ETV Bharat / state

ದೂರದೂರಿಗೆ ತಂಗಿ ಮದುವೆ ಮಾಡಿಕೊಟ್ಟಿದ್ದಕ್ಕೆ ಬೇಸತ್ತ ಅಕ್ಕ: ಆತ್ಮಹತ್ಯೆಗೆ ಶರಣು

author img

By

Published : Sep 20, 2021, 9:51 AM IST

mysore
ಅಕ್ಕ ಆತ್ಮಹತ್ಯೆಗೆ ಶರಣು

ದೂರದ ಊರಿಗೆ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿ ಅಕ್ಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು: ದೂರದ ಊರಿಗೆ ತಂಗಿಯನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಮನನೊಂದ ಅಕ್ಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಶ್ರೀರಾಂಪುರ ನಡೆದಿದೆ.

ಲಕ್ಷ್ಮಿ (34) ಮೃತ ದುರ್ದೈವಿ. 12 ವರ್ಷಗಳ ಹಿಂದೆ ಶ್ರೀನಿವಾಸ್ ಎಂಬವರ ಜೊತೆ ವಿವಾಹವಾಗಿದ್ದ ಲಕ್ಷ್ಮಿ, ಕೌಟುಂಬಿಕ ಕಲಹದಿಂದ ಬೇಸತ್ತು ನಾಲ್ಕು ವರ್ಷಗಳಿಂದ ತವರು ಮನೆಯಲ್ಲೇ ವಾಸವಾಗಿದ್ದರು. ಇನ್ನು ತಂಗಿ ಬಿಂದುವಿಗೆ ದೂರದ ಊರಿಗೆ ಮದುವೆ ಮಾಡಬೇಡಿ ಎಂದು ಪೋಷಕರಿಗೆ ಲಕ್ಷ್ಮಿ ಹೇಳಿದ್ದಳು‌.

ಆದರೆ, ಪೋಷಕರು ಮೊದಲ ಮಗಳಾದ ಲಕ್ಷ್ಮೀಯ ವಿರೋಧದ ನಡುವೆಯೂ ಸೆ.16ರಂದು ಚಿಕ್ಕಮಂಗಳೂರಿನ ಕೊಪ್ಪಗೆ ಕೊಟ್ಟು ಎರಡನೇ ಪುತ್ರಿ ಬಿಂದುವಿನ ಮದುವೆ ಮಾಡಿದ್ದರು‌.

ದೂರದ ಊರಿಗೆ ತಂಗಿಯನ್ನ ಮದುವೆ ಮಾಡಿಕೊಟ್ಟಿದ್ದಕ್ಕೆ ಬೇಸತ್ತು ಲಕ್ಷ್ಮಿ ತವರು ಮನೆಯಲ್ಲೇ ನೇಣು ಬಿಗಿದುಕೊಂಡು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.