ETV Bharat / state

ಶಿವಮೊಗ್ಗ ಯುವತಿ ಕಿಡ್ನಾಪ್​ ಕತೆ.. ಟ್ವಿಸ್ಟ್​ ಬಳಿಕ ಸುಖಾಂತ್ಯ ಕಂಡ ಪ್ರಕರಣ

author img

By

Published : May 16, 2023, 6:06 PM IST

Updated : May 16, 2023, 7:02 PM IST

shivamogga-girl-kidnap-case
ಶಿವಮೊಗ್ಗ ಯುವತಿ ಕಿಡ್ನಾಪ್​ ಕತೆ.. ಟ್ವಿಸ್ಟ್​ ಬಳಿಕ ಸುಖಾಂತ್ಯ ಕಂಡ ಪ್ರಕರಣ

ಶಿವಮೊಗ್ಗದಲ್ಲಿ ನಡೆದಿದ್ದ ಕಿಡ್ನಾಪ್​ ಪ್ರಕರಣಕ್ಕೆ ಕಾರಣ ಗೊತ್ತಾಗಿದೆ. ಪೊಲೀಸರು ಯುವತಿಯ ಪತ್ತೆ ಹಚ್ಚುವ ಮೂಲಕ ಈ ಕೇಸ್​ ಸುಖಾಂತ್ಯ ಕಂಡಿದೆ.

ಶಿವಮೊಗ್ಗ: ದಾವಣಗೆರೆ ಜಿಲ್ಲೆ ಮೂಲದ ಯುವತಿಯನ್ನು ಶಿವಮೊಗ್ಗದಿಂದ ಅಪಹರಣ ಮಾಡಿ 20 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ದೊಡ್ಡ ತಿರುವು ಪಡೆದ ಬಳಿಕ ಯುವತಿ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ಪೋಷಕರು ನೀಡಿದ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿದ ಜಯನಗರ ಪೊಲೀಸ್​​ ಠಾಣೆಯ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.

ನಗರದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇ 14 ರಂದು ಕಾಣೆಯಾಗಿದ್ದಳು ಮತ್ತು ಆಕೆಯ ಪೋಷಕರ ಮೊಬೈಲ್‌ಗೆ "ನಿಮ್ಮ‌ ಮಗಳು ಸುರಕ್ಷಿತವಾಗಿ ಮನೆಗೆ ಬರಬೇಕಾದರೆ 20 ಲಕ್ಷ ರೂ‌. ನೀಡಬೇಕು. ಈ ವಿಷಯವನ್ನು‌ ಪೊಲೀಸರಿಗೆ ತಿಳಿಸಿದರೆ, ನಿಮ್ಮ ಮಗಳ ಹೆಣ ಸಹ ಸಿಗುವುದಿಲ್ಲ ಎಂದು ಮೆಸ್ಸೇಜ್ ಮಾಡಿದ್ದರು. ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಯುವತಿ ಓದುತ್ತಿದ್ದ ಹಾಸ್ಟೆಲ್​​ ಸಮೀಪದ ಸಿಸಿ ಕ್ಯಾಮರಾ ಹಾಗೂ ಆಕೆಯ ಮೊಬೈಲ್ ನೆಟ್​​ವರ್ಕ್​ ಪರಿಶೀಲನೆ ನಡೆಸಿದಾಗ ಯುವತಿಯು ಹುಬ್ಬಳ್ಳಿಯಲ್ಲಿರುವುದಾಗಿ ತಿಳಿದುಬಂದಿತ್ತು. ನಂತರ ಯುವತಿಯನ್ನು ಪೊಲೀಸರು ಹುಬ್ಬಳ್ಳಿಯ ಬಸ್​ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.

