ETV Bharat / state

SSLC ಪರೀಕ್ಷೆ : ಪ್ರಾಣದ ಹಂಗು ಬಿಟ್ಟು 2ನೇ ಮಹಡಿ ಏರಿ ಕಾಪಿ ಚೀಟಿ ನೀಡಿದ ಯುವಕರು

author img

By

Published : Mar 30, 2022, 3:38 PM IST

2ನೇ ಮಹಡಿ ಏರಿ ಕಾಪಿ ಚೀಟಿ ನೀಡಿದ ಯುವಕರು
2ನೇ ಮಹಡಿ ಏರಿ ಕಾಪಿ ಚೀಟಿ ನೀಡಿದ ಯುವಕರು

ಜಿಲ್ಲೆಯ ಆಳಂದ ಪಟ್ಟಣದ ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರಿಗೆ ಸೇರಿದ ವಿವೇಕ ವರ್ಧಿನಿ ಶಾಲೆಯಲ್ಲಿ ಕೆಲ ಯುವಕರು ಪ್ರಾಣದ ಹಂಗು ತೊರೆದು ಕಟ್ಟಡದ 2ನೇ ಮಹಡಿ ಏರಿ ಹೊರಗಡೆಯಿಂದ ಕಾಪಿ ಚೀಟಿ ನೀಡಿದ್ದಾರೆ..

ಕಲಬುರಗಿ : ಎಸ್ಎಸ್ಎಲ್‌ಸಿ ಎರಡನೇ ದಿನದ ಇಂಗ್ಲಿಷ್ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಯುವಕರು, ಪ್ರಾಣದ ಹಂಗು ತೊರೆದು ಹೊರಗಡೆಯಿಂದ ಕಾಪಿ ಚೀಟಿ ನೀಡುವ ದೃಶ್ಯ, ಜಿಲ್ಲೆಯ ಆಳಂದ ಪಟ್ಟಣದ ಮಾಜಿ ಶಾಸಕ ಬಿ ಆರ್ ಪಾಟೀಲ್ ಅವರಿಗೆ ಸೇರಿದ ವಿವೇಕ ವರ್ಧಿನಿ ಶಾಲೆಯಲ್ಲಿ ಕಂಡು ಬಂದಿದೆ.

ಪೊಲೀಸರು ಸಾಕಷ್ಟು ಬಿಗಿ ಬಂದೋಬಸ್ತ್ ಕೈಗೊಂಡರೂ ಕೆಲ ಹುಡುಗರು ಪ್ರಾಣದ ಹಂಗು ತೊರೆದು, ಎರಡನೇ ಮಹಡಿ ಹತ್ತಿ ಚೀಟಿ ನೀಡಿದ್ದಾರೆ. ಯುವಕರ ದುಸ್ಸಾಸಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.