ETV Bharat / state

ದೇವಾಲಯ ತೆರವು ವಿಚಾರ: ಸರ್ಕಾರದ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ

author img

By

Published : Sep 18, 2021, 1:20 PM IST

Updated : Sep 18, 2021, 2:17 PM IST

hindu-mahasabha-press-meet-in-temple-demolition-issue
ದೇವಾಲಯ ತೆರವು ವಿಚಾರಕ್ಕೆ ಹಿಂದೂ ಮಹಾಸಭಾ ಆಕ್ರೋಶ

ರಾಜ್ಯ ಸರ್ಕಾರವು ತುಘಲಕ್ ಆಡಳಿತ ನಡೆಸುತ್ತಿದ್ದು, ತಾಲಿಬಾನ್​ಗಿಂತಲೂ ಕೀಳುಮಟ್ಟದಲ್ಲಿ ನಡೆದುಕೊಳ್ಳುತ್ತಿದೆ. ನೈತಿಕತೆ ಇಲ್ಲದ ನಾಚಿಕೆಗೇಡಿನ ಸರ್ಕಾರ ಇದಾಗಿದೆ ಎಂದು ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರು: ನಂಜನಗೂಡು ದೇವಾಲಯ ತೆರವು ವಿಚಾರದ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾವು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಅವರು, ಕ್ರಿಶ್ಚಿಯನ್, ಮುಸ್ಲಿಂ ಮತಗಳ ಗಮನದಲ್ಲಿಟ್ಟುಕೊಂಡು, ಅವರ ಓಲೈಕೆ ಮಾಡಲು ದೇವಸ್ಥಾನಗಳನ್ನು ಕೆಡವಲಾಗಿದೆ. ಬಿಜೆಪಿ ಸರ್ಕಾರಕ್ಕೆ ತಾಕತ್ತು, ಎದೆಗಾರಿಕೆ ಇದ್ದರೆ, ಮಸೀದಿ, ಚರ್ಚ್​ಗಳನ್ನು ಒಡೆದು ನೋಡಲಿ. ಅವರು ನಿಮ್ಮನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದರು.

ಸರ್ಕಾರದ ವಿರುದ್ಧ ಹಿಂದೂ ಮಹಾಸಭಾ ಆಕ್ರೋಶ

ದೇವಸ್ಥಾನ ಕೆಡವಿದ ವಿಚಾರಕ್ಕೆ ಅಧಿಕಾರಿಗಳನ್ನು ದೂರಿ ಪ್ರಯೋಜನವಿಲ್ಲ. ರಾಜಕಾರಣಿಗಳು ಹಾಗೂ ಸರ್ಕಾರದ ಸೂಚನೆಯಂತೆ ಕೆಡವಲಾಗಿದೆ. ಇದೊಂದು ಸಣ್ಣ ತಪ್ಪು, ದೇವಸ್ಥಾನ ಕಟ್ಟುತ್ತೇವೆ ಎನ್ನುತ್ತಾರೆ.

ಸರ್ಕಾರದ ದುಡ್ಡಿನಿಂದ ಕಟ್ಟಬೇಡಿ, ಪಕ್ಷದವರ ಆಸ್ತಿ ಮಾರಿ ದೇವಸ್ಥಾನ ಕಟ್ಟಬೇಕು. ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಾಗ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ. ಆದುದರಿಂದ ದೇವಸ್ಥಾನ ಕೆಡವಿದವರ ವಿರುದ್ಧ ಕೊಲೆ ಮೊಕದ್ದಮೆ ಹೂಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರವು ತುಘಲಕ್ ಆಡಳಿತ ನಡೆಸುತ್ತಿದ್ದು, ತಾಲಿಬಾನ್​ಗಿಂತಲೂ ಕೀಳುಮಟ್ಟದಲ್ಲಿ ನಡೆದುಕೊಳ್ಳುತ್ತಿದೆ. ನೈತಿಕತೆ ಇಲ್ಲದ ನಾಚಿಕೆಗೇಡಿನ ಸರ್ಕಾರ ಇದಾಗಿದೆ. ಬಿಜೆಪಿಯು ಬೆನ್ನುಮೂಳೆ ಇಲ್ಲದ ಪಕ್ಷ ಎಂದು ಟೀಕಿಸಿದರು.

ಇದನ್ನೂ ಓದಿ: ಮೈಸೂರು ದೇವಾಲಯ ತೆರವು ವಿವಾದ.. ಸರ್ಕಾರಿ ಜಾಗವೆಂದು ನೀಡಿದ್ದ ವರದಿ ಬಹಿರಂಗ

Last Updated :Sep 18, 2021, 2:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.