ETV Bharat / state

ಸಿದ್ದರಾಮೋತ್ಸವದ ಬಗ್ಗೆ ಕಾಂಗ್ರೆಸ್ ನಲ್ಲಿಯೇ ನಡುಕ ಶುರುವಾಗಿದೆ.. ಶೆಟ್ಟರ್ ಅಪಹಾಸ್ಯ

author img

By

Published : Jul 14, 2022, 6:18 PM IST

former-cm-jagadeesh-shettar-statement-about-siddaramothsava
ಸಿದ್ಧರಾಮೋತ್ಸವದ ಬಗ್ಗೆ ಶೆಟ್ಟರ್ ಅಪಹಾಸ್ಯ: ಕಾಂಗ್ರೆಸ್ ನಲ್ಲಿಯೇ ನಡುಕ ಶುರುವಾಗಿದೆ

ಸಿದ್ದರಾಮೋತ್ಸವ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಶಕ್ತಿ ಪ್ರದರ್ಶನ- ಅವರು ಯಾವುದೇ ಉತ್ಸವ ಮಾಡಿದರೂ ಬಿಜೆಪಿಗೆ ಹಾನಿ ಆಗಲ್ಲ- ಮಾಜಿ ಸಿಎಂ ಜಗದೀಶ್ ಶೆಟ್ಟರ್

ಹುಬ್ಬಳ್ಳಿ : ಅವರು ಸಿದ್ದರಾಮೋತ್ಸವ ಮಾಡುವುದರಿಂದ ಬಿಜೆಪಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅದು ಕಾಂಗ್ರೆಸ್ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಶಕ್ತಿ ಪ್ರದರ್ಶನ. ಅದರ ಬಗ್ಗೆ ನಾವೇಕೆ ತಲೆಕೆಡಿಸಿಕೊಳ್ಳೋಣ. ಏನಾದರೂ ಮಾಡಿಕೊಂಡು ಹಾಳಾಗಲಿ ಎಂದು ಹೇಳಿದ್ದಾರೆ.

ಸಿದ್ದರಾಮೋತ್ಸವದ ಬಗ್ಗೆ ಶೆಟ್ಟರ್ ಅಪಹಾಸ್ಯ: ಕಾಂಗ್ರೆಸ್ ನಲ್ಲಿಯೇ ನಡುಕ ಶುರುವಾಗಿದೆ

ಕಾಂಗ್ರೆಸ್ ಪಕ್ಷಕ್ಕೆ ಈಗಾಗಲೇ ನಡುಕ ಶುರು ಆಗಿದೆ. ಒಂದೇ ರೀತಿಯ ನಿರ್ಧಾರ ಕಾಂಗ್ರೆಸ್ ಪಕ್ಷದಲ್ಲಿಯೇ ಇಲ್ಲ. ಅವರಲ್ಲಿಯೇ ಕಿತ್ತಾಟ ಆರಂಭವಾಗಿದೆ. ಇದರಿಂದ ಬಿಜೆಪಿಗೆ ಯಾವುದೇ ಹಾನಿ ಇಲ್ಲ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ನಡುಕ ಹುಟ್ಟಿದೆ. ಯಾರದೇ ಉತ್ಸವ ಮಾಡಿದರೂ ಕೂಡ ನಮ್ಮ ಅಸ್ತಿತ್ವ ಉಳಿಯಲ್ಲ ಎಂಬ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ನಾವು ತಲೆಕೆಡಿಸಿಕೊಳ್ಳಲ್ಲ. ಅವರೇ ಉತ್ತರ ಕೊಡಬೇಕು ಎಂದು ಶೆಟ್ಟರ್​ ಹೇಳಿದ್ರು.

ಓದಿ : ಬಿಡಿಗಾಸಿನ ನೆರೆ ಪರಿಹಾರಕ್ಕೆ ಬೇಸರ: ಮುಖ್ಯಮಂತ್ರಿಗಳೇ ನಮ್ಮ ಕಷ್ಟ ಕಣ್ಬಿಟ್ಟು ನೋಡಿ ಎಂದ ಜನ

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.