ETV Bharat / state

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬಂದ ಹಾಗೆ ಆಗಿದೆ: ಶಾಸಕ ಯತ್ನಾಳ್

author img

By ETV Bharat Karnataka Team

Published : Dec 5, 2023, 5:09 PM IST

Updated : Dec 5, 2023, 5:27 PM IST

Etv Bharatmla-basanagouda-patil-yatnal-reaction-on-state-congress-government
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬಂದ ಹಾಗೆ ಆಗಿದೆ: ಶಾಸಕ ಯತ್ನಾಳ್

ಕಾಂಗ್ರೆಸ್​ ಸರ್ಕಾರ ಉದ್ಧಟತನ ಪ್ರದರ್ಶಿಸಿದರೆ ಲೋಕಸಭೆ ಚುನವಾಣೆಯಲ್ಲಿ 28 ಸ್ಥಾನವನ್ನು ಬಿಜೆಪಿ ಅತೀ ಹೆಚ್ಚು ಮತಗಳಿಂದ ಗೆಲ್ಲುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ

ಬೆಳಗಾವಿ: "ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪಾಕಿಸ್ತಾನ ಸರ್ಕಾರ ಬಂದ ಹಾಗೆ ಆಗಿದೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಕುರಿತು ಪ್ರತಿಕ್ರಿಯಿಸಿದ ಅವರು, "ಎಂಎಲ್‌ಸಿ ಆಗಿರುವ ಸಚಿವರ ಸಹೋದರನ ಮೇಲೆ ಆರೋಪ ಕೇಳಿ ಬಂದಿದೆ. ಇದರ ಬಗ್ಗೆ ತನಿಖೆ ಆಗಬೇಕು. ಬಿಜೆಪಿ ಕಾರ್ತಕರ್ತರು ಹಾಗೂ ಹಿಂದೂ ಕಾರ್ಯಕರ್ತರ ಮೇಲೆ ಕಾಂಗ್ರೆಸ್​ ಸರ್ಕಾರ ಬಂದ ಮೇಲೆ ಹಲ್ಲೆಗಳು ಹೆಚ್ಚಾಗಿವೆ. ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಪಾಕಿಸ್ತಾನದ ಸರ್ಕಾರ ಬಂದ ಹಾಗೆ ಆಗಿದೆ. ಸರ್ಕಾರ ಇದೇ ರೀತಿ ಉದ್ಧಟತನ ಪ್ರದರ್ಶಿಸಿದರೆ ಲೋಕಸಭೆ ಚುನವಾಣೆಯಲ್ಲಿ 28 ಸ್ಥಾನಗಳನ್ನು ಬಿಜೆಪಿ ಅತೀ ಹೆಚ್ಚು ಮತಗಳಿಂದ ಗೆಲ್ಲುತ್ತದೆ" ಎಂದರು.

"ಹಲ್ಲೆ ಸಂಬಂಧ ದಾಖಲೆಗಳು ಇದ್ದರೂ ಪೊಲೀಸರು ಏಕೆ ಕ್ರಮ ತಗೆದುಕೊಳ್ಳುತ್ತಿಲ್ಲ. ಪೊಲೀಸರು ಇಲ್ಲಿನ ಮೇಡಂ ಕೈಗೊಂಬೆ ಆಗಿದ್ದಾರೆ. ದೆಹಲಿ ಮೇಡಂ, ಬೆಳಗಾವಿ ಮೇಡಂ ಎಂಬ ಇಬ್ಬರು ಮೇಡಂಗಳು ಇದ್ದಾರೆ. ಬೆಳಗಾವಿಯಲ್ಲಿ ಏನು ಗೂಂಡಾಗಿರಿ ಪ್ರಾರಂಭ ಮಾಡಿದ್ದಾರೆ, ಅವರ ಅಂತ್ಯ ಆರಂಭವಾಗಿದೆ ಎಂದು ಅವರು ತಿಳಿದುಕೊಳ್ಳಬೇಕು" ಎಂದು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ಯಾರೇ ಮಾಡಿದರೂ ಕ್ರಮ ಆಗಬೇಕು: ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಂಬಂಧಿ ಮೇಲೆ ಲೋಕಾಯುಕ್ತ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, "ಭ್ರಷ್ಟಾಚಾರವನ್ನು ಯಾವ ಪಕ್ಷದವರು ಮಾಡಿದರೂ ಕ್ರಮ ಆಗಬೇಕು. ಭ್ರಷ್ಟಾಚಾರ ಮಾಡಿದವರನ್ನೇ ನಾಯಕರನ್ನಾಗಿ ಮಾಡಿದರೆ ಪ್ರಾಮಾಣಿಕರು ಹೇಗೆ ಇರಲು‌ ಸಾಧ್ಯ?. ಉಮೇಶ್ ಕಂಡಕ್ಟರ್ ಯಾರು ಅಂತ ಗೊತ್ತಿಲ್ವಾ. ಅವರ ಮನೆಯಲ್ಲಿ ಎರಡು ನೋಟ್ ಕೌಂಟಿಂಗ್ ಯಂತ್ರ ಸಿಕ್ಕಿದ್ದು ಗೊತ್ತಿಲ್ವಾ?. ಅವನ ಬಳಿ ಸಾವಿರಾರು ಕೋಟಿ ಹೇಗೆ ಬಂತು. ಎರಡು ನೋಟು ಎಣಿಕೆ ಯಂತ್ರ ಏಕಿತ್ತು? ಅನ್ನೋದರ ಕುರಿತು ತನಿಖೆಯಾಗಬೇಕು. ಈ ಹಣಕ್ಕೆ ಸಂಬಂಧಪಟ್ಟವರನ್ನು ಬಂಧಿಸಬೇಕು" ಎಂದು ಯತ್ನಾಳ್​ ಒತ್ತಾಯಿಸಿದರು.

