ETV Bharat / state

ಈಟಿವಿ ಭಾರತ್ ಇಂಪ್ಯಾಕ್ಟ್​​; ಶಿಕ್ಷಣ ವಂಚಿತ ವಿದ್ಯಾರ್ಥಿಗಳಲ್ಲಿ ಮೂಡಿತು ಆಶಾಕಿರಣ

author img

By

Published : Jul 27, 2020, 10:03 PM IST

ETV Bharat Impact: finally two student got online education felicity in Kadaba
ಈಟಿವಿ ಭಾರತ್ ಇಂಪ್ಯಾಕ್ಟ್​​: ಆನ್​ಲೈನ್​ ಶಿಕ್ಷಣದಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಲ್ಲಿ ಮೂಡಿತು ಆಶಾಕಿರಣ

ಗಗನ ಕುಸುಮದಂತಾಗಿದ್ದ ಆನ್​ಲೈನ್​ ಶಿಕ್ಷಣವನ್ನು ದೊರಕಿಸಿಕೊಡುವಲ್ಲಿ ಈಟಿವಿ ಭಾರತ್ ವರದಿ ಫಲ ನೀಡಿದ್ದು, ಇಬ್ಬರು ವಿದ್ಯಾರ್ಥಿಗಳಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ. ಮನೆಯಲ್ಲಿಯೇ ಆನ್​​ಲೈನ್ ಶಿಕ್ಷಣಕ್ಕೆ ದಾರಿಯಾದಂತಾಗಿದೆ.

ಕಡಬ (ದಕ್ಷಿಣ ಕನ್ನಡ): ಕೋವಿಡ್‌-19 ಕಾರಣದಿಂದಾಗಿ ಶಾಲಾ-ಕಾಲೇಜುಗಳು ಸ್ಥಗಿತಗೊಂಡಿವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಈಗಾಗಲೇ ಆನ್‌ಲೈನ್ ತರಗತಿಗಳು ಆರಂಭಗೊಂಡಿದ್ದು, ಸರ್ಕಾರ ಆನ್‌ಲೈನ್‌ ತರಗತಿಗೆ ಉತ್ತೇಜನ ನೀಡಬೇಕೆಂದು ಸೂಚಿಸುತ್ತಿದೆ. ಆದರೆ ಇದೆಲ್ಲದರ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ವಾಸ್ತವದಲ್ಲಿ ಪರಿಸ್ಥಿತಿ ಬೇರೆಯೇ ಇದೆ.

ಈ ಹಿನ್ನೆಲೆ ಆನ್​ಲೈನ್​ ಶಿಕ್ಷಣದ ಅನಾನುಕೂಲತೆಯ ಕುರಿತಂತೆ ಈಟಿವಿ ಭಾರತ ವರದಿ ಪ್ರಕಟಿಸಿತ್ತು. ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ದೊಡ್ಡಕೊಪ್ಪ ನಿವಾಸಿ ವರುಣ್ ಹಾಗೂ ಲಾವಣ್ಯಾ ಎಂಬ ವಿದ್ಯಾರ್ಥಿಗಳ ಆನ್​​ಲೈನ್ ಕಲಿಕೆಗೆ ಮೂಲ ಸೌಕರ್ಯ ಅಡ್ಡಿಯಾಗಿದ್ದನ್ನು ವರದಿ ಮಾಡಿತ್ತು.

ಇದನ್ನೂ ಓದಿ: ಕಿತ್ತು ತಿನ್ನುವ ಬಡತನ, ಓದುವ ಹಂಬಲ: ಹಣವಿಲ್ಲದೇ ಗ್ರಾಮೀಣ ಮಕ್ಕಳ ಆನ್​ಲೈನ್​ ಶಿಕ್ಷಣ ಬಲಿ!

