ETV Bharat / state

ಹಗರಿಬೊಮ್ಮನಹಳ್ಳಿ: ಲಾರಿ ಹರಿದು ಬೈಕ್​​ ಸವಾರ ಸಾವು

author img

By

Published : Apr 20, 2021, 12:51 PM IST

accident between lorry and bike
ಲಾರಿ ಹರಿದು ಬೈಕ್​​ ಸವಾರ ಸಾವು

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್​ನಲ್ಲಿ ಬೈಕ್​ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಹೊಸಪೇಟೆ (ವಿಜಯನಗರ): ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್​ನಲ್ಲಿ ಬೈಕ್​ ಮೇಲೆ ಲಾರಿ ಹರಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಪಟ್ಟಣದ ನಿವೃತ್ತ ರೇಷ್ಮೆ ಇಲಾಖೆ ನೌಕರ ಸಿ.ಪಂಪಾಪತಿ (65) ಮೃತ ದುರ್ದೈವಿ. ಇವರು ಹಗರಿಬೊಮ್ಮನಹಳ್ಳಿ ಪಟ್ಟಣದ ಬಸವೇಶ್ವರ ಬಜಾರ್​ನಲ್ಲಿ ಸಂಚರಿಸುತ್ತಿದ್ದ ವೇಳೆ ಹಿಂದಿನಿಂದ ಬಂದ ಲಾರಿಯೊಂದು ಬೈಕ್​ ಮೇಲೆಯೇ ಹರಿದಿದೆ. ಲಾರಿ ಕೆಳಗೆ ಬೈಕ್​ ಸಿಲುಕಿಕೊಂಡಿದ್ದರೂ ಕೂಡ ಚಾಲಕ ಗಾಬರಿಯಿಂದ ಮುಂದೆ ಓಡಿಸಿದ್ದು, ಸ್ಥಳೀಯರು ಲಾರಿ ಚಾಲಕನಿಗೆ ಥಳಿಸಿದ್ದಾರೆ.

ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ಡಪ್ಪಿನ್ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೆ.ಆರ್.ಆಸ್ಪತ್ರೆಯ ನಾಲ್ವರು ವೈದ್ಯರಿಗೆ ಕೊರೊನಾ: ಆತಂಕದಲ್ಲಿ ಸಿಬ್ಬಂದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.