ETV Bharat / state

ಹೆಚ್ಎಎಲ್​ನ 833 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ ಲೀಸ್‌ಗೆ ಕೊಟ್ಟಿದ್ರು!

author img

By

Published : Feb 16, 2023, 5:46 PM IST

Updated : Feb 16, 2023, 6:39 PM IST

ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಹೆಚ್ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಲೀಸ್‌ಗೆ​ ನೀಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹೆಚ್ಎಎಲ್ ಜಮೀನಿನ ನಕಲಿ ದಾಖಲೆ ಸೃಷ್ಟಿ!

ಬೆಂಗಳೂರು: ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹೆಚ್ಎಎಲ್ ಜಮೀನಿಗೆ ನಕಲಿ ದಾಖಲೆ ಸೃಷ್ಟಿ ಮಾಡಿ ಬೇರೆಯವರಿಗೆ ಲೀಸ್​ಗೆ ಕೊಟ್ಟು ಕೋಟ್ಯಂತರ ರೂಪಾಯಿ ಪಡೆದು ವಂಚಿಸಿದ್ದ ಏಳು ಮಂದಿ ವಂಚಕರನ್ನು ಹೆಚ್ಎಎಲ್ ಪೊಲೀಸರು ಸೆರೆ ಹಿಡಿದಿದ್ದಾರೆ. ಸೈಯದ್ ಮುನ್ನಾವರ್ ಸಾಬ್ರಿ, ಪ್ರತಾಪ್, ಸೈಯದ್ ಅಫ್ರೋಜ್, ರಾಜ್ ಕುಮಾರ್, ಶ್ರೀನಿವಾಸ ಮೂರ್ತಿ ಹಾಗೂ ವೈಜಯಂತ್ ಬಂಧಿತರು. ಹೆಚ್ಎಎಲ್ ಅಧಿಕಾರಿ ಈ ಕುರಿತು ದೂರು ನೀಡಿದ್ದರು.

ಆರೋಪಿಗಳು ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಕೇಂದ್ರ ಸರ್ಕಾರಕ್ಕೆ ಸೇರಿರುವ 833 ಎಕರೆ ಜಾಗಕ್ಕೆ ನಕಲಿ ದಾಖಲಾತಿ ಸಿದ್ಧಪಡಿಸಿ ಲೀಸ್​ಗೆ ಪಡೆದಿರುವುದಾಗಿ ದಾಖಲೆಗಳನ್ನು ರೆಡಿ ಮಾಡಿಕೊಂಡಿದ್ದರು. ಇದಕ್ಕೆ ಹೆಚ್ಎಎಲ್‌ನ ಲೆಟರ್‌ಹೆಡ್, ಅಧಿಕಾರಿಗಳ ಸೀಲ್ ಮತ್ತು ಸಹಿ ನಕಲಿಸಿದ್ದಾರೆ. ಹೀಗೆ ನಕಲಿಸಿದ ದಾಖಲೆಯಿಂದ ಆರೋಪಿಗಳು ಮೂರನೇ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದರು. ತಾವು ತಯಾರಿಸಿದ್ದ ದಾಖಲಾತಿ ತೋರಿಸಿ ನಾವು ಹೆಚ್ಎಎಲ್‌ನಿಂದ 30 ವರ್ಷಕ್ಕೆ ಜಾಗ ಲೀಸ್ ಪಡೆದಿದ್ದೇವೆ. ನಿಮಗೆ ಬೇಕಾದರೆ ವಾಣಿಜ್ಯ ವ್ಯವಹಾರಕ್ಕಾಗಿ ಲೀಸ್​ ಮತ್ತು ಬಾಡಿಗೆಗಾಗಿ ನೀಡ್ತೀವಿ ಎಂದು ಹಣ ಪಡೆಯುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಹೀಗೆ ಇಬ್ಬರಿಂದ ಒಂದು ಕೋಟಿ ರೂ ಪಡೆದು ವಂಚನೆ ಮಾಡಿದ್ದಾರೆ. ಪ್ರಕರಣ ತಿಳಿದು ಹೆಚ್ಎಎಲ್ ಅಧಿಕಾರಿಗಳು ಹೆಚ್ಎಎಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಮುಖ ಆರೋಪಿ ಬಿನಿಷ್ ಥಾಮಸ್ ತಲೆಮರೆಸಿಕೊಂಡಿದ್ದಾನೆ.

