ETV Bharat / state

ಅನಾರೋಗ್ಯದಿಂದ ಬಳಲುತ್ತಿರುವ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ್​ ಖರ್ಗೆ

author img

By

Published : May 10, 2023, 12:04 PM IST

Priyank Kharge and his wife Shruti cast their votes in kalaburagi
ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿರುವ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ ಪ್ರಿಯಾಂಕ್​ ಖರ್ಗೆ

ಚಿತ್ತಾಪುರ ಮತ ಕ್ಷೇತ್ರದ ಗುಂಡಗುರ್ತಿ ಗ್ರಾಮದಲ್ಲಿ ಪ್ರಿಯಾಂಕ್​ ಖರ್ಗೆ ಮತ್ತು ಅವರ ಪತ್ನಿ ಶೃತಿ ಮತದಾನ ಮಾಡಿದ್ಧಾರೆ.

ಕಲಬುರಗಿ: ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ ತಮ್ಮ ಪತ್ನಿ ಶೃತಿ ಖರ್ಗೆ ಅವರೊಂದಿಗೆ ಆಗಮಿಸಿ ಮತದಾನ ಮಾಡಿದರು. ಗುಂಡಗುರ್ತಿ ಗ್ರಾಮದ ಬೂತ್ ನಂಬರ್ 26ರಲ್ಲಿ ಖರ್ಗೆ ದಂಪತಿ ತಮ್ಮ ಮತ ಹಕ್ಕು ಚಲಾಯಿಸಿದರು.

  • Polling stopped in Booth #178 Chamnur village as the Presiding Officer is prompting/influencing people to vote for BJP.

    — Priyank Kharge / ಪ್ರಿಯಾಂಕ್ ಖರ್ಗೆ (@PriyankKharge) May 10, 2023 " class="align-text-top noRightClick twitterSection" data=" ">

ಹಾಲಿ ಶಾಸಕರಾದ ಪ್ರಿಯಾಂಕ್​ ಖರ್ಗೆ ಅವರ ಪತ್ನಿ ಶೃತಿ ಬ್ರೇನ್ ಟ್ಯೂಮರ್​ನಿಂದ ಬಳಲುತ್ತಿದ್ದಾರೆ. ತೀವ್ರ ಅನಾರೋಗ್ಯದ ನಡುವೆಯೂ ದೆಹಲಿಯಿಂದ ಶೃತಿ ವಿಮಾನದ ಮೂಲಕ ಆಗಮಿಸಿ ಮತದಾನ ಮಾಡಿದ್ದಾರೆ. ಈ ವೇಳೆ ಇಬ್ಬರು ಪುತ್ರರು ಕೂಡ ಜೊತೆಗಿದ್ದರು.

  • ಚಿಂಚೋಳಿ ವಿಧಾನಸಭಾ ಚುನಾವಣೆ ನಿಮಿತ್ಯ ಇಂದು ಕಾಳಗಿ ತಾಲೂಕಿನ ಬೇಡೆಸೂರ್ (ಎಮ್) ತಾಂಡಾದಲ್ಲಿ ನಾನು ಮತಗಟ್ಟೆಗೆ ತೆರಳಿ ಮತಚಲಾಯಿಸಲಾಯಿತು.

    ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ.#karnatakaassemblyelection2023 pic.twitter.com/G6eLWIsMTd

    — Dr. Umesh G Jadhav MPLS (@UmeshJadhav_BJP) May 10, 2023 " class="align-text-top noRightClick twitterSection" data=" ">

ಅಧಿಕಾರಿ ವಿರುದ್ಧ ಆರೋಪ: ಮತ್ತೊಂದೆಡೆ, ಚಿಮನೂರ ಗ್ರಾಮದಲ್ಲಿ ಅಧಿಕಾರಿಯೊಬ್ಬರು ಬಿಜೆಪಿ ಮತ ಹಾಕುವಂತೆ ಜನರಿಗೆ ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿ ಪ್ರಿಯಾಂಕ್​ ಖರ್ಗೆ ಟ್ವೀಟ್​ ಮಾಡಿದ್ಧಾರೆ. ಇದರಿಂದ ಬೂತ್​ ನಂಬರ್​ 178ರಲ್ಲಿ ಮತದಾನ ಪ್ರಕ್ರಿಯೆ ಸ್ಥಗಿತವಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ರಾಜಕೀಯ ನಾಯಕರಿಂದ ಮತದಾನ; ಶೆಟ್ಟರ್​ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ ಮಂಗಳ ಅಂಗಡಿ

ಸಂಸದ ಜಾಧವ್​ ಮತದಾನ: ಚಿಂಚೋಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಳಗಿ ತಾಲೂಕಿನ ಬೇಡೆಸೂರ್ (ಎಂ) ತಾಂಡಾದಲ್ಲಿ ಸಂಸದ ಡಾ.ಉಮೇಶ್ ಜಾಧವ್ ತಮ್ಮ ಹಕ್ಕು ಚಲಾವಣೆ ಮಾಡಿದ್ದಾರೆ. ನಂತರ ಟ್ವೀಟ್​ ಮಾಡಿರುವ ಅವರು, ನಾಡಿನ ಅಭಿವೃದ್ಧಿಗಾಗಿ ನಮ್ಮ ಹಕ್ಕು ಚಲಾಯಿಸಿದ್ದೇವೆ. ಎಲ್ಲರೂ ತಮ್ಮ ಹಕ್ಕು ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಗೆ ಭದ್ರ ಬುನಾದಿ ಹಾಕೋಣ ಎಂದು ಹೇಳಿದ್ದಾರೆ. ಚಿಂಚೋಳಿ ಕ್ಷೇತ್ರದಿಂದ ಪುತ್ರ ಡಾ. ಅವಿನಾಶ್ ಜಾಧವ್ ಕಣದಲ್ಲಿದ್ದಾರೆ.

ಇದನ್ನೂ ಓದಿ: 'ಪ್ರಜಾಪ್ರಭುತ್ವದ ಗೆಲುವಿಗೆ ಮತ ಹಾಕಿ': ಶಿಗ್ಗಾಂವಿಯಲ್ಲಿ ಬೊಮ್ಮಾಯಿ ವೋಟಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.