ETV Bharat / state

ಬೆಟ್ಟದ ಹಳ್ಳಿ ಸಮೀಪದ ಕೆರೆಯಲ್ಲಿ ಪೊಲೀಸ್​ ಪೇದೆಯ ಶವ ಪತ್ತೆ..!

author img

By

Published : Aug 21, 2019, 3:57 AM IST

ಶವ ಪತ್ತೆ

ಬೆಟ್ಟದ ಹಳ್ಳಿ ಸಮೀಪದ ಕೆರೆಯಲ್ಲಿ ಪೊಲೀಸ್ ಪೇದೆಯ ಶವ ಪತ್ತೆಯಾಗಿದ್ದು, ಮೃತ ಪೇದೆಯನ್ನು ಬಿ.ಮಲ್ಲೇಶ್ ಎಂದು ಗುರ್ತಿಸಲಾಗಿದೆ. ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ಚಿಕ್ಕಮಗಳೂರು : ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದ ಹಳ್ಳಿ ಸಮೀಪದ ಕೆರೆಯಲ್ಲಿ ಪೊಲೀಸ್ ಪೇದೆಯ ಶವ ಪತ್ತೆಯಾಗಿದ್ದು, ಮೃತ ಪೇದೆಯನ್ನು ಬಿ.ಮಲ್ಲೇಶ್ ಎಂದು ಗುರ್ತಿಸಲಾಗಿದೆ.

ಪೊಲೀಸ್​ ಪೇದೆಯ ಶವ ಪತ್ತೆ

ಮೃತ ಮಲ್ಲೇಶ್ ಕಡೂರು ತಾಲೂಕಿನ ಜಿ.ಯಾರದಕೆರೆ ಗ್ರಾಮದ ನಿವಾಸಿಯಾಗಿದ್ದಾರೆ. ಬಿ.ಮಲ್ಲೇಶ್ ಉಡುಪಿ ಜಿಲ್ಲೆಯ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತ ಶವವನ್ನು ಕೆರೆಯಿಂದ ಹೊರ ತೆಗೆದಿದ್ದು, ತರೀಕೆರೆಯ ತಾಲೂಕು ಆಸ್ವತ್ರೆಗೆ ರವಾನೆ ಮಾಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Intro:Kn_Ckm_07_Police death_av_7202347Body:

ಚಿಕ್ಕಮಗಳೂರು :-

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪೋಲಿಸ್ ಪೇದೆಯ ಶವ ಕೆರೆಯಲ್ಲಿ ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದ ಹಳ್ಳಿ ಸಮೀಪದ ಕೆರೆಯಲ್ಲಿ ಪೋಲಿಸ್ ಪೇದೆಯ ಶವ ಪತ್ತೆಯಾಗಿದ್ದು ಮೃತ ಪೇದೆಯನ್ನು ಬಿ.ಮಲ್ಲೇಶ್ ಎಂದೂ ಗುರ್ತಿಸಲಾಗಿದೆ. ಬಿ.ಮಲ್ಲೇಶ್ ಪೋಲಿಸ್ ಪೇದೆಯಾಗಿ ಉಡುಪಿ ಜಿಲ್ಲೆಯ ಶಂಕರ ನಾರಯಣ ಪೋಲಿಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗುತ್ತಿದ್ದು ಮೃತ ಮಲ್ಲೇಶ್ ಕಡೂರು ತಾಲೂಕಿನ ಜಿ.ಯಾರದಕೆರೆ ಗ್ರಾಮದ ನಿವಾಸಿಯಾಗಿದ್ದಾರೆ.ತರೀಕೆರೆ ಪೋಲಿಸರು ಸ್ಥಳಕ್ಕೇ ಭೇಟಿ ನೀಡಿ ಮೃತ ಶವವನ್ನು ಕೆರೆ ಯಿಂದಾ ಹೊರ ತೆಗೆದಿದ್ದು ತರೀಕೆರೆಯ ತಾಲೂಕ್ ಆಸ್ವತ್ರೆಗೆ ರವಾನೆ ಮಾಡಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನೆಡೆಸುತ್ತಿದ್ದಾರೆ.....

Conclusion:ರಾಜಕುಮಾರ್....
ಈ ಟಿವಿ ಭಾರತ್.....
ಚಿಕ್ಕಮಗಳೂರು.....
ETV Bharat Logo

Copyright © 2024 Ushodaya Enterprises Pvt. Ltd., All Rights Reserved.