ETV Bharat / sports

ಭಾರತೀಯ ಕುಸ್ತಿಯನ್ನು 2032ರ ಒಲಿಂಪಿಕ್ಸ್​ವರೆಗೆ ದತ್ತು ತೆಗೆದುಕೊಂಡ ಯುಪಿ ಸರ್ಕಾರ

author img

By

Published : Aug 26, 2021, 7:42 PM IST

UP government adopts Indian wrestling till 2032 Olympics
ಕುಸ್ತಿಯನ್ನು 2032ರ ಒಲಿಂಪಿಕ್ಸ್​ವರೆಗೆ ದತ್ತು ತೆಗೆದುಕೊಂಡ ಯುಪಿ ಸರ್ಕಾರ

ಒಡಿಶಾ ಒಂದು ಚಿಕ್ಕ ರಾಜ್ಯ , ಆದರೂ ಹಾಕಿ ಕ್ರೀಡೆಯನ್ನು ಇಷ್ಟು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ನಾವೂ ಕೂಡ ದೊಡ್ಡ ರಾಜ್ಯವಾಗಿರುವ ಯುಪಿ ಏಕೆ ಕುಸ್ತಿಯನ್ನು ಬೆಂಬಲಿಸುವುದಿಲ್ಲ ಎಂದು ನಾವು ಯೋಚಿಸಿದೆವು. ನಂತರ ನಾವು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಸಂಪರ್ಕಿಸಿದಾಗ, ಅವರು ಕುಸ್ತಿಗೆ ಬೆಂಬಲಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಂಗ್​ ಪಿಟಿಐಗೆ ಹೇಳಿದ್ದಾರೆ.

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ ನಂತರ ಭಾರತದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುತ್ತಿದೆ. ಈಗಾಗಲೇ ಒಡಿಶಾ ಸರ್ಕಾರ ಭಾರತೀಯ ಹಾಕಿಗೆ ಮುಂದಿನ 10 ವರ್ಷಗಳ ಪ್ರಾಯೋಜಕತ್ವವನ್ನು ಮುಂದೂಡಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಕೂಡ ಕ್ರೀಡೆಗೆ ಮಹತ್ವ ನೀಡಿ, ಭಾರತೀಯ ಕುಸ್ತಿಯನ್ನು 2032ರ ಬ್ರಿಸ್ಬೇನ್ ಒಲಿಂಪಿಕ್ಸ್​ವರೆಗೆ ದತ್ತು ತೆಗೆದಕೊಳ್ಳುವುದಾಗಿ ಗುರುವಾರ ಘೋಷಣೆ ಹೊರಡಿಸಿದೆ.

ಒಡಿಶಾ ಸರ್ಕಾರ ಭಾರತೀಯ ಹಾಕಿಗೆ ತಮ್ಮ ಬೆಂಬಲವನ್ನು ಮುಂದುವರಿಸಿ ತೆಗೆದುಕೊಂಡ ನಿರ್ಧಾರದಿಂದ ಪ್ರೇರಣೆಯಾಗಿ ತೆಗೆದುಕೊಂಡಿರುವ ಉತ್ತರ ಪ್ರದೇಶ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಮದು ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್​ ಸಿಂಗ್ ಹೇಳಿದ್ದಾರೆ. ಯುಪಿ ಸರ್ಕಾರ ಸುಮಾರು 170 ಕೋಟಿ ರೂಪಾಯಿಗಳನ್ನು ಕುಸ್ತಿ ಕ್ರೀಡೆಗಾಗಿ ಮೀಸಲಿಡಲಿದೆ ಎಂದು ತಿಳಿದು ಬಂದಿದೆ.

ಚಿಕ್ಕರಾಜ್ಯವಾದರೂ ದೊಡ್ಡ ಬೆಂಬಲ

ಒಡಿಶಾ ಒಂದು ಚಿಕ್ಕ ರಾಜ್ಯ , ಆದರೂ ಹಾಕಿ ಕ್ರೀಡೆಯನ್ನು ಇಷ್ಟು ದೊಡ್ಡ ರೀತಿಯಲ್ಲಿ ಬೆಂಬಲಿಸುತ್ತಿದ್ದಾರೆ. ಆದ್ದರಿಂದ ನಾವೂ ಕೂಡ ದೊಡ್ಡ ರಾಜ್ಯವಾಗಿರುವ ಯುಪಿ ಏಕೆ ಕುಸ್ತಿಯನ್ನು ಬೆಂಬಲಿಸುವುದಿಲ್ಲ ಎಂದು ನಾವು ಯೋಚಿಸಿದೆವು. ನಂತರ ನಾವು ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಸಂಪರ್ಕಿಸಿದಾಗ, ಅವರು ಕುಸ್ತಿಗೆ ಬೆಂಬಲಿಸಲು ಒಪ್ಪಿಕೊಂಡಿದ್ದಾರೆ ಎಂದು ಸಿಂಗ್​ ಪಿಟಿಐಗೆ ಹೇಳಿದ್ದಾರೆ.

