ETV Bharat / state

ಕಟಕಟೆಯಲ್ಲಿ ಡಿಕೆಶಿ: ಸೆಪ್ಟೆಂಬರ್​​ 13ರವರೆಗೂ ಇಡಿ ವಶಕ್ಕೆ ನೀಡಿ ಆದೇಶ

author img

By

Published : Sep 4, 2019, 10:06 AM IST

Updated : Sep 4, 2019, 11:40 PM IST

ಕಾಂಗ್ರೆಸ್​​ ಕಾರ್ಯಕರ್ತರಿಂದ ಪ್ರತಿಭಟನೆ

19:12 September 04

ಸೆಪ್ಟೆಂಬರ್​ 13 ರವರೆಗೂ ಇಡಿ ವಶಕ್ಕೆ ನೀಡಿ ಆದೇಶ

  • Delhi's Rouse Avenue court sends Karnataka Congress leader DK Shivakumar to Enforcement Directorate remand till 13th September. (File pic) pic.twitter.com/HD5nLznCjH

    — ANI (@ANI) September 4, 2019 " class="align-text-top noRightClick twitterSection" data=" ">
  • ಡಿಕೆಶಿ ಅವರನ್ನು ಸೆಪ್ಟೆಂಬರ್​ 13ರವರೆಗೂ ಇಡಿ ವಶಕ್ಕೆ ನೀಡಿ ಇಡಿ ವಿಶೇಷ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. 
  • ಡಿಕೆಶಿ ಇಬ್ಬರು ಶ್ರೇಷ್ಠ ವಕೀಲರನ್ನು ನೇಮಕ ಮಾಡಿ ವಾದ ಮಾಡಿದರೂ ಇಡಿ ವಶದಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ
  • ಎರಡೂ ಕಡೆ ವಾದ - ಪ್ರತಿವಾದ ಆಲಿಸಿದ ನ್ಯಾಯಾಲಯ ಪಬ್ಲಿಕ್​ ಪ್ರಾಸಿಕ್ಯೂಟರ್​ ವಾದವನ್ನ ಮನ್ನಣೆ ಮಾಡಿ ಡಿಕೆಶಿ ಅವರನ್ನ 9 ದಿನಗಳ ಕಾಲ ಇಡಿ ವಶಕ್ಕೆ  ಒಪ್ಪಿಸಿ ಆದೇಶ ನೀಡಿದೆ. 
  • ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರಿಂದ ಆದೇಶ
  • ಇನ್ನು ಒಂಭತ್ತು ದಿನಗಳ ಕಾಲ ಡಿಕೆಶಿ ಇಡಿ ಅಧಿಕಾರಿಗಳ ವಶದಲ್ಲಿ ಇರಲಿದ್ದಾರೆ. 

17:43 September 04

ಆದೇಶ ಕಾಯ್ದಿರಿಸಿದ ಕೋರ್ಟ್​

  • ಡಿ.ಕೆ.ಶಿವಕುಮಾರ್ ಪ್ರಕರಣದ ಆದೇಶ ಕಾಯ್ದಿರಿಸಿದ ಕೋರ್ಟ್​

17:40 September 04

ಮತ್ತೆ ಅಭಿಷೇಕ್ ಮನು ಸಿಂಘ್ವಿ ವಾದ

  • ಮತ್ತೆ ವಾದ ಮಂಡಿಸುತ್ತಿರುವ ಅಭಿಷೇಕ್ ಮನು ಸಿಂಘ್ವಿ
  • ಹೈ ಕೋರ್ಟ್​ ಆದೇಶವನ್ನ ಡಿಕೆಶಿ, ಇಡಿ ಗಮನಕ್ಕೆ ತಂದಿದ್ದರು. ಆದರೂ ಇಡಿ ಡಿ.ಕೆ.ಶಿವಕುಮಾರ್ ಅವರನ್ನ ಬಂಧಿಸಿದೆ- ಅಭಿಷೇಕ್ ಮನು ಸಿಂಘ್ವಿ

17:29 September 04

ಒಂದು ವಾರ ಕಾಲಾವಕಾಶ ಕೇಳಿದ ಇಡಿ

  • ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಡಿಕೆಶಿ ಎತ್ತಿರುವ ಆಕ್ಷೇಪಗಳಿಗೆ ಉತ್ತರಿಸಲು ಒಂದು ವಾರ ಕಾಲಾವಕಾಶ ಕೇಳಿದ ಇಡಿ ವಕೀಲರು

