ETV Bharat / state

ಬೈಕ್, ಬಸ್ ನಡುವೆ ಅಪಘಾತ: ತರೀಕೆರೆ ಬಳಿ ಸ್ನೇಹಿತರಿಬ್ಬರ ದುರ್ಮರಣ

author img

By

Published : Dec 26, 2019, 7:37 AM IST

road accident
road accident

ಬೈಕ್ ಹಾಗೂ ಕೆಎಸ್​ಆರ್​ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್​ನಲ್ಲಿ ಹೋಗುತ್ತಿದ್ದ ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಚಿಕ್ಕಮಗಳೂರು: ಬೈಕ್ ಹಾಗೂ ಕೆಎಸ್​ಆರ್​ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಸ್ನೇಹಿತರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಚಿದಾನಂದ್ (28) ಮತ್ತು ಶೋಭಾ (30) ಮೃತರು. ಚಿದಾನಂದ್ ಚಿಕ್ಕಮಗಳೂರಿನ ಕೆ.ಆರ್ ಪೇಟೆ ನಿವಾಸಿಯಾಗಿದ್ದು, ಶೋಭಾ ಚಿಕ್ಕಮಗಳೂರಿನ ಟಿಪ್ಪು ನಗರ ನಿವಾಸಿಯಾಗಿದ್ದಾರೆ. ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಅರಮನೆ ಹೊಟೇಲ್ ಮುಂಭಾಗ ಈ ಅಪಘಾತ ಸಂಭವಿಸಿದೆ.

ತರೀಕೆರೆಯಿಂದ ಶಿವಮೊಗ್ಗದ ಕಡೆ ಕೆಎಸ್​ಆರ್​ಟಿಸಿ ಬಸ್ ಹೋಗುತ್ತಿತ್ತು. ಬೈಕ್​ನಲ್ಲಿದ್ದ ಇಬ್ಬರು ಸ್ನೇಹಿತರು ತರೀಕೆರೆ ನಗರಕ್ಕೆ ಬರುವ ವೇಳೆ ಈ ದುರಂತ ನಡೆದಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Intro:Kn_Ckm_02_Accident_death_7202347Body:ಚಿಕ್ಕಮಗಳೂರು :-

ಚಿಕ್ಕಮಗಳೂರಿನಲ್ಲಿ ಬೈಕ್ ಹಾಗೂ ವೋಲ್ವೋ ಕೆ ಎಸ್ ಆರ್ ಟಿ ಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿ ಹೋಗುತ್ತಿದ್ದ ಇಬ್ಬರೂ ಸ್ನೇಹಿತರು ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಅರಮನೆ ಹೊಟೇಲ್ ಮುಂಭಾಗದಲ್ಲಿ ಈ ಅಪಘಾತ ನಡೆದಿದ್ದು ತರೀಕೆರೆ ಯಿಂದಾ ಶಿವಮೊಗ್ಗದ ಕಡೆ ಕೆ ಎಸ್ ಆರ್ ಟಿ ಸಿ ವೋಲ್ವೋ ಬಸ್ ಹೋಗುತ್ತಿತ್ತು. ಬೈಕ್ ನಲ್ಲಿದ್ದ ಇಬ್ಬರೂ ಸ್ನೇಹಿತರು ತರೀಕೆರೆ ನಗರಕ್ಕೆ ಬರುವ ವೇಳೆ ಈ ದುರಂತ ಘಟನೆ ನಡೆದಿದ್ದು ಬೈಕ್ ಹಾಗೂ ಬಸ್ ನಡುವೆ ಈ ಅಫಘಾತ ನಡೆದ ಪರಿಣಾಮ ಇಬ್ಬರೂ ಸ್ನೇಹಿತರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ತರೀಕೆರೆ ಆಸ್ವತ್ರೆಗೆ ಚಿದಾನಂದ್ ಗೆ ರವಾನೆ ಮಾಡಿದ್ದು ಶೋಭ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ವತ್ರೆಗೆ ರವಾನೆ ಮಾಡಲಾಗಿತ್ತದ್ದರೂ ತರೀಕೆರೆಯ ತಾಲೂಕ್ ಆಸ್ವತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಚಿದಾನಂದ್ (28) ಮೃತ ಪಟ್ಟಿದ್ದಾರೆ. ಶೋಭ (30) ಅವರು ಕೂಡ ಚಿಕಿತ್ಸೆ ಫಲಕಾರಿಯಾಗದೇ ಶಿವಮೊಗ್ಗದ ಮೆಗ್ಗಾನ್ ಆಸ್ವತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಚಿದಾನಂದ್ ಚಿಕ್ಕಮಗಳೂರಿನ ಕೆ ಆರ್ ಪೇಟೆ ನಿವಾಸಿಯಾಗಿದ್ದು ಶೋಭ ಚಿಕ್ಕಮಗಳೂರು ನಗರದ ಟಿಪ್ಪು ನಗರ ನಿವಾಸಿಯಾಗಿದ್ದಾರೆ. ತರೀಕೆರೆ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.....

Conclusion:ರಾಜಕುಮಾರ್.....
ಈ ಟಿವಿ ಭಾರತ್.....
ಚಿಕ್ಕಮಗಳೂರು....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.