2024ರವರೆಗೆ ಪ್ರತಿ ವರ್ಷ ತಲಾ 10 ಕೋಟಿ ರೂ ನಂತರ ಒಟ್ಟು 30 ಕೋಟಿ ರೂಗಳ ಬೆಂಬಲವನ್ನು ಅವರ ಮುಂದಿಟ್ಟಿದ್ದೇವೆ. ನಂತರ 2018ರ ಒಲಿಂಪಿಕ್ಸ್​ತನಕ ತಲಾ 15 ಕೋಟಿ ಮತ್ತು ನಂತರ 4 ವರ್ಷ ಅಂದರೆ 2032ರ ಒಲಿಂಪಿಕ್ಸ್​ವರೆಗೆ ತಲಾ 20 ಕೋಟಿ ರೂ.ನಂತೆ 80 ಕೋಟಿ ರೂಪಾಯಿಗಳ ಪ್ರಸ್ತಾಪವನ್ನು ಯುಪಿ ಸರ್ಕಾರದ ಮುಂದಿಟ್ಟಿದ್ದೇವೆ ಎಂದು ಅವರು ವಿವರಿಸಿದ್ದಾರೆ.

" ಇದು ಸಂಭವಿಸಿದರೆ, ಪ್ರಾಯೋಜಕತ್ವಗಳು ಕೇವಲ ದೇಶದ ಗಣ್ಯ ಕುಸ್ತಿಪಟುಗಳಿಗೆ ಸೀಮಿತವಾಗಿರುವುದಿಲ್ಲ. ಕೆಡೆಟ್ ಮಟ್ಟದ ಕುಸ್ತಿಪಟುಗಳು ಸಹ ಪ್ರಾಯೋಜಕತ್ವವನ್ನು ಪಡೆಯುತ್ತಾರೆ ಮತ್ತು ನಾವು ರಾಷ್ಟ್ರೀಯ ಚಾಂಪಿಯನ್‌ಗಳಿಗೂ ಬಹುಮಾನದ ಹಣವನ್ನು ನೀಡಲು ಸಾಧ್ಯವಾಗುತ್ತದೆ" ಎಂದು ಅವರು ಹೇಳಿದರು.

ಗುಪ್ತ ಒಪ್ಪಂದ ಮಾಡುವಂತಿಲ್ಲ

ಈಗಾಗಲೇ ಕೆಲವು ಗಣ್ಯ ಕುಸ್ತಿಪಟುಗಳಿಗೆ ಸ್ಪಾನ್ಸರ್​ ಆಗಿರುವ ಜೆಎಸ್​ಡಬ್ಲೂ ಮತ್ತು OGQ ಅಂತಹ ಎನ್​ಜಿಒಗಳ ಅಗತ್ಯ ನಮಗಿಲ್ಲ. ಒಂದು ವೇಳೆ ಅವರು ಕುಸ್ತಿಪಟುಗಳಿಗೆ ನೆರವಾಗಬೇಕೆಂದರೆ ಅವರು ಒಕ್ಕೂಟದೊಂದಿಗೆ ಪಾರದರ್ಶಕತೆಯಿಂದಿರಬೇಕು. ಕುಸ್ತಿಪಟುಗಳೊಂದಿಗೆ ಗುಪ್ತ ಒಪ್ಪಂದಗಳನ್ನು ಮಾಡಕೂಡದು. ಅವರು ಸಹಾಯ ಮಾಡಬೇಕೆಂದು ಬಯಸಿದರೆ ನಮ್ಮ ಜೊತೆ ಕುಳಿತು ಅವರ ಯೋಜನೆಗಳನ್ನು ಚರ್ಚಿಸಬಹುದು ಎಂದಿದ್ದಾರೆ.

ಇದನ್ನು ಓದಿ:2033ವರೆಗೂ ಹಾಕಿಗೆ ಪ್ರಾಯೋಜಕತ್ವ ಮುಂದುವರಿಸುವುದಾಗಿ ಒಡಿಶಾ ಸಿಎಂ ಪಟ್ನಾಯಕ್ ಘೋಷಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.