ETV Bharat / state

ಆನೆಗೊಂದಿ ಆಂಜನೇಯ ದೇಗುಲದ ಬಳಿ ಚಿರತೆ ಮರಿ ಪ್ರತ್ಯಕ್ಷ

author img

By

Published : Jan 14, 2021, 6:35 AM IST

Updated : Jan 14, 2021, 6:56 AM IST

leopard
ಚಿರತೆ ಮರಿ ಪ್ರತ್ಯಕ್ಷ

ಆನೆಗೊಂದಿ ರಸ್ತೆಯ ಕಣಿವೆ ಆಂಜನೇಯ ದೇಗುಲದ ಬಳಿಯ ಬೆಟ್ಟದಲ್ಲಿ ಚಿರತೆ ಮರಿಯೊಂದು ಕಾಣಿಸಿಕೊಂಡಿದ್ದು, ಜನ ಭಯಭೀತರಾಗಿದ್ದಾರೆ.

ಗಂಗಾವತಿ: ಅಂಜನಾದ್ರಿ, ದುರ್ಗಾ ಬೆಟ್ಟ, ವಿರುಪಾಪುರ ಗಡ್ಡೆಯ ಬಳಿಕ ಇದೀಗ ಆನೆಗೊಂದಿ ರಸ್ತೆಯ ಕಣಿವೆ ಆಂಜನೇಯ ದೇಗುಲದ ಬಳಿಯ ಬೆಟ್ಟದಲ್ಲಿ ಸಂಜೆ ಚಿರತೆ ಮರಿಯೊಂದು ಕಾಣಿಸಿಕೊಂಡಿದೆ.

ಬೆಟ್ಟದ ಸಂದಿನಲ್ಲಿ ಚಿರತೆ ಮರಿಯೊಂದು ಓಡಾಡುತ್ತಿರುವುದನ್ನು ಕಂಡ ದಾರಿಹೋಕರು, ಈ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಕಳೆದ ಎರಡು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಹೆಚ್ಚಿರುವ ಚಿರತೆಗಳ ಹಾವಳಿಯಿಂದ ಜನ ಕಂಗೆಟ್ಟಿದ್ದು, ಚಿರತೆ ಸೆರೆಗೆ ಬೋನು ಇರಿಸಲಾಗಿದೆ. ಅಷ್ಟೇ ಅಲ್ಲದೆ, ಸಿಸಿ ಕ್ಯಾಮರಾ ಹಾಗೂ ದ್ರೋಣ್ ಕ್ಯಾಮರಾಗಳನ್ನು ಇಡಲಾಗಿತ್ತು.

ಚಿರತೆ ಮರಿ ಪ್ರತ್ಯಕ್ಷ

ಇನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲ್ ಕ್ಯಾಂಪ್​ನಿಂದ ಆನೆಗಳನ್ನು ತಂದು ಕಾರ್ಯಾಚರಣೆ ಮಾಡಲಾಗಿತ್ತು. ಆದರೆ ಇದು ವಿಫಲವಾಗಿದ್ದು ಸಲಗದ ತಂಡ ಮರಳುತ್ತಿದ್ದಂತೆಯೇ ಮತ್ತೆ ಚಿರತೆ ಹಾವಳಿ ಶುರುವಾಗಿದೆ.

Last Updated :Jan 14, 2021, 6:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.