17:17 September 04

ಮತ್ತೆ ವಾದ ಮಂಡನೆ ಮಾಡುತ್ತಿರುವ ಕೆ.ಎಂ. ನಟರಾಜ್​

  •  ನಾವು ವಶಕ್ಕೆ ಪಡೆಯಲು ಕೋರ್ಟ್​ ಮುಂದೆ ಅರ್ಜಿಗೆ ಸಹಿ ಹಾಕಿದ್ದೇವೆ. ಕಾನೂನು ಪ್ರಕಾರ ಇದನ್ನು ತಿರಸ್ಕರಿಸಲು ಬರುವುದಿಲ್ಲ - ನಟರಾಜ್​
  • ಕರ್ನಾಟಕ ಹೈಕೋರ್ಟ್​ ಡಿಕೆಶಿ ಅರ್ಜಿಯನ್ನ ವಜಾ ಮಾಡಿದೆ.
  • ಅಕ್ರಮ ಹಣ ವರ್ಗಾವಣೆ ಪಿಎಂಎಲ್​​ಎ ಕಾಯ್ದೆ  ವ್ಯಾಪ್ತಿಗೆ ಬರುತ್ತದೆ: ನಟರಾಜ್​
  • ಇದು ಕೇವಲ ಐಟಿ ಅಪರಾಧವಲ್ಲ. ಐಪಿಸಿ ಸೆಕ್ಷನ 120ಬಿ ಪ್ರಕಾರ ಒಳಸಂಚು ಆರೋಪವೂ ಇದೆ.

17:09 September 04

  • ಪಿಎಂಎಲ್​​​​​ ಕಾಯ್ದೆಯ ಸೆಕ್ಷನ್​​ 50(4) ಪ್ರಕಾರ ಅವರನ್ನ ಬಂಧಿಸುವಂತಿಲ್ಲ; ಹಿರಿಯ ನ್ಯಾಯವಾದಿ ದ್ಯಾನ್​​​ ಕೃಷ್ಣನ್​​
  • 172 ಸಿಆರ್​​ಪಿಸಿ ಪ್ರಕಾರ ಇವರು ಡೈರಿಯನ್ನ ಗುರುತಿಸಿದ್ದಾರೆ. ಆದರೆ ಇದರಲ್ಲಿ ವಿನ್ಯಾಸ ಹಾಗೂ  ಪ್ಯಾರ ನಂಬರ್ ಉಲ್ಲೇಖಿಸಿಲ್ಲ
  • ನನ್ನ ಮನೆ ಸೇರಿದಂತೆ ಎಲ್ಲ ವಿವರಗಳನ್ನ ನಾನು ಘೋಷಿಸಿಕೊಂಡಿದ್ದೇನೆ; ಕೋರ್ಟ್​ ಗಮನಕ್ಕೆ ತಂದ ಡಿಕೆಶಿ ಪರ ವಕೀಲರು

17:03 September 04

ಲೋ ಬಿಪಿ, ಹೈ ಸುಗರ್​​​​​ ಇದೆ.. ದಯವಿಟ್ಟು ಜಾಮೀನು ಮಂಜೂರು ಮಾಡಿ

  • ಡಿಕೆಶಿ ಲೋ ಬಿಪಿಯಿಂದ ಬಳಲುತ್ತಿದ್ದಾರೆ. ಹೈ ಸುಗರ್​ ಇದೆ.   ಅವರಿಗೆ ಔಷಧ ಪಡೆಯುವ ಅಗತ್ಯ ಇದೆ.  ಇದೇ ಕಾರಣದಿಂದ ಇವತ್ತು ಅವರಿಗೆ ಆಹಾರ ನೀಡಲಾಗಿಲ್ಲ: ಕೋರ್ಟ್​ ಗಮನಕ್ಕೆ ತಂದ ಸಿಂಘ್ವಿ 
  • ನನ್ನ ಮನವಿಯನ್ನ ತಿರಸ್ಕರಿಸಿದರೆ, ಒಂದು ನಿಮಿಷಗೂ ತಮಗೆ ಪೊಲೀಸ್​​ ಕಸ್ಟಡಿಗೆ ಕಳುಹಿಸಲು ಸಾಧ್ಯವಾಗುವುದಿಲ್ಲ 
  • ಒಂದೇ ಸಮಯದಲ್ಲಿ ಮೂವರು ವಿಚಾರಣೆ ನಡೆಸಿದ್ದಾರೆ; ಸಿಂಘ್ವಿ ವಾದ

