ETV Bharat / state

ಹೆಣ್ಣಿನ ವಿಚಾರಕ್ಕೆ ಬೆಂಗಳೂರಲ್ಲಿ ನಡುರಾತ್ರಿ ಕೊಲೆ... ಕೊಂದವನೇ ಆಸ್ಪತ್ರೆಗೆ ಸೇರಿಸಿ ಎಸ್ಕೇಪ್​​!

author img

By

Published : Nov 25, 2019, 7:24 PM IST

ಹೆಣ್ಣಿನ ವಿಚಾರಕ್ಕೆ ಕೊಲೆ

ಹೆಣ್ಣಿನ ವಿಚಾರಕ್ಕೆ ಗಲಾಟೆಯಾಗಿ ಕೊಲೆ ನಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬೆಂಗಳೂರು: ಹೆಣ್ಣಿನ ವಿಚಾರಕ್ಕೆ ಇಬ್ಬರ ನಡುವೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಪ್ರದೀಪ್ ಕೊಲೆಯಾದ ವ್ಯಕ್ತಿ. ಹನುಮಂತ ನಗರ ನಿವಾಸಿಯಾಗಿರುವ ಪ್ರದೀಪ್ ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯ ಬಳಿಯ ವೃಷಾಭಾವತಿ ನಗರಕ್ಕೆ ಹೋಗಿ ವಿಜಯ್ ಅಲಿಯಾಸ್ ವಿನೋದ್ ಎಂಬಾತನ ಜೊತೆ ಜಗಳವಾಡಿದ್ದ. ಯಾಕಂದ್ರೆ ವಿಜಯ್ ಮತ್ತು ಪ್ರದೀಪ್ ಇಬ್ಬರು ಓರ್ವ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ರಂತೆ. ಆ ವಿಚಾರ ಪ್ರದೀಪ್​ಗೆ​​ ಗೊತ್ತಾಗಿ ವಿನೋದ್ ಅಲಿಯಾಸ್ ವಿಜಯ್​​ಗೆ ವಾರ್ನಿಂಗ್ ಮಾಡಿದ್ದನಂತೆ. ಗಲಾಟೆ ವೇಳೆ ವಿನೋದ್ ಕೂಡ ಅವಾಜ್​ ಹಾಕಿದ್ದ. ನಂತ್ರ ಅಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ರು ಎನ್ನಲಾಗಿದೆ.

ಹೆಣ್ಣಿನ ವಿಚಾರಕ್ಕೆ ಕೊಲೆ

ಆದ್ರೆ ಪ್ರದೀಪ್ ತಡರಾತ್ರಿ ಒಂದು ಗಂಟೆ ಸಮಯಕ್ಕೆ ಮತ್ತೆ ಬಂದು ವಿನೋದ್ ಅಲಿಯಾಸ್ ವಿಜಯ್ ಜೊತೆ ಗಲಾಟೆ ಮಾಡಿದ್ದ. ಈ ವೇಳೆ ಕೋಪಗೊಂಡಿದ್ದ ವಿನೋದ್ ಪ್ರದೀಪ್ ಎದೆಗೆ ಚಾಕು ಹಾಕಿದ್ದಾನೆ. ನಂತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪ್​​ನನ್ನು ತಾನೇ ಆಸ್ಪತ್ರೆಗೆ ಸೇರಿಸಿ‌ ರಸ್ತೆ ಮಧ್ಯೆ ಬಿದ್ದಿದ್ದವನನ್ನು ಆಸ್ಪತ್ರೆಗೆ ಸೇರಿಸುತ್ತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ವಿನೋದ್ ಅಲಿಯಾಸ್ ವಿಜಯ್​​ಗೆ ಪ್ರದೀಪ್ ಸತ್ತು ಹೋಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಮೆಲ್ಲಗೆ ಎಸ್ಕೇಪ್ ಆಗಿದ್ದಾನೆ ಎನ್ನಲಾಗಿದೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಕಾಮಾಕ್ಷಿಪಾಳ್ಯ ಪೊಲೀಸರು, ಆರೋಪಿ ವಿಜಯ್ ಅಲಿಯಾಸ್ ವಿನೋದ್​​​ಗಾಗಿ ಶೋಧ ನಡೆಸುತ್ತಿದ್ದಾರೆ.

