ETV Bharat / sports

ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆ.. ಮೌನ ಮುರಿದ ವೀರೇಂದ್ರ ಸೆಹ್ವಾಗ್​

author img

By

Published : Jun 23, 2023, 2:03 PM IST

virender sehwag breaks silence  sehwag breaks silence on being approached by board  bcci chief selector post  ಮೌನ ಮುರಿದ ವೀರೇಂದ್ರ ಸೆಹ್ವಾಗ್​ ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆ  ಮುಖ್ಯ ಆಯ್ಕೆಗಾರ ಹುದ್ದೆಗೆ ಸಂಪರ್ಕಿಸಿದೆ ಎಂಬ ವರದಿ  ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್  ಇತ್ತೀಚೆಗೆ ನಿವೃತ್ತರಾದ ಯುವರಾಜ್ ಸಿಂಗ್  ಸೆಹ್ವಾಗ್ ಹಲವು ವೇದಿಕೆಗಳಲ್ಲಿ ವಿಶ್ಲೇಷಕ  ವಿಶ್ಲೇಷಕರಾಗಿ ಸೂಕ್ತ ಸಂಭಾವನೆ  ಬಿಸಿಸಿಐ ಮುಖ್ಯ ಆಯ್ಕೆಯ ಅಧಿಸೂಚನೆ
ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್​ ಅವರನ್ನು ಮುಖ್ಯ ಆಯ್ಕೆಗಾರ ಹುದ್ದೆಗೆ ಸಂಪರ್ಕಿಸಿದೆ ಎಂಬ ವರದಿಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸೆಹ್ವಾಗ್ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮುಂಬೈ, ಮಹಾರಾಷ್ಟ್ರ: ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರು ಮುಖ್ಯ ಆಯ್ಕೆಗಾರ ಹುದ್ದೆ ನೀಡುವಂತೆ ಕೇಳಲಾದ ಎಲ್ಲ ವರದಿಗಳನ್ನು ತಳ್ಳಿಹಾಕಿದ್ದಾರೆ. ಈ ಬಗ್ಗೆ ವೀರೂಗೆ ಕೇಳಿದಾಗ ಈ ಹುದ್ದೆಗಾಗಿ ಬಿಸಿಸಿಐ ತನ್ನನ್ನು ಎಂದಿಗೂ ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.

ಬಿಸಿಸಿಐ ಏಷ್ಯಾ ಕಪ್ ಮತ್ತು ವಿಶ್ವಕಪ್‌ಗೆ ಮುನ್ನ ತನ್ನ ಮುಖ್ಯ ಆಯ್ಕೆಗಾರರನ್ನು ಆಯ್ಕೆ ಮಾಡಲು ಬಯಸಿದೆ. ಇದಕ್ಕಾಗಿ ನೇಮಕಾತಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ. ಆಯ್ಕೆ ಸಮಿತಿಯ ಅಧ್ಯಕ್ಷರು ಉತ್ತರ ವಲಯದಿಂದ ಬರುತ್ತಾರೆ ಎಂದು ಮಂಡಳಿ ಸ್ಪಷ್ಟಪಡಿಸಿದೆ. ಹೀಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯ ಆಯ್ಕೆಗಾರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ.

ಇತ್ತೀಚೆಗೆ ನಿವೃತ್ತರಾದ ಯುವರಾಜ್ ಸಿಂಗ್, ಗೌತಮ್ ಗಂಭೀರ್ ಮತ್ತು ಹರ್ಭಜನ್ ಸಿಂಗ್ ಅವರಂತಹ ದೊಡ್ಡ ಹೆಸರುಗಳು ಈ ಹುದ್ದೆಯ ಆಯ್ಕೆಗೆ ಮುನ್ನೆಲೆಗೆ ಬರುತ್ತವೆ. ಆದರೆ, ಷರತ್ತುಗಳ ಪ್ರಕಾರ ಮೂವರೂ ಇನ್ನೂ ಐದು ವರ್ಷಗಳ ನಿವೃತ್ತಿ ಅವಧಿಯ ಮಾನದಂಡವನ್ನು ಪೂರ್ಣಗೊಳಿಸಿಲ್ಲ. ಆದರೆ ವೀರೇಂದ್ರ ಸೆಹ್ವಾಗ್ ಐದು ವರ್ಷಗಳ ನಿವೃತ್ತಿಯ ಬ್ರಾಕೆಟ್‌ಗೆ ಹೊಂದಿಕೊಳ್ಳುತ್ತಾರೆ. ಆದರೆ, ಇಷ್ಟು ಕಡಿಮೆ ಸಂಬಳದಲ್ಲಿ ಅವರು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಿದ್ಧರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಸೆಹ್ವಾಗ್ ಹಲವು ವೇದಿಕೆಗಳಲ್ಲಿ ವಿಶ್ಲೇಷಕರಾಗಿ ಸೂಕ್ತ ಸಂಭಾವನೆ ಪಡೆಯುತ್ತಿದ್ದಾರೆ. ಕೋಟಿ ರೂಪಾಯಿ ನೀಡುವ ಪ್ಯಾಕೇಜ್​ಗಾಗಿ ಅವರು ಮುಖ್ಯ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇಲ್ಲ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಸಿಒಎ (ಕಮಿಟಿ ಆಫ್ ಅಡ್ಮಿನಿಸ್ಟ್ರೇಟರ್ಸ್) ಸಭೆಯಲ್ಲಿ ಸೆಹ್ವಾಗ್ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೇಳಲಾಯಿತು. ಆದರೆ, ಅದು ಅನಿಲ್ ಕುಂಬ್ಳೆ ಪಾಲಾಯಿತು. ಈಗ ಅವರು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಈ ಪ್ಯಾಕೇಜ್ ಆರ್ಥಿಕವಾಗಿ ಲಾಭದಾಯಕವಲ್ಲ ಎಂದು ಬಿಸಿಸಿಐ ಹೇಳಿದೆ ಅಂತಾ ವರದಿಗಳಿವೆ.