16:54 September 04

ಸಿಂಘ್ವಿ vs ಪಬ್ಲಿಕ್​ ಪ್ರಾಸಿಕ್ಯೂಟರ್​​

  • ಸಂವಿಧಾನದ ಆರ್ಟಿಕಲ್​ 20 ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಅಧಿಕಾರ ನೀಡಿದೆ: ಸಿಂಘ್ವಿ 
  • ನಾನು ಸತ್ಯ ಹೇಳಿಲ್ಲ ಅಂದ ಮಾತ್ರಕ್ಕೆ ಬಂಧಿಸಬಹುದಾ.. ಹಾಗಂತಾ ಪಬ್ಲಿಕ್​ ಪ್ರಾಸಿಕ್ಯೂಟರ್​ ವಾದ ಮಾಡುತ್ತಿದ್ದಾರೆ
  • ಡಿಕೆಶಿ ರಕ್ಷಣೆ ಸಂಬಂಧ ಸಮರ್ಥನೆ ನೀಡುತ್ತಿರುವ ಅಭಿಷೇಕ್​ ಮನು ಸಿಂಘ್ವಿ
  • ಅಭಿಷೇಕ್​ ಮನುಸಿಂಘ್ವಿ ಸ್ವಯಂ ಅಪರಾಧ ಹಾಗೂ ಮೌನ ನಿಷೇದದ ಬಗ್ಗೆ ಇರುವ ತೀರ್ಪುಗಳನ್ನ ಒಮ್ಮೆ ಓದಬೇಕು ; ಸರ್ಕಾರದ ಪರ ವಕೀಲರು 
  • ವಶಕ್ಕೆ ಪಡೆದು ವಿಚಾರಣೆ ನಡೆಸಿ ಪಡೆಯುವ ಹೇಳಿಕೆ ತಪ್ಪೊಪ್ಪಿಗೆ ಆಗಲು ಸಾಧ್ಯವಿಲ್ಲ: ಸಿಂಘ್ವಿ 

16:50 September 04

ಸರಿಯಾದ ಉತ್ತರ ನೀಡದ್ದಕ್ಕೆ ಬಂಧಿಸಿದ್ದೇವೆ ಎಂದು ಸರ್ಕಾರದ ಪರ ವಕೀಲರು

  • ಡಿಕೆಶಿ ವಶಕ್ಕೆ ಪಡೆಯುವ ಇಡಿ ಉದ್ದೇಶ ಸಂಪೂರ್ಣವಾಗಿ ದುರುದ್ದೇಶಪೂರಿತವಾಗಿದೆ
  • ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪಬ್ಲಿಕ್​ ಪ್ರಾಸಿಕ್ಯೂಟರ್​ ಡಿಕೆಶಿ ಯಾವ ಪ್ರಶ್ನೆಗೂ ಸರಿಯಾಗಿ ಉತ್ತರಿಸಿಲ್ಲ, ಸತ್ಯವನ್ನು ಹೇಳುತ್ತಿಲ್ಲ ಹೀಗಾಗಿಯೇ ಬಂಧಿಸಲಾಗಿದೆ ಎಂದು ಕೋರ್ಟ್​ ಗಮನ ಸೆಳೆದರು. 

16:40 September 04

ದಯವಿಟ್ಟು ವಶಕ್ಕೆ ನೀಡುವ ವಿಷಯದ ಬಗ್ಗೆ ವಿವೇಚನೆ ಬಳಿಸಿ... ಕೋರ್ಟ್​​ಗೆ ಸಿಂಘ್ವಿ ಮನವಿ

  • ಈ ಕೇಸ್​​ನಲ್ಲಿ ಬಂಧನ ವಿಶೇಷ ಕಾಲದಲ್ಲಿ ಮಾತ್ರ ಮಾಡಬಹುದು
  • ಆದರೆ ಇದು ಡಿಕೆಶಿಗೆ ಅನ್ವಯ ಆಗಲ್ಲ, ಇಡಿ ವಿಚಾರಣೆಗೆ ಮತ್ತಷ್ಟು ಕಾಲ ವಶಕ್ಕೆ ಪಡೆಯುವ ಅಗತ್ಯವಿಲ್ಲ
  •  ಡಿಕೆಶಿ ಇಡಿ ವಶಕ್ಕೆ ನೀಡುವ ಅವಶ್ಯಕತೆ ಇದೆ ಎಂಬುದನ್ನು ಪರಿಶೀಲಿಸಬೇಕಿದೆ. ಈ ಸಂಬಂಧ ಘನ ನ್ಯಾಯಾಲಯ ತಮ್ಮ ವಿವೇಚನೆ ಬಳಸಬೇಕಿದೆ
  • ಡಿಕೆಶಿ ಪರ ಅಭಿಷೇಕ್​ ಮನು ಸಿಂಘ್ವಿ ವಾದ