ಕ್ರೈಸ್ತ ಸನ್ಯಾಸಿನಿಯಾಗಲು ಮುಂಬೈಗೆ ಹೋಗಲು ಸಿದ್ಧವಾಗಿದ್ದಳಂತೆ ಯುವತಿ: ಬಳಿಕ ಯುವತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಹೈಸ್ಕೂಲ್ ಓದುತ್ತಿರುವಾಗ ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ಕ್ರೈಸ್ತ ಸನ್ಯಾಸಿನಿಯರ ಸೇವೆಯನ್ನು ಕಂಡು ನಾನು ಸಹ ಸನ್ಯಾನಿಯಾಗಬೇಕೆಂಬ ಆಸೆ ಹೊಂದಿದ್ದೆ. ನಂತರ ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿ ಕೋವಿಡ್​​ನಿಂದ ಮೆಡಿಕಲ್ ಸೀಟು ಸಿಗದ ಕಾರಣ ನಂಜಪ್ಪ ಲೈಪ್ ಕೇರ್​​ನಲ್ಲಿ ಫಿಜಿಯೋ‌ಥರೆಪಿ ಓದುತ್ತಿದ್ದೆ. ಇಲ್ಲಿ ಕೇರಳದ ಕ್ರಿಶ್ಚಿಯನ್ ಹುಡುಗಿಯರ ಪರಿಚಯ ಆಗಿತ್ತು. ಇದರಿಂದ ಕ್ರೈಸ್ತ ಸನ್ಯಾಸಿನಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಮುಂಬೈಗೆ ಹೊರಟಿದ್ದೆ ಎಂದು ವಿಚಾರಣೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಬಿ ವೈ ವಿಜಯೇಂದ್ರ ಗೆಲ್ಲದಂತೆ ತೋಟದ ಮನೆಯಲ್ಲಿ ವಾಮಚಾರ ನಡೆಸಲಾಗಿತ್ತು: ಸಂಸದ ಬಿ ವೈ ರಾಘವೇಂದ್ರ

ಶಿವಮೊಗ್ಗದಿಂದ ಮುಂಬೈಗೆ ಹೋಗಲು ಬಸ್​​ ಲಭ್ಯವಾಗದ ಕಾರಣ ಆಕೆ ಮೊದಲು ತೀರ್ಥಹಳ್ಳಿಗೆ ತೆರಳಿ ಅಲ್ಲಿಂದ ಶೃಂಗೇರಿಗೆ ಹೋಗಿದ್ದಾರೆ. ನಂತರ ಶೃಂಗೇರಿಯಿಂದ ಬೆಂಗಳೂರಿಗೆ ಹೋಗಿ, ಅಲ್ಲಿಂದ ಪುನಃ ಹುಬ್ಬಳ್ಳಿ ಹೋಗಿದ್ದಾರೆ. ಹುಬ್ಬಳ್ಳಿಯಲ್ಲಿ ಮುಂಬೈಗೆ ಹೋಗಲು ಟಿಕೆಟ್ ಖರೀದಿ ಮಾಡಿ ಬಸ್​​ಗಾಗಿ ಕಾಯುತ್ತಿರುವ ವೇಳೆ ಪೊಲೀಸರನ್ನು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ವಿಚಾರಣೆಗೆ ಒಳಪಡಿಸಿ, ಬಳಿಕ ಆಪ್ತ ಸಮಾಲೋಚನೆ ನಡೆಸಿ ಪೋಷಕರಿಗೆ ಒಪ್ಪಿಸಿದ್ದಾರೆ.

ಹಣಕ್ಕಾಗಿ ಕಿಡ್ನಾಪ್​​ ಕತೆ ಕಟ್ಟಿದ್ದ ಯುವತಿ: ಮುಂಬೈನಲ್ಲಿ ಕ್ರೈಸ್ತ ಸನ್ಯಾಸಿನಿಯಾಗಲು ಯುವತಿಗೆ ಹಣದ ಅವಶ್ಯಕತೆ ಇದ್ದುದರಿಂದ ನಿಜ ಹೇಳಿದರೆ ಮನೆಯಲ್ಲಿ ಹಣ ನೀಡುವುದಿಲ್ಲ ಎಂದು ತಿಳಿದು ತನ್ನದೆ ಮೊಬೈಲ್​ನಿಂದ ಪೋಷಕರಿಗೆ ಮೆಸ್ಸೇಜ್ ಮಾಡಿ 20 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಸಿಎಂ ಆಯ್ಕೆ ಕಗ್ಗಂಟು; ಸಿದ್ದರಾಮಯ್ಯ ಪರ ದೇವರ ಮೊರೆ ಹೋದ ಕುರುಬ ಸಮುದಾಯ

Last Updated :May 16, 2023, 7:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.