ಮನೆಯಲ್ಲಿ ಆನ್​ಲೈನ್​​ ತರಗತಿಗೆ ಬೇಕಾದ ಟಿವಿಯಾಗಲೀ, ಸ್ಮಾರ್ಟ್​​ಫೋನ್ ವ್ಯವಸ್ಥೆಯಾಗಲಿ ಇರಲಿಲ್ಲ. ತಂದೆಗೆ ಸಹ ಈ ಸೌಲಭ್ಯ ಕಲ್ಪಿಸಲು ಅನಾರೋಗ್ಯ ಕಾಡುತ್ತಿತ್ತು. ಇಷ್ಟು ಮಾತ್ರವಲ್ಲದೇ ಇವರಿಗೆ ವಾಸಕ್ಕೆ ಒಂದು ಸರಿಯಾದ ಮನೆಯಾಗಲೀ, ಶೌಚಾಲಯವಾಗಲೀ ಇರಲಿಲ್ಲ. ಈ ಬಗ್ಗೆ ಈಟಿವಿ ಭಾರತ ಸವಿವರವಾದ ವರದಿ ಬಿತ್ತರಿಸಿತ್ತು.

ಈಟಿವಿ ಭಾರತ್ ಇಂಪ್ಯಾಕ್ಟ್​​: ಆನ್​ಲೈನ್​ ಶಿಕ್ಷಣದಿಂದ ವಂಚಿತರಾಗಿದ್ದ ವಿದ್ಯಾರ್ಥಿಗಳಲ್ಲಿ ಮೂಡಿತು ಆಶಾಕಿರಣ

ಈ ವರದಿ ಹಿನ್ನೆಲೆ ಈ ವಿದ್ಯಾರ್ಥಿಗಳ ನೆರವಿಗಾಗಿ ಹಲವು ಸಹೃದಯ ದಾನಿಗಳು ಮುಂದೆ ಬರುತ್ತಿದ್ದಾರೆ. ಇದೀಗ ನೆಲ್ಯಾಡಿಯ ಸಂತ ಅಲ್ಫೋನ್ಸಾ ಮತ್ತು ಆರ್ಲ ಸಂತ ಮೇರಿಸ್ ಚರ್ಚಿನ "ಕಿರಿಕುಸುಮ" ಮಿಷನ್ ಲೀಗ್ ಮಕ್ಕಳ ತಂಡವು ರೆವರೆಂಡ್ ಫಾದರ್ ಆದರ್ಶ್ ಜೋಸೆಫ್ ನೇತೃತ್ವದಲ್ಲಿ ವರುಣ್​​ ಕಲಿಕೆಗೆ ಬೇಕಾದ ಸ್ಮಾರ್ಟ್ ಟಿವಿ ನೀಡಿದ್ದಾರೆ.

ಮಾತ್ರವಲ್ಲದೆ ಕಡಬದ ಹಳೆ ವಿದ್ಯಾರ್ಥಿಗಳ ತಂಡವೊಂದು ಸ್ಮಾರ್ಟ್​ಫೋನ್​ವೊಂದನ್ನು ನೀಡಿದೆ. ಇಷ್ಟೂ ಮಾತ್ರವಲ್ಲದೆ ಹಲವಾರು ಜನ ಈ ಕುಟುಂಬದ ಬ್ಯಾಂಕ್ ಖಾತೆ ನಂಬರ್ ಪಡೆದು ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ.

ತಾಲೂಕು ಶಿಕ್ಷಣಾಧಿಕಾರಿಗಳು ಇವರ ಮನೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಇವರ ಸಂಕಷ್ಟಕ್ಕೆ ಪೂರ್ಣ ಪ್ರಮಾಣದ ನೆಮ್ಮದಿ ಸಿಗಬೇಕಾದರೆ ಇವರಿಗೊಂದು ಮನೆ ಹಾಗೂ ಅಗತ್ಯವಾಗಿ ಶೌಚಾಲಯ ವ್ಯವಸ್ಥೆ ಆಗಬೇಕಿದೆ. ಈ ನಿಟ್ಟಿನಲ್ಲಿ ಯಾರಾದರೂ ಸಹೃದಯರು, ಜನಪ್ರತಿನಿಧಿಗಳು ಮುಂದೆ ಬರಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.