ಆದರೆ, ತಂಡದ ಆಯ್ಕೆ ಪ್ರಕ್ರಿಯೆ ಬಗ್ಗೆ ಮಾತನಾಡಿದ್ದಕ್ಕೆ ಚೇತನ್ ಶರ್ಮಾ ರಾಜೀನಾಮೆ ನೀಡುವಂತೆ ಬಿಸಿಸಿಐ ಆದೇಶಿಸಿದೆ. ಚೇತನ್ ಶರ್ಮಾ ಮುಖ್ಯ ಆಯ್ಕೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಚೇತನ್ ನಿರ್ಗಮನದ ನಂತರ, ಎಸ್ ಶರತ್ (ದಕ್ಷಿಣ), ಸುಬ್ರೋತೊ ಬ್ಯಾನರ್ಜಿ (ಮಧ್ಯ) ಮತ್ತು ಸಲೀಲ್ ಅಂಕೋಲಾ (ಪಶ್ಚಿಮ) ಅವರನ್ನು ಒಳಗೊಂಡ ಸಮಿತಿಯಲ್ಲಿ ಶಿವಸುಂದರ್ ದಾಸ್ ಅವರನ್ನು ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ನೇಮಿಸಲಾಯಿತು. ಆಯ್ಕೆ ಸಮಿತಿಯು ಕೇಂದ್ರ, ಉತ್ತರ, ಪಶ್ಚಿಮ, ದಕ್ಷಿಣ ಮತ್ತು ಪೂರ್ವ ಎಂಬ ಐದು ವಲಯಗಳನ್ನು ಒಳಗೊಂಡಿದೆ. ಪ್ರತಿ ವಲಯದಿಂದ ಐವರು ಸದಸ್ಯರಿದ್ದಾರೆ. ಅವರಲ್ಲಿ ಒಬ್ಬರು ಮುಖ್ಯ ಆಯ್ಕೆಗಾರರಾಗಿರುತ್ತಾರೆ.

ಬಿಸಿಸಿಐ ಮುಖ್ಯ ಆಯ್ಕೆಯ ಅಧಿಸೂಚನೆ: ಖಾಲಿ ಇರುವ ಮುಖ್ಯ ಹುದ್ದೆಗೆ ಬಿಸಿಸಿಐ ಗುರುವಾರ ಅರ್ಜಿ ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 30. ಹೊಸ ಆಯ್ಕೆದಾರರು ಐರ್ಲೆಂಡ್ ವಿರುದ್ಧದ ಸರಣಿಗೆ ತಂಡವನ್ನು ಆಯ್ಕೆ ಮಾಡುವ ಆಯ್ಕೆ ಸಮಿತಿಯ ಭಾಗವಾಗಿರುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಅದಕ್ಕೂ ಮುನ್ನ ದೇವಧರ್ ಟ್ರೋಫಿ ಹಾಗೂ ಅಂತರ ವಲಯ ಸ್ಪರ್ಧೆಗಳನ್ನು ನೋಡುವ ಅವಕಾಶವಿದೆ. ಮಹತ್ವಾಕಾಂಕ್ಷಿ ಆಯ್ಕೆದಾರರು ಏಳು ಟೆಸ್ಟ್‌ಗಳು ಅಥವಾ ಹತ್ತು ODIಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು.

ಓದಿ: ICC World Cup: ಅಮೆರಿಕದ ಬೌಲರ್ ಕೈಲ್ ಫಿಲಿಪ್ ಅಂತಾರಾಷ್ಟ್ರೀಯ ಪಂದ್ಯಗಳಿಂದ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.