ETV Bharat / state

ಬೆಳಗಾವಿ ಪಾಲಿಕೆ ಚುನಾವಣೆ: ಸವದಿ ನಿವಾಸಕ್ಕೂ ತೆರಳಿ ಮತಯಾಚಿಸಿದ ಕಾರಜೋಳ

author img

By

Published : Aug 30, 2021, 1:29 PM IST

Belgavi
ಸವದಿ ನಿವಾಸಕ್ಕೂ ತೆರಳಿ ಮತಯಾಚಿಸಿದ ಸಚಿವ ಕಾರಜೋಳ

ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಚುನಾವಣಾ ಪ್ರಚಾರ ನಡೆಸಿದರು.

ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ಮುಖಂಡರು ಮನೆಮನೆಗೆ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ನಗರದ ವಾರ್ಡ್ ನಂಬರ್ 11ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಪ್ರಚಾರ ನಡೆಸಿದ್ದು, ಈ ವೇಳೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಮನೆಗೂ ತೆರಳಿ ಮತ ಕೇಳಿ ಅಚ್ಚರಿ ಮೂಡಿಸಿದರು.

ಬೆಳಗಾವಿಯ ಸದಾಶಿವ ನಗರದಲ್ಲಿರುವ ಲಕ್ಷ್ಮಣ ಸವದಿ ನಿವಾಸಕ್ಕೆ ಕಾರಜೋಳ ಭೇಟಿ ನೀಡಿ ಸವದಿ ಕಿರಿಯ ಪುತ್ರನಿಗೆ ಪ್ರಣಾಳಿಕೆ ಪತ್ರ ನೀಡಿದರು. ಈ ಸಂದರ್ಭದಲ್ಲಿ, ಎಲ್ಲಾ ಮತಗಳನ್ನು ಬಿಜೆಪಿಗೆ ಹಾಕಿಸುವಂತೆ ಸವದಿ ಸಾಹೇಬರಿಗೆ ಹೇಳಿ ಎಂದು ಕಾರಜೋಳ ನಗೆಚಟಾಕಿ ಹಾರಿಸಿದರು.

ಈ ವೇಳೆ ನಿಮ್ಮ ಮೇಲೆ ಡೌಟ್ ಇದೆ. ಅದಕ್ಕೆ ಮತಯಾಚನೆಗೆ ಬಂದಿದ್ದೇವೆ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ಹೇಳಿದ್ದು ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.