ETV Bharat / state

ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಅಡ್ರೆಸ್​ ಇಲ್ಲದಂಗೆ ಹೋಗುತ್ತೆ : ಜಗದೀಶ್​ ಶೆಟ್ಟರ್

author img

By

Published : Jan 30, 2022, 3:53 PM IST

Jagadish Shettar comment on congress
ಕಾಂಗ್ರೆಸ್​ ವಿರುದ್ಧ ಜಗದೀಶ್​ ಶೆಟ್ಟರ್ ಹೇಳಿಕೆ

ಕೇಂದ್ರ ಬಜೆಟ್ ಕೇವಲ‌ ಒಂದು ರಾಜ್ಯಕ್ಕೆ ಸೀಮಿತ ಇರುವುದಿಲ್ಲ. ಆಯಾ ರಾಜ್ಯಕ್ಕೆ ಏನು ಅನುದಾನ ಕೊಡಬೇಕು. ಅದನ್ನು ಬಜೆಟ್​​​​​ನಲ್ಲಿ ಕೊಡುವ ವಿಶ್ವಾಸವಿದೆ. ವಿಶೇಷವಾಗಿ ನೀರಾವರಿ ಯೋಜನೆಗೆ ಬಜೆಟ್​​​​ನಲ್ಲಿ ಹೆಚ್ಚಿನ ಒತ್ತು ನೀಡಬೇಕು..

ಹುಬ್ಬಳ್ಳಿ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್​​ ಸಿಎಂ ಆಗಬೇಕೆಂಬುವವರಿದ್ದಾರೆ. ಇವರಿಬ್ಬರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಅಧಿಕಾರಕ್ಕೆ ಬರಲಿದೆ ಎಂಬ ಭ್ರಮೆಯಲ್ಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಹೇಳಿದರು.

ಕಾಂಗ್ರೆಸ್​ ವಿರುದ್ಧ ಶಾಸಕ ಜಗದೀಶ್​ ಶೆಟ್ಟರ್ ವ್ಯಂಗ್ಯವಾಡಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಸ್ತಿತ್ವವನ್ನು ಕಳೆದುಕೊಂಡು ನಶಿಸಿ ಹೋಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಪಕ್ಷ ಎಲ್ಲಿದೆ ಎಂದು ದುರ್ಬೀನ್​​ ಹಿಡಿದು ನೋಡಬೇಕಾತ್ತದೆ. ಪಂಚ ರಾಜ್ಯ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಅಡ್ರೆಸ್​ ಇಲ್ಲದಂಗೆ ಹೋಗುತ್ತದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿ ಯುಟಿ ಖಾದರ್ ನೇಮಕ

ಕೇಂದ್ರ ಬಜೆಟ್ ಕೇವಲ‌ ಒಂದು ರಾಜ್ಯಕ್ಕೆ ಸೀಮಿತ ಇರುವುದಿಲ್ಲ. ಆಯಾ ರಾಜ್ಯಕ್ಕೆ ಏನು ಅನುದಾನ ಕೊಡಬೇಕು. ಅದನ್ನು ಬಜೆಟ್​​​​​ನಲ್ಲಿ ಕೊಡುವ ವಿಶ್ವಾಸವಿದೆ. ವಿಶೇಷವಾಗಿ ನೀರಾವರಿ ಯೋಜನೆಗೆ ಬಜೆಟ್​​​​ನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದರು.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.