16:26 September 04

ಡಿಕೆಶಿ ಪರ ಸಿಂಘ್ವಿ ವಾದ

  • ಆಗಸ್ಟ್​​ 20 ರಂದು ಕರ್ನಾಟಕ ಹೈಕೋರ್ಟ್​​​ ಈ ಬಗ್ಗೆ ಐಟಿ ಸಲ್ಲಿಸಿದ್ದ ಕಂಪ್ಲೇಂಟ್​​​ ಬಗ್ಗೆ ವಿಚಾರಣೆ ನಡೆಸಿ ಸ್ಟೇ ನೀಡಿದೆ
  • ವಿಶೇಷ  ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುತ್ತಿರುವ ಡಿಕೆಶಿ ಪರ ವಕೀಲ ಅಭಿಷೇಕ್​ ಮನು ಸಿಂಘ್ವಿ
  •  2- 08 2017 ರಲ್ಲಿ ಐಟಿ ದಾಳಿ ಮಾಡಿದ್ದ ವೇಳೆ ವಶಪಡಿಸಿಕೊಂಡ ದಾಖಲೆಗಳ ಮೇಲೆ ಈ ಕೇಸ್​ ನಡೆಯುತ್ತಿದೆ
  • ಇಡಿ ಡಿಕೆಶಿ ಅವರನ್ನ ಬಂಧಿಸುವ ಅಗತ್ಯ ಏನಿದೆ? 
  • ನಾಲ್ಕು ದಿನಗಳ ವಿಚಾರಣೆ ನಡೆಸಲಾಗಿದೆ. ಎಲ್ಲ ಪ್ರಶ್ನೆಗಳಿಗೆ ಡಿಕೆಶಿ ಉತ್ತರಿಸಿದ್ದಾರೆ
  • ಇಡಿ ವಿಶೇಷ ನ್ಯಾಯಾಲಯದಲ್ಲಿ ಅಭಿಷೇಕ್​ ಮನು ಸಿಂಘ್ವಿ ವಾದ
  • ಯಾಂತ್ರಿಕವಾಗಿ ಇಡಿ ಡಿಕೆಶಿ ಅವರನ್ನ ಇಡಿ ವಶಕ್ಕೆ ನೀಡಲು ಸಾಧ್ಯವೇ ಇಲ್ಲ
  • ಪಿಎಂಎಲ್​​​ಎ ಕಾಯ್ದೆ  ಐಟಿ ಆ್ಯಕ್ಟ್​​ನ  ಸೆಕ್ಷನ್​​ 276, 278, 279 ಎಲ್ಲೂ ಉಲ್ಲೇಖಿಸಿಲ್ಲ
  • ಈ ಸೆಕ್ಷನ್​ಗಳು ಈ ಕಾಯ್ದೆ ವ್ಯಾಪ್ತಿಗೆ ಬರಲ್ಲ ಹಾಗೂ ಅನ್ವಯ ಆಗಲ್ಲ - ಸಿಂಘ್ವಿ ವಾದ

16:21 September 04

  • Enforcement Directorate seeks 14 days custody of Congress leader DK Shivakumar in connection with the money laundering matter https://t.co/EkxwRvAd5w

    — ANI (@ANI) September 4, 2019 " class="align-text-top noRightClick twitterSection" data=" ">
  • ವಿಶೇಷ ನ್ಯಾಯಾಲಯದ ಮುಂದೆ ಡಿ.ಕೆ ಶಿವಕುಮಾರ್​ ಹಾಜರು
  • 14 ದಿನ ವಶಕ್ಕೆ ನೀಡುವಂತೆ ಇಡಿ ಅಧಿಕಾರಿಗಳಿಂದ ಕೋರ್ಟ್​ಗೆ ಮನವಿ

15:08 September 04

ರಾಜ್ಯಾದ್ಯಂತ ಕಾಂಗ್ರೆಸ್​​ ಕಾರ್ಯಕರ್ತರ ಪ್ರತಿಭಟನೆ
  • ರಾಜ್ಯಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರಿಂದ ಪ್ರತಿಭಟನೆ
  • ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು.
  • ಮಂಡ್ಯದಲ್ಲಿ ಮೋದಿ, ಅಮಿತ್​ ಶಾ ಬ್ಯಾನರ್​ಗೆ ಚಪ್ಪಲಿಯಿಂದ ಹೊಡೆದ ಕಾರ್ಯಕರ್ತರು.
  • ಡಿ.ಕೆ. ಶಿವಕುಮಾರ್​​ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ.

