ETV Bharat / state

ಸಿದ್ಧಾರೂಢ ಶ್ರೀಗಳ ಜಾತ್ರೆಯಲ್ಲಿ ಕಳ್ಳರ ಕೈ ಚಳಕ: ಮಾಂಗಲ್ಯ ಸರ ಕದ್ದು ಪರಾರಿ

author img

By

Published : Mar 7, 2022, 8:18 AM IST

hubballi gold chain theft case at siddharudha chariot
ಸಿದ್ದಾರೂಢ ಶ್ರೀಗಳ ಜಾತ್ರೆಯಲ್ಲಿ ಕಳ್ಳರ ಕೈ ಚಳಕ: ಮಾಂಗಲ್ಯ ಸರ ಕದ್ದು ಪರಾರಿ

ಸಿದ್ದಾರೂಢ ರಥೋತ್ಸವಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದು, ಈ ನಡುವೆ ಕಳ್ಳರು ಭಕ್ತರೋರ್ವರ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹುಬ್ಬಳ್ಳಿ : ನಗರದ ಸುಪ್ರಸಿದ್ಧ ಸಿದ್ದಾರೂಢ ಮಠದಲ್ಲಿ ಉಭಯ ಶ್ರೀಗಳ ಕರ್ತೃ ಗದ್ದುಗೆ ದರ್ಶನ ಪಡೆದು ಸಿದ್ದಾರೂಢರ ರಥೋತ್ಸವ ನೋಡಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ಈ ನಡುವೆ ಬಂದ ಭಕ್ತರ ಮಂಗಳ ಸೂತ್ರವನ್ನು ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಕುಟುಂಬದವರ ಜತೆ ರಥೋತ್ಸವಕ್ಕೆ ಬಂದಿದ್ದ ನಾಗಶೆಟ್ಟಿಕೊಪ್ಪದ ವಿಜಯಲಕ್ಷ್ಮಿ ವಾಲಿ ಎಂಬುವರ ಕೊರಳಲ್ಲಿನ 1.80 ಲಕ್ಷ ರೂ ಮೌಲ್ಯದ 40 ಗ್ರಾಂ ಬಂಗಾರದ ಮಾಂಗಲ್ಯ ಸರವನ್ನು ಕಳ್ಳರು ಎಗರಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ಬಾರಿ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ರಥೋತ್ಸವ ನೋಡಲು ಬಂದಿದ್ದು, ಇದನ್ನೆ ಬಂಡವಾಳವಾಗಿಸಿಕೊಂಡ ಕಳ್ಳರು ಮಠದ ಒಳಗೆ, ಹೊರಗೆ ಮತ್ತು ಜನನಿಬಿಡ ಸ್ಥಳದಲ್ಲಿ ಕಳ್ಳರು ಕಳ್ಳತನದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ :Russia - Ukraine War: ರಷ್ಯಾ- ಉಕ್ರೇನ್​ ಯುದ್ಧದ ಭೀತಿ..ರಷ್ಯಾಕ್ಕೆ ಆರ್ಥಿಕ ಹೊಡೆತ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.