ಎಷ್ಟೇ ಬಾರಿ ಹೇಳಿದ್ರೂ ಕ್ರಮ ಕೈಗೊಳ್ಳದ ಅಧಿಕಾರಿಗಳು.. 200 ಎಕರೆ ಭತ್ತದ ಬೆಳೆ ನಾಶ, ರೈತರ ಆಕ್ರೋಶ

By

Published : Jul 16, 2022, 9:11 AM IST

Updated : Feb 3, 2023, 8:25 PM IST

thumbnail

ಪಂಜಾಬಿನ ತರ್ಣ್​ತಾರಣ್ ಜಿಲ್ಲೆಯ ಪಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಬಲಿಯನವಾಳ ಗ್ರಾಮದ ಕಾಲುವೆ ಒಡೆದ ಪರಿಣಾಮ ಬಲಿಯನವಾಳ, ಸರಹಳ್ಳಿ, ಖಾರಾ ಗ್ರಾಮಗಳ ರೈತರ 150 ರಿಂದ 200 ಎಕರೆ ಭತ್ತದ ಬೆಳೆ ನೀರಿನಲ್ಲಿ ಮುಳುಗಿ ನಾಶವಾಗಿದೆ. ಬೆಳೆಹಾನಿಯಿಂದಾಗಿ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ವಿರುದ್ಧ ರೈತರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಕಾಲುವೆ ನೀರು ಬೆಳೆಗಳಿಗೆ ನುಗ್ಗಿದ್ದರಿಂದ ಬೆಳೆ ಸಂಪೂರ್ಣ ನಾಶವಾಗಿದೆ ಎನ್ನುತ್ತಾರೆ ರೈತರು. ಪ್ರತಿ ವರ್ಷವೂ ಈ ಕಚ್ಚಾ ಕಾಲುವೆಯಿಂದ ತಮಗೆ ತ್ಯಾಜ್ಯ ಉಂಟಾಗುತ್ತಿದ್ದು, ಪ್ರತಿ ಬಾರಿಯೂ ಸ್ವಚ್ಛತೆ ಹಾಗೂ ಡಾಂಬರು ಹಾಕುವಂತೆ ಸಂಬಂಧಪಟ್ಟ ಇಲಾಖೆಗೆ ಲಿಖಿತ ಅರ್ಜಿಗಳನ್ನು ನೀಡಿದರೂ ಕೇಳುವವರೇ ಇಲ್ಲದಂತಾಗಿದೆ. ಇದಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.

Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.