ETV Bharat / state

ದೊರಕದ ಸರಕಾರಿ ಕಚೇರಿ: ಪಾರಂಪರಿಕ ಬ್ರಿಟಿಷ್ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ

author img

By

Published : Jan 17, 2022, 12:28 PM IST

Minister Angara office open, Minister Angara office open in British building, Minister Angara news, Mangalore news, ಸಚಿವ ಅಂಗಾರ ಕಚೇರಿ ಉದ್ಘಾಟನೆ, ಬ್ರೀಟಿಸ್​ ಬಂಗಲೆಯಲ್ಲಿ ಸಚಿವ ಅಂಗಾರ ಕಚೇರಿ ಉದ್ಘಾಟನೆ, ಸಚಿವ ಅಂಗಾರ ಸುದ್ದಿ, ಮಂಗಳೂರು ಸುದ್ದಿ,
ಬ್ರಿಟಿಷ್ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ

ಸಚಿವ ಅಂಗಾರಗೆ ಸರಕಾರಿ ಕಚೇರಿ ದೊರಕದ ಹಿನ್ನೆಲೆ ಪಾರಂಪರಿಕ ಬ್ರಿಟಿಷ್ ಬಂಗಲೆಯಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ.

ಮಂಗಳೂರು: ಸೂಕ್ತ ಸರಕಾರಿ ಬಂಗಲೆ ದೊರಕದ ಹಿನ್ನೆಲೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ ಅವರು ಬಂದರು ಇಲಾಖೆಯ ಸುಪರ್ದಿಯಲ್ಲಿದ್ದ ಸ್ಟೇಟ್ ಬ್ಯಾಂಕ್ - ರೊಸಾರಿಯೊ ಚರ್ಚ್ ರಸ್ತೆಯಲ್ಲಿರುವ ಪಾರಂಪರಿಕ ಬ್ರಿಟಿಷ್ ಕಾಲದ ಬಂಗಲೆಯಲ್ಲಿ ತಮ್ಮ ಕಚೇರಿ ತೆರೆದಿದ್ದಾರೆ.

Minister Angara office open, Minister Angara office open in British building, Minister Angara news, Mangalore news, ಸಚಿವ ಅಂಗಾರ ಕಚೇರಿ ಉದ್ಘಾಟನೆ, ಬ್ರೀಟಿಸ್​ ಬಂಗಲೆಯಲ್ಲಿ ಸಚಿವ ಅಂಗಾರ ಕಚೇರಿ ಉದ್ಘಾಟನೆ, ಸಚಿವ ಅಂಗಾರ ಸುದ್ದಿ, ಮಂಗಳೂರು ಸುದ್ದಿ,
ಬ್ರಿಟಿಷ್ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ

ಈ ಭವ್ಯ ಬಂಗಲೆ ಬ್ರಿಟಿಷರ ಕಾಲದ ಹಳೆಯ ಬಂದರು ಪ್ರಮುಖ ವಾಣಿಜ್ಯ ಚಟುವಟಿಕೆಯ ಕೇಂದ್ರವಾಗಿತ್ತು. 1918 ರಿಂದ ಈ ಬಂಗಲೆ ಬಂದರು ಅಧಿಕಾರಿಗಳ ನಿವಾಸವಾಗಿತ್ತು. ಮೆರೈನ್ ಬಂಗಲೆ ಎಂದೇ ಪ್ರಖ್ಯಾತವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕ ಬಂದರು ವಿಶ್ವಸ್ಥ ಮಂಡಳಿ (ಪೋರ್ಟ್ ಟ್ರಸ್ಟ್) ವ್ಯಾಪ್ತಿಗೆ ಒಳಪಟ್ಟಿತ್ತು.