"ಮಾಧ್ಯಮದವರು ನಿರ್ದಿಷ್ಟವಾಗಿ ಯಡಿಯೂರಪ್ಪ ಅಥವಾ ವಿಜಯೇಂದ್ರ ಎಂದು ಕೇಳಬೇಡಿ. ಭ್ರಷ್ಟರು ಭ್ರಷ್ಟರೇ‌, ನಾನು ಭ್ರಷ್ಟಾಚಾರ ಮಾಡಿದರೆ ಭ್ರಷ್ಟನೇ. ಸನ್ಮಾನ್ಯ ಡಿಕೆ ಶಿವಕುಮಾರ್ ಭ್ರಷ್ಟ ಇದ್ದರೂ ಭ್ರಷ್ಟರೇ. ಯಾರು ಕರ್ನಾಟಕವನ್ನು ಲೂಟಿ ಮಾಡಿ ಲಂಡನ್​, ಸಿಂಗಾಪುರ ಮತ್ತು ದುಬೈನಲ್ಲಿ ಹೂಡಿಕೆ ಮಾಡಿದ್ದಾರೆ. ಅಂತವರ ಮೇಲೆ ತನಿಖೆಯಾಗಬೇಕು, ಅವರು ಜೈಲಿಗೆ ಹೋಗಬೇಕು" ಎಂದು ಹೇಳಿದರು.

ಲಿಂಗಾಯತ ಮಹಾಸಭಾ ಖಾಸಗಿ ಕಂಪನಿಯಾಗಿದೆ: "ಲಿಂಗಾಯತ ಮಹಾಸಭಾ ಈಗ ಖಾಸಗಿ ಕಂಪನಿ ಆಗಿದೆ.‌ ಕರ್ನಾಟಕ ವೀರಶೈವ ಮಹಾಸಭಾ ಇದೆ. ಅದರಲ್ಲಿ ನಾಲ್ಕೈದು ಮಂದಿ ಕಾಂಗ್ರೆಸ್ ನವರೇ ಇದ್ದಾರೆ. ನಮ್ಮ ಸರ್ಕಾರ ಇದ್ದಾಗ ವೀರಶೈವರಿಗೆ ಮೀಸಲಾತಿ ನೀಡಿದ್ದೇವೆ. ಈಗ ಏಕೆ ಕಾಂಗ್ರೆಸ್ ಸರ್ಕಾರ ನ್ಯಾಯ ಒದಗಿಸಿಲ್ಲ. ಮೀಸಲಾತಿ ಸಂಬಂಧ ಲಿಂಗಾಯತ ಒಕ್ಕಲಿಗ ಕಾಂಗ್ರೆಸ್​ ನಾಯಕರು ಏನು ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಪೊಲೀಸರು ನನ್ನನ್ನು ಬಂಧಿಸಲು ಬಂದರೆ ಅವರಿಗೆ ಸಹಕಾರ ಕೊಡುತ್ತೇನೆ: ಚನ್ನರಾಜ ಹಟ್ಟಿಹೊಳಿ

Last Updated :Dec 5, 2023, 5:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.