ETV Bharat / state

ಕುಡಿದ ಮತ್ತಿನಲ್ಲಿ ರಸ್ತೆಯಲ್ಲೇ ನಾಲ್ವರಿಂದ ಕಿರಿಕ್​... ಕಾರು-ಬೈಕ್​ ಜಖಂ

author img

By

Published : May 26, 2021, 11:50 PM IST

Four youth fight in road with drunk
Four youth fight in road with drunk

ಕಂಠಪೂರ್ತಿ ಕುಡಿದ ನಾಲ್ವರು ನಡು ರಸ್ತೆಯಲ್ಲೇ ಕಿರಿಕ್ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಶಿವಮೊಗ್ಗ: ಕುಡಿದ ಮತ್ತಿನಲ್ಲಿ‌ ನಾಲ್ವರು ಸ್ನೇಹಿತರು ಕಿರಿಕ್ ನಡೆಸಿ, ಕಾರು-ಬೈಕ್​​ಗಳಿಗೆ ಜಖಂ ಮಾಡಿರುವ ಘಟನೆ ಶಿವಮೊಗ್ಗದ ಹೊರವಲಯ ಸಾಗರ ರಸ್ತೆಯಲ್ಲಿ ನಡೆದಿದೆ.

Four youth fight in road with drunk
ಘಟನಾ ಸ್ಥಳದಲ್ಲಿ ಕೆಲವರು ಗಾಯ

ಶಿವಮೊಗ್ಗದ ಸಾಗರ ರಸ್ತೆಯಲ್ಲಿನ ಪೊಲೀಸ್ ಲೇಔಟ್ ಬಳಿ ವಿನೋಬ್​ನಗರದ ನಾಲ್ವರು ಗೆಳೆಯರು ಕುಡಿದು ರಸ್ತೆಯಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ. ರಸ್ತೆಯಲ್ಲಿ ಬೈಕ್ ಅನ್ನು ಅಡ್ಡಾದಿಡ್ಡಿ ಓಡಿಸುತ್ತಿದ್ದಾಗ ದಾರಿಹೋಕರು ಪ್ರಶ್ನೆ ಮಾಡಿದ್ದಾರೆ.

Four youth fight in road with drunk
ಸ್ಥಳಕ್ಕೆ ಪೊಲೀಸರ ಭೇಟಿ

ಇದನ್ನೂ ಓದಿ: ಪ್ರೇಮ ವಿವಾಹವಾದರೆ 1 ಲಕ್ಷ ರೂ. ದಂಡ; ಕೊಡದಿದ್ದಕ್ಕೆ ಕುಟುಂಬಕ್ಕೆ ಬಹಿಷ್ಕಾರ !

ಈ ವೇಳೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸ್ ಬಡಾವಣೆಯ ನಿವಾಸಿಗಳು ಯುವಕರ ಕೃತ್ಯವನ್ನು ಖಂಡಿಸಿ, ಪ್ರಶ್ನೆ ಮಾಡಿದ್ದಾರೆ. ಈ ವೇಳೆಗಾಗಲೇ ಒಂದು ಕಾರು, ಎರಡು ಬೈಕ್ ಜಖಂಗೊಳಿಸಿದ್ದಾರೆ. ವಿಷಯ ತಿಳಿದು ತುಂಗಾನಗರ ಪೊಲೀಸರು ಸ್ಥಳಕ್ಕಾಗಿಸಿದ್ದಾರೆ. ಪೊಲೀಸರು ಬರುತ್ತಿದ್ದಂತೆ ನಾಲ್ಬರು ಪರಾರಿಯಾಗಲು ಯತ್ನಿಸಿದ್ದಾರೆ. ಇದರಲ್ಲಿ ಆನಂದ ಎಂಬುವನನ್ನು ಬಂಧಿಸಲಾಗಿದೆ. ಉಳಿದ ಮೂವರಿಗೆ ಶೋಧಕಾರ್ಯ ನಡೆಸಲಾಗಿದೆ. ಸದ್ಯ ನಾಲ್ವರ ವಿರುದ್ದ ರಾಬರಿ ಪ್ರಕರಣವನ್ನು ತುಂಗಾನಗರ ಪೊಲೀಸ್​ ಇನ್ಸ್​​ಪೆಕ್ಟರ್​ ದೀಪಕ್ ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.