ಓದಿ: ಬೆಂಗಳೂರು ಕೋವಿಡ್ ವರದಿ.. ಕೊಂಚ ತಗ್ಗಿದ ಸೋಂಕು

1980 ರ ಬಳಿಕ ಈ ಬಂಗಲೆಯನ್ನು ಬಂದರು ಅಧಿಕಾರಿಗಳು ಬಳಸುತ್ತಿದ್ದರು. ಆದರೆ, ಆ ಬಳಿಕ ನಿರ್ಹಣೆ ಕೊರತೆಯಿಂದ ಕಟ್ಟಡ ಸಂಪೂರ್ಣ ದುರಸ್ತಿ ಇಲ್ಲದೇ ಪಾಳು ಬಿದ್ದಿತ್ತು. ನಗರದ ಮಧ್ಯ ಭಾಗದಲ್ಲಿಯೇ ಇದ್ದರೂ ಈ ಪಾರಂಪರಿಕ ಕಟ್ಟಡ ಸದ್ಬಳಕೆಯಿಲ್ಲದಾಯಿತು. ಇದೀಗ 3 ಲಕ್ಷ ರೂ. ವೆಚ್ಚದಲ್ಲಿ ನವೀಕರಣಗೊಳಿಸಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಎಸ್‌.ಅಂಗಾರ ಅವರ ಕಚೇರಿಯಾಗಿ ಮಾಡಿಕೊಳ್ಳಲಾಗಿದೆ.

Minister Angara office open, Minister Angara office open in British building, Minister Angara news, Mangalore news, ಸಚಿವ ಅಂಗಾರ ಕಚೇರಿ ಉದ್ಘಾಟನೆ, ಬ್ರೀಟಿಸ್​ ಬಂಗಲೆಯಲ್ಲಿ ಸಚಿವ ಅಂಗಾರ ಕಚೇರಿ ಉದ್ಘಾಟನೆ, ಸಚಿವ ಅಂಗಾರ ಸುದ್ದಿ, ಮಂಗಳೂರು ಸುದ್ದಿ,
ಬ್ರಿಟಿಷ್ ಬಂಗಲೆಯಲ್ಲಿ ಕಚೇರಿ ತೆರೆದ ಸಚಿವ ಎಸ್.ಅಂಗಾರ

ಈ ಬಗ್ಗೆ ಮಾತನಾಡಿದ ಎಸ್.ಅಂಗಾರ ಅವರು, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಇಲಾಖೆಯನ್ನು ಪ್ರತ್ಯೇಕವಾಗಿ ಗುರುತಿಸಲ್ಪಡಬೇಕು ಎಂದು ನನ್ನ ಮುಖ್ಯ ಉದ್ದೇಶವಾಗಿದೆ. ಅದಕ್ಕಾಗಿ ಕಚೇರಿ ನಿರ್ಮಾಣ ಮಾಡಲು ಸರಿಯಾದ ಸರಕಾರಿ ಕಟ್ಟಡದ ಹುಡುಕಾಟ ನಡೆಸುತ್ತಿದ್ದೆವು‌.

ಆಗ ಬ್ರಿಟಿಷ್ ಕಾಲದ ಈ ಬಂಗಲೆ ಬಗ್ಗೆ ತಿಳಿದು ಬಂತು‌. ಈಗ ಈ ಕಟ್ಟಡ ಬಂದರು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿದೆ. ಆದ್ದರಿಂದ ಈ ಕಟ್ಟಡ ದುರಸ್ತಿಗೊಳಿಸಿ ನನ್ನ ಕಚೇರಿ ತೆರೆಯಲಾಗಿದೆ ಎಂದು ಹೇಳಿದರು.

ಇನ್ನು ಪ್ರತೀ ಸೋಮವಾರ ಬೆಳಗ್ಗೆಯಿಂದ ಸಂಜೆಯವರೆಗೆ ಈ ಕಚೇರಿಯಲ್ಲಿ ನಾನು ಲಭ್ಯವಿರಲಿದ್ದೇನೆ. ಈ ಮೂಲಕ‌ ಎಲ್ಲ ಮೀನುಗಾರರ ಸಮಸ್ಯೆಯನ್ನು ಈ ಕಚೇರಿಯಲ್ಲಿ ಆಲಿಸಲಿದ್ದೇನೆ.

ಮೀನುಗಾರಿಕೆ ಹಾಗೂ ಬಂದರು ಇಲಾಖೆಗೆ ಸಂಬಂಧಪಟ್ಟ ಸುಮಾರು 28 ಹೊಸ ಯೋಜನೆಗಳನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿ ಕೊಡುವ ಕಾರ್ಯ ಮಾಡಲಿದ್ದೇವೆ. ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರ ಅಭಿವೃದ್ಧಿಗೆ ಬದ್ಧವಾಗಿದೆ. ಆದರೆ, ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರವೂ ಅಗತ್ಯವಿದೆ ಎಂದು ಎಸ್.ಅಂಗಾರ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.