ರಸ್ತೆಯಲ್ಲಿ ವಾಗ್ವಾದ: ಯುವಕನನ್ನು ಗುದ್ದಿಕೊಂಡೇ ಕಾರ್ ಚಲಾಯಿಸಿದ ಕಿರಾತಕರು

By

Published : May 4, 2022, 5:51 PM IST

Updated : Feb 3, 2023, 8:23 PM IST

thumbnail

ಚಂಡೀಗಢ: ಅಪರಾಧ ಪ್ರಕರಣಗಳು ನಗರದಲ್ಲಿ ನಿರಂತರವಾಗಿ ಹೆಚ್ಚುತ್ತಿವೆ. ಸೆಕ್ಟರ್ 22 ರಲ್ಲಿ ತಡರಾತ್ರಿ ಅನಾಹುತ ಘಟನೆ ಜರುಗಿದೆ. ಕಾರಿನಲ್ಲಿ ಹೋಗುತ್ತಿದ್ದ ಯುವಕರು ರಸ್ತೆ ಬದಿ ನಿಂತಿದ್ದ ಯುವಕನೊಂದಿಗೆ ವಾಗ್ವಾದಕ್ಕಿಳಿದಿದ್ದಾರೆ. ಆ ವೇಳೆ ಕಾರಿನ ಮುಂಭಾಗ ಇದ್ದ ಯುವಕನನ್ನು ಗುದ್ದಿಕೊಂಡೇ ಕಾರ್​ ಚಲಾಯಿಸಿದ್ದಾರೆ. ಸ್ಥಳದಲ್ಲಿದ್ದ ಕೆಲವರು ರಕ್ಷಣೆಗೆ ಮುಂದಾದರೂ ಸಹ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣ ಸಾಧ್ಯವಾಗಿಲ್ಲ. ಯುವಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹಾಗೆ ಘಟನೆ ಸಂಬಂಧ ಆರೋಪಿಗಳನ್ನು ಬಂಧಿಸಿದ್ದು ಕಾರ್​ ವಶಕ್ಕೆ ಪಡೆಯಲಾಗಿದೆ.

Last Updated : Feb 3, 2023, 8:23 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.