆ ಎದುರಾಗಿತ್ತು. ಆನೇಕಲ್ ತಾಲೂಕಿನ‌ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ‌ ರಸ್ತೆಯಲ್ಲಿ ‌ನಸುಕಿನ ಜಾವ ತೆರಳುತ್ತಿದ್ದಾಗ ಗೋಚರಿಸಿತ್ತು. ಕೂಡಲೇ ಚಾಲಕ ಮೊಬೈಲ್​ನಲ್ಲಿ ಚಿರತೆಯ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಾಕಷ್ಟು​ ವೈರಲ್ ಆಗಿತ್ತು. ಇದಕ್ಕೂ ಮುನ್ನ, ನೆಲಮಂಗಲ ತಾಲೂಕಿನ ದಾಬಸ್ ಪೇಟೆ ಬಳಿಯ ತೋಟದ ಸಮೀಪವೂ ಚಿರತೆ ಹೊಂಚು ಹಾಕಿ ಕಾದು ಕುಳಿತು ನಾಯಿ ಮರಿಯನ್ನು ಹೊತ್ತೊಯ್ದಿತ್ತು.

ಇದನ್ನೂ ಓದಿ: ಉತ್ತರ ಕನ್ನಡ: ಸಂಚರಿಸುತ್ತಿದ್ದಾಗ ಬಸ್​ನ ಚೆಸ್ಸಿ ಕಟ್​​, ಪ್ರಯಾಣಿಕರಿಗೆ ಗಾಯ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.