ETV Bharat / state

ಮಂಗಳೂರು: ಲಾಡ್ಜ್ ರೂಂನಲ್ಲಿ ಬೆಂಕಿ, ವ್ಯಕ್ತಿ ಸಜೀವ ದಹನ

author img

By ETV Bharat Karnataka Team

Published : Nov 23, 2023, 11:48 AM IST

Lodge room bed caught fire  youth burnt alive  Mangalore news  ಲಾಡ್ಜ್ ರೂಂನ ಬೆಡ್​ಗೆ ತಗುಲಿದ ಬೆಂಕಿ  ಯುವಕ ಜೀವಂತ ದಹನ  ಮಂಗಳೂರು ನಗರದಲ್ಲಿ ದುರಂತ ಘಟನೆ  ವ್ಯಕ್ತಿಯೊಬ್ಬರು ಬೆಂಕಿಗಾಹುತಿ  ಲಾಡ್ಜ್ ರೂಂನ ಬೆಡ್​ಗೆ ಬೆಂಕಿ ತಗುಲಿ  ಯುವಕನೊಬ್ಬ ಜೀವನಂತ ದಹನ  ಕಂಕನಾಡಿಯ ರೆಸಿಡೆನ್ಸಿ ಗೇಟ್​ ಲಾಡ್ಜ್​
ಲಾಡ್ಜ್ ರೂಂನ ಬೆಡ್​ಗೆ ತಗುಲಿದ ಬೆಂಕಿ, ಯುವಕ ಜೀವಂತ ದಹನ

Mangaluru lodge room caught fire: ಮಂಗಳೂರು ನಗರದ ಲಾಡ್ಜ್​ನಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರು ಬೆಂಕಿ ತಗುಲಿ ಸಜೀವ ದಹನವಾಗಿದ್ದಾರೆ.

ಮಂಗಳೂರು: ಲಾಡ್ಜ್ ರೂಂ ಬೆಡ್​ಗೆ ಬೆಂಕಿ ತಗುಲಿ ಯುವಕ ಜೀವಂತ ದಹನವಾದ ಘಟನೆ ಕಂಕನಾಡಿಯ ರೆಸಿಡೆನ್ಸಿ ಗೇಟ್​ ಲಾಡ್ಜ್​ನಲ್ಲಿ ನಡೆದಿದೆ. ಬೆಂದೂರ್‌ವೆಲ್ ನಿವಾಸಿ ಯಶ್ ರಾಜ್ ಸುವರ್ಣ (43) ಮೃತರು.

ಯಶ್ ರಾಜ್ ಸುವರ್ಣ ನವೆಂಬರ್ 15ರಿಂದ ಹೋಟೆಲ್​ನಲ್ಲಿ ವಾಸವಿದ್ದರು. ನಿನ್ನೆ ರಾತ್ರಿ ಊಟ ಮುಗಿಸಿ ರೂಂಗೆ ಹೋಗಿದ್ದಾರೆ. ರಾತ್ರಿ 12 ಗಂಟೆಯ ಹೊತ್ತಿಗೆ ರೂಂನಿಂದ ಹೊಗೆ ಕಾಣಿಸಿಕೊಂಡಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬೆಂಕಿ ತಗುಲಿ ಅವರು ಸಾವನ್ನಪ್ಪಿದ್ದಾರೆ.

ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇದನ್ನೂ ಓದಿ: ವಿಮಾನದಲ್ಲಿ ಮಹಿಳಾ ಸಹ ಪ್ರಯಾಣಿಕರಿಗೆ ಲೈಂಗಿಕ ಕಿರುಕುಳ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.