14:37 September 04

ಕೆಎಸ್ಆರ್​​ಟಿಸಿ ಬಸ್​​ಗೆ ಕಲ್ಲು
  • ಗೌರಿಬಿದನೂರಿನ ಕಡೆ ಹೊರಟಿದ್ದ ಕೆಎಸ್ಆರ್​​ಟಿಸಿ ಬಸ್​ಗೆ ಕಲ್ಲು ಎಸೆದ ಪ್ರತಿಭಟನಕಾರರು.
  • ಬೆಂಗಳೂರಿನ ಆನಂದರಾವ್ ವೃತ್ತ ಸಮೀಪದ ಕಾಂಗ್ರೆಸ್ ಭವನ ಮುಂಭಾಗ ಘಟನೆ.
  • ಗೌರಿಬಿದನೂರು ಡಿಪೋಗೆ ಸೇರಿದ್ದ ಕೆಎ 40 ಎಫ್ 1334 ಸಂಖ್ಯೆಯ ಬಸ್ 
  • ಬಸ್​​ನಲ್ಲಿ ಐವರು ಪ್ರಯಾಣಿಕರಿದ್ದರು ಎಂದು ತಿಳಿಸಿದ ಪೊಲೀಸರು. 
  • ಕಾಂಗ್ರೆಸ್ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ವಾಪಾಸ್​​ ಆಗುವಾಗ ಈ ಕೃತ್ಯ ನಡೆಸಿದ ದುಷ್ಕರ್ಮಿಗಳು.

14:17 September 04

ಪ್ರತಿಭಟನೆ ವೇಳೆ ಬೆಂಕಿ ತಗುಲಿ ಐವರಿಗೆ ಗಾಯ
  • 'ಕೈ' ಕಾರ್ಯಕರ್ತರ ಪ್ರತಿಭಟನೆ ವೇಳೆ ಬೆಂಕಿ ತಗುಲಿ ಐವರಿಗೆ ಗಾಯ.
  • ಟೈರ್​​ಗೆ ಬೆಂಕಿ ಹಚ್ಚುವಾಗ 5 ಜನ ಕಾರ್ಯಕರ್ತರು ಹಾಗೂ ಒರ್ವ ಪೊಲೀಸ್ ಪೇದೆಗೆ ಬೆಂಕಿ.
  • ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ನೆಹರು ವೃತ್ತದಲ್ಲಿ ಘಟನೆ.
  • ಚಳ್ಳಕೆರೆ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲು.
  • ಪೊಲೀಸ್ ಪೇದೆ ಅಣ್ಣಪ್ಪ ಅವರ ಕೈ ಮತ್ತು ಕಿವಿ ಭಾಗಕ್ಕೆ ತಗುಲಿದ ಬೆಂಕಿ.

13:11 September 04

ಬೈಕ್​ಗೆ ಬೆಂಕಿ ಹಚ್ಚಿದ ಕಾರ್ಯಕರ್ತರು
  • ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ರಾಮನಗರದಲ್ಲಿ ಹೊತ್ತಿ ಉರಿದ ಎರಡು ಬೈಕ್​​ಗಳು. 
  • ಪ್ರತಿಭಟನೆ ಮಾಡುವ ವೇಳೆ ಎರಡು ಬೈಕ್​ಗಳನ್ನು ಸುಟ್ಟು ಹಾಕಿದ ಕಾರ್ಯಕರ್ತರು.
  • ಕನಕಪುರ ತಾಲೂಕಿನ ಸಾತನೂರಿನ ರಸ್ತೆಯಲ್ಲಿ ನಡೆದ ಘಟನೆ.
  • ಜಿಲ್ಲಾ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರಿಂದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ.
  • ಶಿಢ್ಲಘಟ್ಟ ವೃತ್ತದಲ್ಲಿ ರಸ್ತೆ ತಡೆದ ಕಾರ್ಯಕರ್ತರು.
  • ಬೆಳಗಾವಿ ಜಿಲ್ಲಾ ಹಾಗೂ ಮಹಾನಗರ ಕಾಂಗ್ರೆಸ್ ‌ಘಟಕದ ವತಿಯಿಂದ ಪ್ರತಿಭಟನೆ.
  • ಟೈಯರ್​​ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.
  • ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ.
  • ಡಿ.ಕೆ. ಶಿವಕುಮಾರ್​​ ಅವರನ್ನು ಬಂಧಿಸಿ, ಯಾರನ್ನು ಹಿರೋ ಮಾಡುವ ಅವಶ್ಯಕತೆ ಬಿಜೆಪಿಗಿಲ್ಲ- ಸಚಿವ ಜೆ.ಸಿ. ಮಾಧುಸ್ವಾಮಿ
  • ಬಿಜೆಪಿ ಯಾವತ್ತಿಗೂ ದ್ವೇಷದ ರಾಜಕಾರಣ ಮಾಡಿಲ್ಲ.

