ETV Bharat / state

ಅಕಾಲಿಕ ಮಳೆ: ಧಾರವಾಡದಲ್ಲಿ ನೆಲಕಚ್ಚಿದ ರೈತರ ಬೆಳೆ

author img

By

Published : Feb 22, 2021, 9:28 PM IST

Crop damage due to Rain in Dharwad
ಧಾರವಾಡದಲ್ಲಿ ನೆಲಕಚ್ಚಿದ ರೈತರ ಬೆಳೆ

ಧಾರವಾಡ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ ಹಾನಿ ಸಂಭವಿಸಿದೆ.

ಧಾರವಾಡ : ಕಳೆದ ಎರಡು ದಿನಗಳಿಂದ ಸುರಿದ ಅಕಾಲಿಕ ಮಳೆಗೆ ಜಿಲ್ಲೆಯ ನವಲಗುಂದ ತಾಲೂಕಿನ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತಾಲೂಕಿನ ಗುಡಿಸಾಗರ, ನಾಗನೂರು, ಸೋಟಕನಾಳ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ನೂರಾರು ಎಕರೆಯ ಭತ್ತ, ಕಡಲೆ, ಜೋಳದ ಬೆಳೆಗಳು ನೆಲಕಚ್ಚಿವೆ.

ಕಷ್ಟ ಪಟ್ಟು ಬೆಳೆದ ಬೆಳೆಗೆ ಹಾನಿಯಾಗಿರುವುದರಿಂದ ರೈತರು ನಷ್ಟದ ಭೀತಿಯಲ್ಲಿದ್ದು, ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.