ETV Bharat / state

ವರ್ಷವಾದ್ರೂ ವಿಲೇಯಾಗದ ಸಾವಿರಾರು ಕಡತಗಳು; ಕಂದಾಯ ಅಧಿಕಾರಿ ಅಮಾನತು

author img

By

Published : May 5, 2022, 7:33 AM IST

Chamarajanagar Revenue Branch Head suspended, Chamarajanagar Revenue Branch news, Chamarajanagar news, ಚಾಮರಾಜನಗರ ಕಂದಾಯ ಶಾಖೆಯ ಮುಖ್ಯಸ್ಥೆ ಅಮಾನತು, ಚಾಮರಾಜನಗರ ಕಂದಾಯ ಶಾಖೆ ಸುದ್ದಿ, ಚಾಮರಾಜನಗರ ಸುದ್ದಿ,
ಚಾಮರಾಜನಗರದ ಕಂದಾಯ ಶಾಖೆ ಮುಖ್ಯಸ್ಥೆ ಅಮಾನತು

ವರ್ಷವಾದರೂ ಸಾವಿರಾರು ಕಡತಗಳು ವಿಲೇವಾರಿಯಾಗದ ಆರೋಪದಡಿ ಚಾಮರಾಜನಗರದ ಕಂದಾಯ ಶಾಖೆಯ ಮುಖ್ಯಸ್ಥೆಯನ್ನು ಅಮಾನತು ಮಾಡಲಾಗಿದೆ.

ಚಾಮರಾಜನಗರ: ಸಾವಿರಾರು ಸಂಖ್ಯೆಯ ಕಡತ ವಿಲೇವಾರಿ ಮಾಡದೇ ಸೂಕ್ತ ಸಮಯದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸದ ಗಂಭೀರ ಆರೋಪದಲ್ಲಿ ಚಾಮರಾಜನಗರ ನಗರಸಭೆ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ. ಜಯಶೀಲ ಅಮಾನತುಗೊಂಡ ಅಧಿಕಾರಿ.

Chamarajanagar Revenue Branch Head suspended, Chamarajanagar Revenue Branch news, Chamarajanagar news, ಚಾಮರಾಜನಗರ ಕಂದಾಯ ಶಾಖೆಯ ಮುಖ್ಯಸ್ಥೆ ಅಮಾನತು, ಚಾಮರಾಜನಗರ ಕಂದಾಯ ಶಾಖೆ ಸುದ್ದಿ, ಚಾಮರಾಜನಗರ ಸುದ್ದಿ,
ಡಿಸಿ ಆದೇಶ

ಒಂದು ವರ್ಷಗಳಿಂದ ಇ-ಸ್ವತ್ತು, ಇ-ಆಸ್ತಿ ಹಕ್ಕು ಬದಲಾವಣೆ ಸಂಬಂಧಿಸಿದ 1192 ಕಡತಗಳನ್ನು ವಿಲೇವಾರಿ ಮಾಡದೇ ಉದ್ದೇಶಪೂರ್ವಕ ವಿಳಂಬಧೋರಣೆ ತೋರಿರುವುದು ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಚಾಮರಾಜನಗರ ಡಿಸಿ ಚಾರುಲತಾ ಸೋಮಲ್ ಕಠಿಣ ಕ್ರಮ ಕೈಗೊಂಡಿದ್ದಾರೆ.

Chamarajanagar Revenue Branch Head suspended, Chamarajanagar Revenue Branch news, Chamarajanagar news, ಚಾಮರಾಜನಗರ ಕಂದಾಯ ಶಾಖೆಯ ಮುಖ್ಯಸ್ಥೆ ಅಮಾನತು, ಚಾಮರಾಜನಗರ ಕಂದಾಯ ಶಾಖೆ ಸುದ್ದಿ, ಚಾಮರಾಜನಗರ ಸುದ್ದಿ,

ಇದನ್ನೂ ಓದಿ: ಅಸಹಾಯಕ ಮಹಿಳೆಯಿಂದ ಬಾಡಿ ಮಸಾಜ್: ಪೊಲೀಸ್ ಅಧಿಕಾರಿ ಅಮಾನತು..

ಇ-ಸ್ವತ್ತು ನೀಡಲು ವಿಳಂಬ ನೀತಿ, ಮಧ್ಯವರ್ತಿಗಳ ಹಾವಳಿಯೆಂದು ಸಾರ್ವಜನಿಕರು ನಿರಂತರವಾಗಿ ದೂರು ನೀಡುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಸಭೆಗಳಲ್ಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಖಾದಿ ಗ್ರಾಮೋದ್ಯೋಗ ನಿರ್ದೇಶಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತನಿಖೆ ನಡೆಸಿದೆ. ಸಕಾಲ ವ್ಯವಸ್ಥೆಯನ್ನೇ ಬುಡಮೇಲು ಮಾಡಿ ಉದ್ದೇಶಪೂರ್ವಕವಾಗಿ ಕಡತಗಳನ್ನು ಉಳಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.