12:49 September 04

ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬಂಧನ
  • ಮೈಸೂರಿನಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಬಂಧಿಸಿದ ಪೊಲೀಸರು.
  • ಮೈಸೂರು-ಊಟಿ ಹೆದ್ದಾರಿಯ ಗುಂಡೂರಾವ್ ನಗರದ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದ ಮಾಜಿ ಶಾಸಕ.
  • ಕಾಂಗ್ರೆಸ್​​ನ ಪ್ರಬಲ ನಾಯಕರನ್ನು ಬೆದರಿಸಲು ಬಿಜೆಪಿ ಈ ರೀತಿ ಮಾಡುತ್ತಿದೆ- ಮಾಜಿ ಶಾಸಕ ಎಂ.ಕೆ. ಸೋಮಶೇಖರ್ 
  • ಗಣಿನಾಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ.
  • ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಎಸ್. ಮಹಮ್ಮದ್ ರಫೀಕ್ ನೇತೃತ್ವದಲ್ಲಿ ಪ್ರತಿಭಟನೆ.

12:48 September 04

bangalore
ಬಿಎಂಟಿಸಿ ಬಸ್​​​ಗೆ ಬೆಂಕಿ
  • ಬೆಂಗಳೂರಿನಲ್ಲಿ ಬಿಎಂಟಿಸಿ  ಬಸ್​​​ಗೆ ಬೆಂಕಿ ಹಚ್ಚಿ ವಿಕೃತಿ ಮೆರೆದ ದುಷ್ಕರ್ಮಿಗಳು.
  • ಸುಮ್ಮನಹಳ್ಳಿಯ ಔಟರ್​ರಿಂಗ್ ರೋಡ್​ನಲ್ಲಿ ಬಿಎಂಟಿಸಿ  ಬಸ್​ಗೆ ಬೆಂಕಿ.
  • ಕೂಡಲೇ ಬೆಂಕಿಯನ್ನು ನಂದಿಸಿದ ಅಗ್ನಿಶಾಮಕ ದಳ ಸಿಬ್ಬಂದಿ.
  • ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು.

12:10 September 04

ರಾಜಕೀಯ ಸೇಡಿನಿಂದ ಅರೆಸ್ಟ್-ಸಿದ್ದರಾಮಯ್ಯ
  • ಕಾಂಗ್ರೆಸ್ ಪಕ್ಷ ಡಿ.ಕೆ. ಶಿವಕುಮಾರ್​​ ಪರ ಕಾನೂನಾತ್ಮಕವಾಗಿ  ಹೋರಾಟ ​ಮಾಡುತ್ತದೆ- ಸಿದ್ದರಾಮಯ್ಯ
  • ಡಿಕೆಶಿ ಅವರನ್ನು ಅರೆಸ್ಟ್​​ ಮಾಡುವ ಅಗತ್ಯವಿರಲಿಲ್ಲ, ರಾಜಕೀಯ ಸೇಡಿನಿಂದ ಅರೆಸ್ಟ್ ಮಾಡಲಾಗಿದೆ.
  • ಚಿದಂಬರಂ ಹಾಗೂ ಡಿಕೆಶಿ ಇಬ್ಬರನ್ನೂ ಅರೆಸ್ಟ್ ಮಾಡಿದ್ದು ರಾಜಕೀಯ ದುರುದ್ದೇಶ.
  • ಇದು ವಿರೋಧ ಪಕ್ಷದವರನ್ನು ಮುಗಿಸುವ ಹುನ್ನಾರ.
  • ಬಿಜೆಪಿಯವರೇ ಈ ಕೆಲಸಗಳನ್ನು ಮಾಡಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
  • ಕೂಡಲೇ ಡಿಕೆಶಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮಂಡ್ಯದಲ್ಲಿ ಕಾರ್ಯಕರ್ತರ ಪ್ರತಿಭಟನೆ.
  • ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗಂಗಾಧರ್, ಮಾಜಿ ಶಾಸಕ ಆತ್ಮಾನಂದ ಸೇರಿದಂತೆ ನಗರಸಭೆ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿ.
  • ಪಿಎಂ ನರೇಂದ್ರ ಮೋದಿ ಹಾಗೂ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಮಂಡ್ಯದಲ್ಲಿ ಆಕ್ರೋಶ.
  • ಧಾರವಾಡ ಜಿಲ್ಲಾಧಿಕಾರಿ ಎದುರು ಪ್ರತಿಭಟನೆ.
  • ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ.

