ETV Bharat / state

ಸಂಪಿಗೆ ಬಿದ್ದು ಪುಟ್ಟ ಕಂದಮ್ಮ ದಾರುಣ ಸಾವು

author img

By

Published : Jan 20, 2021, 1:09 AM IST

child death
child death

ಮನೆ ಮುಂದೆ ಆಟವಾಡುತ್ತಿದ್ದ ಮಗುವೊಂದು ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರಿನ ತೆಂಕಲಕೊಪ್ಪಲಿನಲ್ಲಿ ನಡೆದಿದೆ.

ಮೈಸೂರು: ನಿರ್ಮಾಣ ಹಂತದಲ್ಲಿದ್ದ ಮನೆ ಮುಂದಿನ ಸಂಪಿಗೆ ಬಿದ್ದು ಒಂದೂವರೆ ವರ್ಷದ ಪುಟ್ಟ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ತಾಲೂಕಿನ ತೆಂಕಲಕೊಪ್ಪಲಿನಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ತೆಂಕಲಕೊಪ್ಪಲಿನ ನಟರಾಜ್​ರ ಪುತ್ರ ಒಂದೂವರೆ ವರ್ಷ ದಯಾನಂದ ಸಾವನ್ನಪ್ಪಿರುವ ದುರ್ದೈವಿ. ಮನೆ ಮುಂದೆ ತನ್ನ ಅಕ್ಕನೊಂದಿಗೆ ಆಟವಾಡುತ್ತಿದ್ದ ವೇಳೆ ತಮ್ಮನನ್ನು ಅಲ್ಲೇ ಬಿಟ್ಟು ಅಕ್ಕ ಹೊರಗಡೆ ಹೋಗಿದ್ದಾಳೆ. ಈ ವೇಳೆ ಮಗು ಸಂಪಿಗೆ ಬಿದ್ದಿದ್ದಾನೆ.

ಪೋಷಕರು ಮಗುವನ್ನು ಹುಡುಕಿದಾಗ ಸಂಪಿನಲ್ಲಿ ಬಿದ್ದು ದಾರುಣವಾಗಿ ಸಾವನ್ನಪ್ಪಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.