ETV Bharat / state

ಕ್ಷುಲ್ಲಕ‌ ಕಾರಣಕ್ಕೆ ಹಾಡ ಹಗಲೇ ಯುವಕನ ಕೊಲೆ: ಬೆಚ್ಚಿಬಿದ್ದ ಶಿವಮೊಗ್ಗ ಜನತೆ

author img

By

Published : Aug 9, 2021, 4:41 PM IST

ಶಿವಮೊಗ್ಗ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆಯಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Youth murdered in Shimoga
ಕ್ಷುಲ್ಲಕ‌ ಕಾರಣಕ್ಕೆ ಹಾಡು ಹಗಲೆ ಯುವಕನ ಕೊಲೆ

ಶಿವಮೊಗ್ಗ: ಕ್ಷುಲ್ಲಕ ಕಾರಣಕ್ಕೆ ಹಾಡು ಹಗಲೇ ಯುವಕನ ಕೊಲೆ ನಡೆದಿದ್ದು, ಶಿವಮೊಗ್ಗ ಜನತೆ ಬೆಚ್ಚಿ ಬಿದ್ದಿದೆ. ರಾಹೀಲ್ (30)​ ಕೊಲೆಯಾದ ಯುವಕ, ಅಸ್ಗರ್(19) ಎಂಬಾತ ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ. ‌

ನಿನ್ನೆ ಅಸ್ಗರ್​ನ ತಂದೆಯ ಬೈಕ್ ರಾಹೀಲ್​ ಸೈಕಲ್‌ಗೆ ಡಿಕ್ಕಿ ಹೊಡೆದಿತ್ತು. ಈ ವೇಳೆ, ಜಗಳ ಉಂಟಾಗಿ ಕೊಲೆಯಾದ ರಾಹೀಲ್, ಅಸ್ಗರ್ ತಂದೆಯ ಕೆನ್ನೆಗೆ ಹೊಡೆದಿದ್ದನಂತೆ. ಕೊನೆಗೆ ಸೈಕಲ್​ ರಿಪೇರಿ ಮಾಡಿಕೊಡುವ ತೀರ್ಮಾನದಲ್ಲಿ ಗಲಾಟೆ ಅಂತ್ಯವಾಗಿತ್ತು.

ಶಿವಮೊಗ್ಗದಲ್ಲಿ ಹಾಡು ಹಗಲೆ ಯುವಕನ ಕೊಲೆ

‘ಆದರೆ, ತನ್ನ ತಂದೆಗೆ ಹೊಡೆದಿದ್ದ ಕೋಪದಲ್ಲಿದ್ದ ಅಸ್ಗರ್, ಇಂದು ನಗರದ ಟ್ಯಾಂಕ್‌ ಮೊಹಲ್ಲದ 3 ನೇ ತಿರುವಿನಲ್ಲಿ ರಾಹೀಲ್​​ನನ್ನು ತಡೆದು ಏಕಾಏಕಿ ತಾನು ತಂದಿದ್ದ ಚಾಕುವಿನಿಂದ ಹೊಟ್ಟೆಗೆ ನಾಲ್ಕೈದು ಬಾರಿ ಇರಿದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ರಾಹೀಲ್ ದಾರಿ ಮಧ್ಯೆ ಸಾವನ್ನಪ್ಪಿದ್ದಾನೆ.

ಓದಿ: ಬಹುನಿರೀಕ್ಷಿತ SSLC ಫಲಿತಾಂಶ ಪ್ರಕಟ: ಓರ್ವ ವಿದ್ಯಾರ್ಥಿನಿ ಬಿಟ್ಟು ಎಲ್ಲರೂ ಪಾಸ್​

ಘಟನೆ ನಡೆದ ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಡಾ.ಶೇಖರ್, ಕೋಟೆ ಪೊಲೀಸ್ ಠಾಣೆ ಪಿಐ ಚಂದ್ರಶೇಖರ್ ಭೇಟಿ ನೀಡಿದ್ದರು. ಬಳಿಕ ಆರೋಪಿ‌ ಅಸ್ಗರ್​​​ನನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.