Intro:ಹೆಣ್ಣಿನ ವಿಚಾರಕ್ಕಾಗಿ ನಡುರಾತ್ರಿ ಕೊಲೆ..
ಕೊಲೆ ಮಾಡಿದವನೆ ಆಸ್ಪತ್ರೆ ಸೇರಿಸಿ ಎಸ್ಕೇಪ್.

ಹೆಣ್ಣಿನ ವಿಚಾರಕ್ಕೆ ಗಲಾಟೆಯಾಗಿ ಕೊಲೆ ನಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಪ್ರದೀಪ್ ಕೊಲೆಯಾದ ವ್ಯಕ್ತಿ.

ಹನುಮಂತ ನಗರ ನಿವಾಸಿಯಾಗಿರುವ ಪ್ರದೀಪ್ ನಿನ್ನೆ ರಾತ್ರಿ ಕಾಮಾಕ್ಷಿಪಾಳ್ಯ ಬಳಿಯ ವೃಷಾಭಾವತಿ ನಗರಕ್ಕೆ ಹೋಗಿ ವಿಜಯ್ ಅಲಿಯಾಸ್ ವಿನೋದ್ ಎಂಬಾತನ ಜೊತೆ ಜಗಳವಾಡಿದ್ದ. ಯಾಕಂದ್ರೆ ವಿಜಯ್ ಮತ್ತು ಪ್ರದೀಪ್ ಇಬ್ಬರು ಒರ್ವ ಮಹಿಳೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ರು .ಆ ವಿಚಾರ ಪ್ರದೀಪ್ಗೆ ಗೊತ್ತಾಗಿ ವಿನೋದ್ ಅಲಿಯಾಸ್ ವಿಜಯ್ ಗೆ ವಾರ್ನಿಂಗ್ ಮಾಡಿದ್ದ . ಗಲಾಟೆ ವೇಳೆ ವಿನೋದ್ ಅಲಿಯಾಸ್ ವಿಜಯ್ ಅದೆಲ್ಲಾ ಆಗಲ್ಲ ಅನ್ನೊ ಹಾಗೆ ಹೇಳಿದ್ದ . ನಂತ್ರ ಅಲ್ಲಿದ್ದವರು ಜಗಳ ಬಿಡಿಸಿ ಕಳಿಸಿದ್ರು.

ಆದ್ರೆ ಪ್ರದೀಪ್ ತಡರಾತ್ರಿ ಒಂದು ಗಂಟೆ ಸಮಯಕ್ಕೆ ಮತ್ತೆ ಬಂದು ವಿನೋದ್ ಅಲಿಯಾಸ್ ವಿಜಯ್ ಜೊತೆ ಗಲಾಟೆ ಮಾಡಿದ್ದ . ಈ ವೇಳೆ ಕೋಪಗೊಂಡಿದ್ದ ವಿನೋದ್ ಪ್ರದೀಪ್ ಎದೆಗೆ ಚಾಕು ಹಾಕಿದ್ದಾನೆ .ನಂತ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರದೀಪ್ ನನ್ನು ತಾನೆ ಆಸ್ಪತ್ರೆಗೆ ಸೇರಿಸಿ‌ ರಸ್ತೆ ಮಧ್ಯೆ ಬಿದ್ದಿದ್ದವನ್ನು ಆಸ್ಪತ್ರೆಗೆ ಸೇರಿಸುತಿದ್ದೇನೆ ಎಂದು ಹೇಳಿದ್ದಾನೆ. ಈ ವೇಳೆ ವಿನೋದ್ ಅಲಿಯಾಸ್ ವಿಜಯ್ ಗೆ ಪ್ರದೀಪ್ ಸತ್ತು ಹೋಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಚಾರ ತಿಳಿತ ಇದ್ದಾ ಹಾಗೆ ಮೆಲ್ಲಗೆ ಎಸ್ಕೇಪ್ ಆಗಿದ್ದಾನೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಕಾಮಾಕ್ಷಿ ಪಾಳ್ಯ ಪೊಲೀಸರು ಆರೋಪಿ ವಿಜಯ್ ಅಲಿಯಾಸ್ ವಿನೋದ್ ಗಾಗಿ ಶೋಧ ನಡೆಸುತಿದ್ದಾರೆ
Body:KN_BNG_06_MURDeR_7204498Conclusion:KN_BNG_06_MURDeR_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.