ETV Bharat / state

ಬಾಗಲಕೋಟೆಯಲ್ಲಿ ಮಹಿಳೆ ಮೇಲೆ ಬೀದಿಯಲ್ಲೇ ನಡೀತು ಮಾರಣಾಂತಿಕ ಹಲ್ಲೆ!

author img

By

Published : Sep 30, 2019, 12:09 PM IST

ನವನಗರದ ವಾಂಬೆ ಕಾಲೋನಿಯಲ್ಲಿ ಮಾಟ-ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿದೆ. ಪರಸ್ಪರರು ರಸ್ತೆಯಲ್ಲಿ ನಿಂತು ಬಡಿದಾಡಿಕೊಂಡಿದ್ದಾರೆ.

ಗಲಾಟೆ

ಬಾಗಲಕೋಟೆ: ಮಾಟ ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿ, ಪರಸ್ಪರ ಹೂಡೆದಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಾಟ ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ

ನವನಗರದ ವಾಂಬೆ ಕಾಲೋನಿಯಲ್ಲಿ ಮನೆ ಮುಂದೆ ಮಾಟಮಂತ್ರದ ನಿಂಬೆ ಹಣ್ಣು ಇಟ್ಟ ದುಷ್ಕರ್ಮಿಗಳ ಬಗ್ಗೆ ಮನೆ ಯಜಮಾನಿ ಬೈಯುತ್ತಿದ್ದುದು ಗಲಾಟೆಗೆ ಕಾರಣವಾಗಿದೆ. ಕಾಶಿಬಾಯಿ‌ ಎಂಬ ಮಹಿಳೆ ಮನೆಯ ಮುಂದೆ ಮಂತ್ರದ ಲಿಂಬೆ ಹಣ್ಣು‌ ನೋಡಿ, ನಿಂದಿಸುತ್ತಿದ್ದ ವೇಳೆ ಶುರುವಾದ ಪಕ್ಕದ ಮನೆಯವರ ಜಗಳ ವಿಕೋಪಕ್ಕೆ ತಿರುಗಿ, ಘರ್ಷಣೆಗೆ ಕಾರಣವಾಗಿದೆ.

ಜಗಳ ವಿಕೋಪಕ್ಕೆ ತಿರುಗಿ ವ್ಯಕ್ತಿವೋರ್ವ ಕೋಲಿನಿಂದ ಕಾಶಿಬಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ಅಶೋಕ್​ ರೊಳ್ಳಿ, ಶ್ರೀಕಾಂತ್, ಶ್ರೀಶೈಲ್, ಶಿವು, ಎಂಬುವರಿಂದ ಕಾಶಿಬಾಯಿ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ, ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದು, ಎರಡು ಕಡೆಯವರ ವಿಚಾರಣೆ ನಡೆಸಿದ್ದಾರೆ.

Intro:AnchorBody:ಬಾಗಲಕೋಟೆ--ಮಾಟ ಮಂತ್ರ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಗಲಾಟೆ ಉಂಟಾಗಿ,ಪರಸ್ಪರ ಹೂಡೆದಾಡಿಕೊಂಡಿರುವ ಘಟನೆ ಬಾಗಲಕೋಟೆ ‌ನಗರದಲ್ಲಿ ಜರುಗಿದೆ.
ನವನಗರದ ವಾಂಬೆ ಕಾಲೋನಿ ಯಲ್ಲಿ ಮನೆ ಮುಂದೆ ಮಾಟಮಂತ್ರದ ನಿಂಬೆ ಹಣ್ಣು ಇಟ್ಟು ದುಷ್ಕರ್ಮಿಗಳು ಬಗ್ಗೆ ಮನೆ ಮಾಲಕಿ ಬೈಯುತ್ತಾ ಇರುವಾಗ ಗಲಾಟೆಗೆ ಕಾರಣವಾಗಿದೆ.
ಕಾಶಿಬಾಯಿ‌ ಎಂಬ ಮಹಿಳೆ ಮನೆಯ ಮುಂದೆ ಮಂತ್ರದ ಲಿಂಬೆ ಹಣ್ಣು‌ ನೋಡಿ,
ಬೈದಾಡುವ ವೇಳೆ ಮಹಿಳೆ ಜೊತೆ ಶುರುವಾದ ಪಕ್ಕದ ಮನೆಯವರ ಜಗಳ ವಿಕೋಪಕ್ಕೆ ತಿರುಗಿ ಘರ್ಷಣೆ ಕಾರಣವಾಗಿದೆ.ಜಗಳ ವಿಕೋಪಕ್ಕೆ ತಿರುಗಿ ಪುರುಷ ಓರ್ವನು ಕೋಲಿನಿಂದ ಬಡಿದಾಟ ನಡೆಸಿದ್ದಾರೆ.ಮಹಿಳೆ ಕಾಶಿಬಾಯಿ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾರೆ.
ಅಶೋಕ ರೊಳ್ಳಿ ,ಶ್ರೀಕಾಂತ್, ಶ್ರೀಶೈಲ್,ಶಿವು, ಎಂಬುವರಿಂದ ಕಾಶಿಬಾಯಿ ಎಂಬುವ ಮಹಿಳೆಯ ಮೇಲೆ ಹಲ್ಲೆ ನಡೆದಿದೆ.
ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದ ಪೊಲೀಸರು,ಎರಡು ಕಡೆ ವಿಚಾರಣೆ ನಡೆಸಿದ್ದಾರೆ..Conclusion:ಈ ಟಿವಿ,ಭಾರತ,ಬಾಗಲಕೋಟೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.