ETV Bharat / state

ಮಂಗಳೂರು ಪೊಲೀಸ್ ಕಮೀಷನರ್ ಚೇರ್​ನಲ್ಲಿ ಒಂದು ನಿಮಿಷ ಕುಳಿತ ಪುಟಾಣಿ.. ಪತಿ ನೆನೆದು ಭಾವುಕರಾದ ಮಹಿಳೆ

author img

By

Published : Oct 22, 2022, 3:01 PM IST

Kn_Mng
ಕಮೀಷನರ್ ಚೇರ್ ನಲ್ಲಿ ಕುಳಿತ ಬಾಲಕಿ

ಮೃತ ಪೊಲೀಸ್​ ಅಧಿಕಾರಿಯೊಬ್ಬರ ಮಗಳನ್ನು ಮಂಗಳೂರು ಕಮೀಷನರ್​ ಅವರ ತಮ್ಮ ಚೇರಿನಲ್ಲಿ ಕೂರಿಸಿದ್ದರು. ಇದನ್ನು ಕಂಡು ಬಾಲಕಿಯ ತಾಯಿ ಭಾವುಕರಾದರು.

ಮಂಗಳೂರು: ಮೃತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ಮಂಗಳೂರು ಪೊಲೀಸ್ ಕಮೀಷನರ್ ಅವರ ಚೇರ್​ನಲ್ಲಿ ಒಂದು ನಿಮಿಷ ಕಾಲ ಕುಳಿತ ಮಗಳನ್ನು ಕಂಡು ಮತ್ತು ಅಗಲಿದ ತಮ್ಮ ಪತಿಯನ್ನು ನೆನೆದು ಬಾಲಕಿ ಪ್ರಣೀತಾಳ ತಾಯಿ ಭಾವುಕರಾದ ಪ್ರಸಂಗ ನಡೆಯಿತು.

ನಗರದ ಪಣಂಬೂರಿನಲ್ಲಿ ಕೆಲ ವರ್ಷಗಳ ಹಿಂದೆ ಡಿವೈಎಸ್​ಪಿಯಾಗಿದ್ದ ದಿವಂಗತ ರವಿಕುಮಾರ್ ಅವರ ಪುತ್ರಿ ಪ್ರಣೀತಾ ಕಮೀಷನರ್ ಚೇರ್​ನಲ್ಲಿ ಒಂದು ನಿಮಿಷ ಕಾಲ ಕುಳಿತಿದ್ದಳು. ರವಿಕುಮಾರ್ ಅವರು ಮೈಸೂರಿನಲ್ಲಿ ಲೋಕಾಯುಕ್ತ ಎಸ್​ಪಿಯಾಗಿಯೂ ಸೇವೆ ಸಲ್ಲಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರವಿಕುಮಾರ್​ ಮೃತಪಟ್ಟಿದ್ದರು.

ಕಮೀಷನರ್ ಚೇರ್ ನಲ್ಲಿ ಕುಳಿತ ಬಾಲಕಿ

ಪ್ರಣೀತಾ ಬೆಂಗಳೂರಿನಲ್ಲಿ ಎಲ್​ಕೆಜಿ ಕಲಿಯುತ್ತಿದ್ದಾಳೆ. ಬಾಲಕಿಯ ತಾಯಿಯು ತಮ್ಮ ಪತಿ ರವಿಕುಮಾರ್ ಅವರು ಕೆಲಸ ಮಾಡುತ್ತಿದ್ದ ಕಚೇರಿಯನ್ನು ತೋರಿಸಲೆಂದು ಮಗಳನ್ನು ಮಂಗಳೂರಿಗೆ ಕರೆತಂದಿದ್ದರು. ಕಚೇರಿಗೆ ಬಂದಿದ್ದ ಮೃತ ಪೊಲೀಸ್ ಅಧಿಕಾರಿ ರವಿಕುಮಾರ್ ಅವರ ಪುತ್ರಿಯನ್ನು ಮಂಗಳೂರು ಕಮೀಷನರ್​ ಅವರು ತಮ್ಮ ಚೇರ್​ನಲ್ಲಿ ಕೂರಿಸಿದ್ದರು. ಇದನ್ನು ಕಂಡು ಬಾಲಕಿ ಪ್ರಣೀತಾಳ ತಾಯಿ ಭಾವುಕರಾದರು.

ಇದನ್ನೂ ಓದಿ: ಭಾರತ್​ ಜೋಡೋ ಯಾತ್ರೆಯಲ್ಲಿ ಡ್ರಮ್​ ಬಾರಿಸಿ ಗಮನ ಸೆಳೆದ ಡಿಕೆಶಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.