ETV Bharat / state

ಹುಬ್ಬಳ್ಳಿ: ಕುಡುಗೋಲಿನಿಂದ ಕಡಿದು ಅತ್ತಿಗೆ ಕೊಂದ ಮೈದುನ

author img

By

Published : Sep 8, 2022, 5:54 PM IST

ಕೊಲೆ murder
ಕೊಲೆ

ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಅತ್ತಿಗೆ ಕೊಂದ ಮೈದುನ. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿ: ಹಾಡಹಗಲೇ ಮೈದುನನೇ ಅತ್ತಿಗೆಯನ್ನು ಕುಡುಗೋಲಿನಿಂದ ಕಡಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಕುಂದಗೋಳ ತಾಲೂಕಿನ ಯರಿನಾರಾಯಣಪುರ ಗ್ರಾಮದಲ್ಲಿ ಗುರುವಾರ ನಡೆದಿದೆ. ಮನೆಯಲ್ಲಿನ ಆಂತರಿಕ ಕಲಹ ಅತಿರೇಕಕ್ಕೆ ಹೋಗಿ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.

ಅತ್ತಿಗೆ ಕೊಂದ ಮೈದುನ: ಯರಿನಾರಾಯಣಪುರ ಗ್ರಾಮದ ಸುನಂದಾ ಮೆಣಸಿನಕಾಯಿ (40) ಕೊಲೆಯಾದ ಮಹಿಳೆ. ಮಂಜುನಾಥ ಕೊಲೆ ಮಾಡಿದ ಆರೋಪಿ. ಘಟನೆಗೆ ಅನೈತಿಕ ಸಂಬಂಧವೂ ಕಾರಣ ಎನ್ನಲಾಗುತ್ತಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಂದಗೋಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

(ಇದನ್ನೂ ಓದಿ: ಬೆಳೆ ವಿಮೆ ಪ್ರಿಮಿಯಂ ಹಣ ವರ್ಗಾಯಿಸದ ಬ್ಯಾಂಕ್​ಗೆ 50 ಸಾವಿರ ರೂ ದಂಡ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.