ETV Bharat / state

ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಘೋಷಿಸಲು, ಯಾರು ಉಳಿತಾರೆ,ಯಾರು ಹೋಗ್ತಾರೆ ನೋಡೋಣ : ಸಿಟಿ ರವಿ

author img

By

Published : Jan 26, 2022, 4:05 PM IST

CT Ravi slams against congress at Chikmagalur
ಕಾಂಗ್ರೆಸ್​ ವಿರುದ್ಧ ಸಿಟಿ ರವಿ ವಾಗ್ದಾಳಿ

ಕಾಂಗ್ರೆಸ್​​ನವರಿಗೆ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲಾಗಲಿಲ್ಲ, ಸೆಳೆಯೋದು ಎಲ್ಲಿ ಬಂತು. ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎಂಬುದರ ಕುರಿತಂತೆ ಸಂಶೋಧನಾ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ. ಸುದ್ದಿಯಲ್ಲಿ ಇರಬೇಕು ಎಂದು ಆಗಾಗ ಹೀಗೆ ಹೇಳುತ್ತಿರುತ್ತಾರೆ..

ಚಿಕ್ಕಮಗಳೂರು : ಕಾಂಗ್ರೆಸ್​​ ಪಕ್ಷದಲ್ಲಿ ಸಿಎಂ ಅಭ್ಯರ್ಥಿ ಘೋಷಣೆ ಮಾಡಲಿ ನೋಡೋಣ. ಆಗ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್​ ಇಬ್ಬರಲ್ಲಿ ಒಬ್ಬರು ಹೊರಗೆ ಬರುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

ಕಾಂಗ್ರೆಸ್​ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿರುವುದು..

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅಥವಾ ಡಿ ಕೆ ಶಿವಮಾರ್​ ಇಬ್ಬರಲ್ಲಿ ಒಬ್ಬರನ್ನು ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದ್ರೆ ಸೇಡು ತೀರಿಸಿಕೊಳ್ಳಲು ಪರಮೇಶ್ವರ್ ಅವರೇ ಹೊರಗೆ ಬರುತ್ತಾರೆ.

ಕಾಂಗ್ರೆಸ್​​ನವರಿಗೆ ಪಕ್ಷದ ಶಾಸಕರನ್ನೇ ಉಳಿಸಿಕೊಳ್ಳಲಾಗಲಿಲ್ಲ, ಸೆಳೆಯೋದು ಎಲ್ಲಿ ಬಂತು. ಅವರ ಶಾಸಕರನ್ನೇ ಏಕೆ ಉಳಿಸಿಕೊಳ್ಳಲಾಗಲಿಲ್ಲ ಎಂಬುದರ ಕುರಿತಂತೆ ಸಂಶೋಧನಾ ತಂಡ ರಚನೆ ಮಾಡಿ ಅಧ್ಯಯನ ಮಾಡಲಿ. ಆಗ ಸೆಳೆಯಬಹುದೋ, ಹೋಗುತ್ತಾರೋ, ಬರುತ್ತಾರೋ ಗೊತ್ತಾಗುತ್ತದೆ. ಸುದ್ದಿಯಲ್ಲಿ ಇರಬೇಕು ಎಂದು ಆಗಾಗ ಹೀಗೆ ಹೇಳುತ್ತಿರುತ್ತಾರೆ ಎಂದರು.

ಇದನ್ನೂ ಓದಿ: ಕಡೆಯ ಕ್ಷಣದಲ್ಲಾದರೂ ನಾರಾಯಣಗುರು ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಬಹುದಿತ್ತು: ಡಿಕೆಶಿ

ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ 26 ಜನರನ್ನು ಪಟ್ಟಿ ಮಾಡಿದ್ದೇವೆ. ಪಕ್ಷ ಬಿಡುತ್ತಾರೆ ಎಂದಿದ್ದರು. ಕೊನೆಗೆ ಪಕ್ಷ ಬಿಟ್ಟಿದ್ದು ಯಾರು, ಅದೇ ಕಾಂಗ್ರೆಸ್-ಜೆಡಿಎಸ್‍ನವರು ಎಂದು ವ್ಯಂಗ್ಯವಾಡಿದರು.

ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.