ETV Bharat / state

ದತ್ತಪೀಠ ರಸ್ತೆಯಲ್ಲಿ ಮೊಳೆ ಚೆಲ್ಲಿದ್ದ ಪ್ರಕರಣ.. ಮತ್ತೊಬ್ಬ ಆರೋಪಿ ಕೋರ್ಟಿಗೆ ಶರಣು

author img

By

Published : Dec 18, 2022, 7:13 PM IST

ದತ್ತಪೀಠ ರಸ್ತೆಯಲ್ಲಿ ಮೊಳೆ ಚೆಲ್ಲಿದ್ದ ಪ್ರಕರಣ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಆರೋಪಿಯೋರ್ವ ಕೋರ್ಟಿಗೆ ಶರಣಾಗಿದ್ದಾನೆ.

nails-throwed-in-the-roads-of-dathapeetha-one-accused-surrendered
ದತ್ತಪೀಠ ರಸ್ತೆಯಲ್ಲಿ ಮೊಳೆ ಚೆಲ್ಲಿದ್ದ ಪ್ರಕರಣ : ಮತ್ತೊಬ್ಬ ಆರೋಪಿ ಕೋರ್ಟಿಗೆ ಶರಣು

ಚಿಕ್ಕಮಗಳೂರು : ದತ್ತ ಜಯಂತಿ ಸಂದರ್ಭ ದತ್ತಪೀಠದ ರಸ್ತೆಯಲ್ಲಿ ಮೊಳೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಓರ್ವ ಆರೋಪಿ ಕೋರ್ಟಿಗೆ ಶರಣಾಗಿದ್ದಾನೆ. ಶರಣಾದ ಆರೋಪಿಯನ್ನು ನಗರದ ಗೌರಿ ಕಾಲುವೆ ನಿವಾಸಿ ಆಜಂ ಪಾಷಾ ಎಂದು ಗುರುತಿಸಲಾಗಿದೆ.

ಪ್ರಕರಣ ಸಂಬಂಧ ಈವರೆಗೆ ಮಹಮ್ಮದ್ ಶಹಬಾಸ್, ವಾಹೀದ್ ಹುಸೇನ್ ಎಂಬವರನ್ನು ಬಂಧಿಸಲಾಗಿದ್ದು, ಒಟ್ಟು ಮೂವರನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು ಡಿ. 6,7 ಮತ್ತು 8 ರಂದು ನಡೆದಿದ್ದ ದತ್ತಜಯಂತಿ ಕಾರ್ಯಕ್ರಮದ ವೇಳೆ, ಮೊದಲ ದಿನ ಮಹಿಳೆಯರು ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆ ಹಾಕಿದ್ದರು. ಇದರಿಂದಾಗಿ ಪೊಲೀಸ್ ವಾಹನ ಸೇರಿದಂತೆ ಹಲವು ವಾಹನಗಳು ಪಂಚರ್ ಆಗಿದ್ದವು. ಅಲ್ಲದೆ ಆರೋಪಿಗಳು ಕೃತ್ಯ ಎಸಗಲು ಹಾರ್ಡ್‍ವೇರ್ ಶಾಪ್‍ನಲ್ಲಿ 4 ಕೆ.ಜಿ. ಮೊಳೆಗಳನ್ನು ಖರೀದಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : ದತ್ತಜಯಂತಿ ಸಂಭ್ರಮಕ್ಕೆ ಅಡ್ಡಿಪಡಿಸಲು ರಸ್ತೆಯಲ್ಲಿ ಮೊಳೆ ಚೆಲ್ಲಿದ್ದರು.. ಎಸ್​ಪಿ ಉಮಾ ಪ್ರಶಾಂತ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.