ವೈಟ್ ಫೀಲ್ಡ್ ವಿಭಾಗ ಡಿಸಿಪಿ ಗಿರೀಶ್ ಮಾಧ್ಯಮದೊಂದಿಗೆ ಮಾತನಾಡಿ, "ಫೆ.1 ರಂದು ಹೆಚ್ಎ​ಎಲ್​ ಪೊಲೀಸ್​ ಠಾಣೆಯಲ್ಲಿ ಹೆಚ್​ಎಎಲ್​ಗೆ ಸೇರಿದ ಸುಮಾರು 833 ಎಕರೆ ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಲೀಸ್​ ಕೊಟ್ಟಿರುವುದಾಗಿ ಹೆಚ್​ಎಎಲ್​ ಅಧಿಕಾರಿಗಳು ದೂರು ನೀಡಿದ್ದರು. ತನಿಖೆ ಆರಂಭಿಸಿದಾಗ ಹೆಚ್​ಎಎಲ್​ ಕಡೆಯಿಂದಲೇ ಆರೋಪಿಗಳಿಗೆ ಲೀಸ್​ ಕೊಟ್ಟಿರುವ ಹಾಗೆ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡಿದ್ದಾರೆ. ಹೆಚ್​ಎಎಲ್​​ ಬೋರ್ಡ್​ ಆಫ್​ ಡೈರೆಕ್ಟರ್​ ಸಹ ತಮ್ಮೊಂದಿಗೆ ಸಭೆ ನಡೆಸಿದ್ದಾರೆ ಎಂಬ ನಕಲಿ ದಾಖಲೆಯನ್ನೂ ಸೃಷ್ಟಿ ಮಾಡಿಕೊಂಡಿದ್ದಾರೆ".

"ನಂತರ ಹೆಚ್​ಎಎಲ್​ ಜಮೀನು ಲೀಸ್​ಗೆ ನೀಡುವುದಾಗಿ ಇಬ್ಬರಿಗೆ ವಂಚಿಸಿ ಅವರಿಂದ ಹಣ ಪಡೆದಿದ್ದಾರೆ. ಅವರನ್ನೂ ವಿಚಾರಣೆ ಮಾಡಲಾಗುತ್ತಿದೆ. ಆರೋಪಿಗಳ ಬ್ಯಾಂಕ್​ ದಾಖಲೆಗಳನ್ನು ಪರಿಶೀಲನೆ ನಡೆಸಲಾಗಿದ್ದು ಅದರಲ್ಲಿ ಮುಂಗಡವಾಗಿ 50 ರಿಂದ 60 ಲಕ್ಷ ರೂ ಹಣ ಪಡೆದಿರುವ ಬಗ್ಗೆ ತಿಳಿದು ಬಂದಿದೆ. ಬ್ಯಾಂಕ್ ಅಕೌಂಟ್​ಗಳನ್ನು ಪರಿಶೀಲಿಸಲಾಗುತ್ತಿದೆ. ವಂಚನೆಗೊಳಗಾದ ಇಬ್ಬರಲ್ಲಿ ಒಬ್ಬರಿಂದ 1 ಕೋಟಿ ಹಣ ಪಡೆದಿದ್ದು ಮತ್ತೊಬ್ಬರಿಂದ ಪಡೆದಿರುವ ಹಣದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ತನಿಖೆ ನಡೆಯುತ್ತಿದೆ" ಎಂದು ಹೇಳಿದರು. ​

ಇದನ್ನೂ ಓದಿ: ಜೆಡಿಎಸ್​ ಮುಖಂಡ ಪ್ರಭಾಕರ್​ ರೆಡ್ಡಿಗೆ ಶಾಕ್​ ನೀಡಿದ ಐಟಿ ಅಧಿಕಾರಿಗಳು: ಕುಮಾರಸ್ವಾಮಿ ಪ್ರತಿಕ್ರಿಯೆ

Last Updated :Feb 16, 2023, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.