11:52 September 04

mangalore
ಖಾಸಗಿ ಬಸ್​​​ಗಳಿಗೆ ಕಲ್ಲು ತೂರಾಟ
  • ಮಂಗಳೂರು ತಾಲೂಕಿನ ಹಲವೆಡೆ ಖಾಸಗಿ ಬಸ್​​​ಗಳಿಗೆ ಕಲ್ಲು ತೂರಾಟ.
  • ನಂದಿಗುಡ್ಡ, ಫಳ್ನೀರ್, ಬಟ್ಟಕೋಡಿ, ಕಿನ್ನಿಗೋಳಿ, ಕಟೀಲ್​ನಲ್ಲಿ ಬಸ್​​ಗಳ ಮೇಲೆ ಕಲ್ಲು 
  • ಡಿಕಿಶಿ ಬಂಧನ ಖಂಡಿಸಿ ಕಲ್ಲು ತೂರಾಟ ನಡೆಸಿರುವ ದುಷ್ಕರ್ಮಿಗಳು.

11:48 September 04

ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯರಿಂದ ಪೂಜೆ
  • ಡಿಕೆಶಿ ಕ್ಷೇಮವಾಗಿರಲೆಂದು ಕನಕಪುರದ ಶಕ್ತಿ ದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಮಹಿಳೆಯರಿಂದ ಪೂಜೆ.
  • ಡಿಕೆಶಿ ಅವರ ಮನೆ ದೇವರು ಕೆಂಕೇರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ.
  • ಕನಕಪುರ ಟೌನ್​​​​ನಲ್ಲಿರುವ ಕೆಂಕೇರಮ್ಮ ದೇವಾಲಯ.

11:24 September 04

dkshi
ಕಾರ್ಯಕರ್ತರಿಂದ ಕೇಶಮುಂಡನ
  • ಡಿಕೆಶಿ ಬಂಧನ ಖಂಡಿಸಿ ಕನಕಪುರ ತಾಲೂಕಿನ ಸ್ವಗ್ರಾಮ ದೊಡ್ಡಾಲಹಳ್ಳಿಯ ಕೇಶಮುಂಡನ.
  • ಗ್ರಾಮದ ಗವಿಯಣ್ಣ ಮತ್ತು ಚಿಕ್ಕೈದೇಗೌಡ ಅವರಿಂದ ಕೇಶಮುಂಡನ

11:23 September 04

ಬಿಜೆಪಿಗೆ ಸೇರಿದ ಕಚೇರಿಗಳಿಗೆ ಭದ್ರತೆ
  • ಬೆಳ್ಳಂಬೆಳಗ್ಗೆ ಬಸ್​​ಗೆ ಬೆಂಕಿ, ಕಲ್ಲು ಹೊಡೆಯಲು ಮುಂದಾದ ದುಷ್ಕರ್ಮಿಗಳು.
  • ಬಿಜೆಪಿಗೆ ಸೇರಿದ ಪ್ರಮುಖ ಕಚೇರಿಗಳಿಗೆ ಹೆಚ್ಚಿನ ಭದ್ರತೆ.
  • ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಬಿಜೆಪಿಯ ಮಲ್ಲೇಶ್ವರಂ ಕಚೇರಿಗೆ ಭದ್ರತೆ.
  • ಇಬ್ಬರು ಎಸಿಪಿ, 5 ಇನ್​​ಸ್ಪೆಕ್ಟರ್, 15 ಎಸ್ಐ, 200 ಪೊಲೀಸ್ ಸಿಬ್ಬಂದಿ, ಎರಡು ಕೆಎಸ್​​ಆರ್​​​ಪಿ, ಒಂದು ಅಗ್ನಿಶಾಮಕದಳ ವಾಹನ ಸ್ಥಳದಲ್ಲಿ‌ ಮೊಕ್ಕಂ.

10:51 September 04

ಮಾಜಿ ಸಿಎಂ ಸಿದ್ದರಾಮಯ್ಯ
  • ಡಿಕೆಶಿ ಬಂಧನ ಕಾನೂನುಬಾಹಿರ, ಅವರೊಂದಿಗೆ ನಾವಿದ್ದೇವೆ: ಮಾಜಿ ಸಿಎಂ ಸಿದ್ದರಾಮಯ್ಯ
  • ನಾಲ್ಕು ದಿನ ವಿಚಾರಣೆ ಮಾಡಿ, ದಸ್ತಗಿರಿ ಮಾಡೋದು ಸರಿಯಲ್ಲ.
  • ಕೇಂದ್ರ ಸರ್ಕಾರ ಕಾಂಗ್ರೆಸ್​ ಮುಖಂಡರನ್ನು ಟಾರ್ಗೆಟ್​ ಮಾಡಿದ್ರೆ, ಕಾಂಗ್ರೆಸ್​​ ಅದಕ್ಕೆಲ್ಲಾ ಹೆದರಲ್ಲ- ಸಿದ್ದರಾಮಯ್ಯ
  • ಕನಕಪುರ ತಾಲೂಕಿನಲ್ಲಿ ಒಂದು ಬಸ್​ಗೆ ಬೆಂಕಿ,10 ಬಸ್​​ಗಳ ಮೇಲೆ ಕಲ್ಲು ತೂರಾಟ. 11 ಕೆಎಸ್​​ಆರ್​​​ಟಿಸಿ ಬಸ್​​ ಜಖಂ.

