ಮೈಸೂರು : ಮುಡಾ ಮನೆಯನ್ನು ದುರುಪಯೋಗ ಪಡಿಸಿಕೊಂಡು ಅನಧಿಕೃತವಾಗಿ ವಾಸವಾಗಿದ್ದವರನ್ನು ತೆರವು ಮಾಡಿಸಿ ಸುಮಾರು 75 ಲಕ್ಷ ರೂ.ಮೌಲ್ಯದ ನಿವೇಶನವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಮುಡಾದಿಂದ ಆರ್ಥಿಕ ದುರ್ಬಲ ವರ್ಗದವರಿಗೆ ನಿರ್ಮಿಸಲಾಗಿದ್ದ ರಾಮಕೃಷ್ಣನಗರದ ಐ ಬ್ಲಾಕ್ ಬಡಾವಣೆಯ ಎಂಐಜಿ ಮನೆ ಸಂಖ್ಯೆ 47/ಬಿ ಮನೆಯಲ್ಲಿ ಸುಮಾರು 15 ವರ್ಷಗಳಿಂದ ಕುಮಾರ್ ಕ್ರಾಂತಿ ಎಂಬುವರು ಅನಧಿಕೃತವಾಗಿ ವಾಸವಾಗಿದ್ದರು.
ಬಳಿಕ ಈ ಮನೆಯನ್ನು 2021ರ ಅಕ್ಟೋಬರ್ 16ರಿಂದ ರಘು ಎಂಬುವರಿಗೆ ಮಾಸಿಕ 8 ಸಾವಿರ ರೂ.ಗಳಂತೆ ಬಾಡಿಗೆ ನೀಡಿದ್ದರು. ಆರ್ಥಿಕ ದುರ್ಬಲ ವರ್ಗದವರಿಗೆ ಸಿಗಬೇಕಿದ್ದ ಮನೆಯನ್ನು ಪಡೆದು ದುರುಪಯೋಗ ಪಡಿಸಿಕೊಂಡ ಹಿನ್ನೆಲೆ ಮನೆಯನ್ನು ಮುಡಾ ವಶಕ್ಕೆ ಪಡೆದಿದೆ.
ಮುಡಾ ಆಯುಕ್ತ ಡಾ.ಡಿ.ಬಿ.ನಟೇಶ್ರವರ ನಿರ್ದೇಶನದಂತೆ ಸರಸ್ವತಿಪುರಂ ಪೊಲೀಸ್ ಠಾಣೆ ಅಧಿಕಾರಿಗಳ ರಕ್ಷಣೆಯೊಂದಿಗೆ ತೆರಳಿ ಮನೆಯಲ್ಲಿ ಅನಧಿಕೃತವಾಗಿ ವಾಸವಿದ್ದರನ್ನು ತೆರವುಗೊಳಿಸಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಒಮಿಕ್ರಾನ್ ಅಬ್ಬರ.. ಮೂವರು ಮಕ್ಕಳು ಸೇರಿ 23 ಹೊಸ ಸೋಂಕಿತರು ಪತ್ತೆ..