ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಮರಳು ಕಲಾಕೃತಿ ಸಿದ್ಧಪಡಿಸಿದ ಸ್ಯಾಂಡ್​ ಆರ್ಟಿಸ್ಟ್​ ಸುದರ್ಶನ್​ ಪಾಟ್ನಾಯಕ್​​

By

Published : Apr 5, 2020, 1:06 PM IST

thumbnail

ದೇಶಾದ್ಯಂತ ಕೊರೊನಾ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ಹಗಲಿರುಳಿಲೆನ್ನದೇ ಶ್ರದ್ಧೆಯಿಂದ ಸೇವೆ ಮಾಡುತ್ತಿರುವ ಪೊಲೀಸರನ್ನು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ. ಒಡಿಶಾದ ಪುರಿಯಲ್ಲಿ ಪೊಲೀಸ್ ಇಲಾಖೆಯ ಕ್ಯಾಪ್​​ನೊಂದಿಗೆ "ವಿ ಸ್ಟ್ಯಾಂಡ್ ಫರ್ ಯು, ಸ್ಟೇ ಹೋಮ್ ಸ್ಟೇ ಸೇಫ್" ಸಂದೇಶವನ್ನು ಸಾರುವ ಮರಳಿನ ಕಲಾಕೃತಿ ಸಿದ್ಧಪಡಿಸಿ, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಲಾಕ್​​ಡೌನ್​​ ಸಮಯದಲ್ಲಿ ಮನೆಯಲ್ಲಿಯೇ ಇದ್ದು ನಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸುದರ್ಶನ್ ಪಟ್ನಾಯಕ್ ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.