10:26 September 04

ಗೃಹ ಸಚಿವ ಬಸವರಾಜ್ ಬೊಮ್ಮಾಯಿ
  • ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳಿಗೆ ಸೂಚನೆ- ಗೃಹ ಸಚಿವ
  • ಕೆಲಹೊತ್ತಿನಲ್ಲಿ ಹಿರಿಯ ಪೊಲೀಸ್​ ಅಧಿಕಾರಿಗಳೊಂದಿಗೆ ಬಸವರಾಜ್ ಬೊಮ್ಮಾಯಿ ಸಭೆ.
  • ಶಾಂತಿಯುತ ಪ್ರತಿಭಟನೆ ಮಾಡಲು ಮನವಿ ಮಾಡಿದ ಗೃಹಸಚಿವರು
  • ಇಡಿ-ಐಟಿ ದಾಳಿ ರಾಜಕೀಯ ಪ್ರೇರಿತ ಎಂದ್ರೆ ತಪ್ಪಾಗುತ್ತೆ- ಡಿಸಿಎಂ ಗೋವಿಂದ ಕಾರಜೋಳ.
  • ರಾಮನಗರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು.
  • ಅಮಿತ್ ಶಾ, ಮೋದಿ ಅಣುಕು ಶವಯಾತ್ರೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು.
  • ಪೊಲೀಸ್ ಐಜಿಪಿ ಶರತ್ ಚಂದ್ರ ಅವರು ಕನಕಪುರಕ್ಕೆ ಪ್ರಯಾಣ.
  • ಬೆಂಗಳೂರು -ಮೈಸೂರು ಹೆದ್ದಾರಿ ಮಾರ್ಗವಾಗಿ ಕನಕಪುರಕ್ಕೆ ಪ್ರಯಾಣಿಸಿದ ಐಜಿಪಿ.
  • ಕನಕಪುರದಲ್ಲಿ ಪ್ರತಿಭಟನೆ ಬಿಸಿ ಹೆಚ್ಚಾದ ಹಿನ್ನೆಲೆ ಪರಿಸ್ಥಿತಿ‌ ನಿಯಂತ್ರಿಸಲು ಖುದ್ದು ತೆರಳಿದ ಐಜಿಪಿ.

09:39 September 04

ಕಟಕಟೆಯಲ್ಲಿ ಡಿಕೆಶಿ: ಸೆಪ್ಟೆಂಬರ್​​ 13ರವರೆಗೂ ಇಡಿ ವಶಕ್ಕೆ ನೀಡಿ ಆದೇಶ

ಕಾಂಗ್ರೆಸ್​​ ಕಾರ್ಯಕರ್ತರಿಂದ ಪ್ರತಿಭಟನೆ
  • ಮಾಜಿ ಸಚಿವ ಡಿ.ಕೆ. ಶಿವಕುಮಾರ್​ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ ಹಿನ್ನೆಲೆ ರಾಜ್ಯಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
  • ಡಿಕೆಶಿ ತವರು ಜಿಲ್ಲೆಯಾದ ರಾಮನಗರದಲ್ಲಿ ಪರಿಸ್ಥಿತಿ ಉದ್ವಿಗ್ನ.
  • ರಾಮನಗರದಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ.
  • ಇಂದಿನಿಂದ ಮೂರು ದಿನಗಳ ಕಾಲ ಮದ್ಯ ಮಾರಾಟ‌ ನಿಷೇಧ.
  • ಮಂಡ್ಯದ ಮಳವಳ್ಳಿ ತಾಲೂಕಿನ ಹಲಗೂರು, ದಳವಾಯಿ ಕೋಡಿಹಳ್ಳಿಯಲ್ಲಿ ಪ್ರತಿಭಟನೆ.
  • ಮೈಸೂರು- ಕನಕಪುರ ಹೆದ್ದಾರಿ ತಡೆದ ಕಾರ್ಯಕರ್ತರು. 
Intro:


Body:kn_rmn_02_dks_arrest_protest_7204219


Conclusion:
Last Updated :Sep 4, 2019, 11:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.