ETV Bharat / sports

Virat Kohli: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾರತದ ವೈಫಲ್ಯ- ವಿರಾಟ್‌ ಕೊಹ್ಲಿ ಹೀಗಂದಿದ್ದೇಕೆ?

author img

By

Published : Jun 9, 2023, 4:19 PM IST

Virat Kohli post
ಕೊಹ್ಲಿ ಹೀಗಂದದ್ದು ಯಾಕೆ?

ಒವೆಲ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ನಲ್ಲಿ ಭಾರತ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದೆ. ಮೇಲಿನ ಕ್ರಮಾಂಕದ ನಾಲ್ವರು ಬ್ಯಾಟರ್​ಗಳು 20 ರನ್​ ಗಳಿಸುವ ಮುನ್ನವೇ ವಿಕೆಟ್​ ಒಪ್ಪಿಸಿದ್ದಾರೆ. ಈ ನಡುವೆ ವಿರಾಟ್‌ ಕೊಹ್ಲಿ ಇನ್‌ಸ್ಟಾ ಪೋಸ್ಟ್‌ವೊಂದು ಕುತೂಹಲ ಕೆರಳಿಸಿದೆ.

ಆಸ್ಟ್ರೇಲಿಯಾ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತದ ಬ್ಯಾಟರ್‌ಗಳು ಮುಗ್ಗರಿಸಿದ್ದಾರೆ. ಎರಡನೇ ದಿನ ಬ್ಯಾಟಿಂಗ್​​ಗೆ ಇಳಿದ ಭಾರತ ದಿನದಾಟದ ಅಂತ್ಯಕ್ಕೆ 151 ರನ್​ ಗಳಿಸಿ 5 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿಕೊಂಡಿತು. ಇದೀಗ 3ನೇ ದಿನದಾಟ ನಡೆಯುತ್ತಿದ್ದು ಕ್ರೀಸ್​ನಲ್ಲಿ ಅನುಭವಿ ಬ್ಯಾಟರ್​ ಅಜಿಂಕ್ಯಾ ರಹಾನೆ ಇದ್ದಾರೆ.

ಭಾರತದ ಬ್ಯಾಟರ್​ಗಳು ತರಗಲೆಗಳಂತೆ ವಿಕೆಟ್​ ಒಪ್ಪಿಸಿದ ನಂತರ ಉಪಹಾರ ಸೇವನೆ ಮಾಡುತ್ತಿರುವ ಫೋಟೋಗಳು ಟ್ವಿಟರ್​ನಲ್ಲಿ ಹರಿದಾಡುತ್ತಿದ್ದು ಟೀಕೆಗಳಿಗೆ ಗುರಿಯಾಗಿವೆ. ವಿಶೇಷವಾಗಿ ವಿರಾಟ್​ ಕೊಹ್ಲಿ, ಇಶಾನ್​ ಕಿಶನ್​ ಮತ್ತು ಶುಭಮನ್​ ಗಿಲ್​ ಜೊತೆಯಲ್ಲಿ ನಗುತ್ತಾ ಮಾತನಾಡುತ್ತಿರುವ ಫೋಟೋ ವೈರಲ್​ ಆಗಿದ್ದು, ಐಪಿಎಲ್​ನಲ್ಲಿ ಫ್ರಾಂಚೈಸಿಗಳಿಗೆ ಉತ್ತಮ ಪ್ರದರ್ಶನ ನೀಡುತ್ತಾರೆ, ಆದರೆ ರಾಷ್ಟ್ರೀಯ ತಂಡದಲ್ಲಿ ಸ್ಕೋರ್​ ಮಾಡಲು ಪರದಾಡುತ್ತಾರೆ ಎಂದು ಕ್ಯಾಪ್ಶನ್​ಗಳನ್ನು ಬರೆದು ವ್ಯಂಗ್ಯವಾಡುತ್ತಿದ್ದಾರೆ.

  • This is Virat Kohli and Shubman Gill chilling and laughing after throwing their wickets and leaving India in trouble in Final of an ICC tournament but somehow their fans will blame IPL for their bad performances where they clearly don't seem to care much about Indian cricket team pic.twitter.com/Y5SaXRt4dh

    — Y. (@CSKYash_) June 8, 2023 " class="align-text-top noRightClick twitterSection" data=" ">

ವಿರಾಟ್​ ಕೊಹ್ಲಿ ಹೇಳಿದ್ದೇನು?: ಇದಕ್ಕೆ ಉತ್ತರವೆಂಬಂತೆ ವಿರಾಟ್​ ಕೊಹ್ಲಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ಟೋರಿಯೊಂದನ್ನು ಹಾಕಿಕೊಂಡಿದ್ದಾರೆ. ಅದರಲ್ಲಿ ಅಮೆರಿಕನ್ ಲೇಖಕ ಮಾರ್ಕ್ ಮ್ಯಾನ್ಸನ್ ಅವರ, "ಇತರ ಜನರ ಅಭಿಪ್ರಾಯದ ಸೆರೆಮನೆಯಿಂದ ನಿಮ್ಮನ್ನು ಮುಕ್ತಗೊಳಿಸಲು ನೀವು ಇಷ್ಟಪಡದಿರುವ ಸಾಮರ್ಥ್ಯವನ್ನು ಉತ್ತಮವಾಗಿ ಬೆಳೆಸಿಕೊಳ್ಳಬೇಕು" ಎಂಬ ಹೇಳಿಕೆ ಉಲ್ಲೇಖಿಸಿದ್ದಾರೆ.

  • Latest Instagram story of Virat Kohli.
    Just want to let this man know that he is not disliked. He has carried us enough to be acknowledged than being the victim every time for minutest of thing. Imagine being targeted for eating a meal after fielding and batting. pic.twitter.com/33OzDk3vGL

    — Pari (@BluntIndianGal) June 9, 2023 " class="align-text-top noRightClick twitterSection" data=" ">

ಬ್ಯಾಟಿಂಗ್​ನಲ್ಲಿ ಎಡವಿದ ಭಾರತ: ಮೊದಲ ದಿನ ಭಾರತ ಪ್ರಥಮ ಅವಧಿಯಲ್ಲಿ ಎರಡು ವಿಕೆಟ್​ ಪಡೆದರೆ, ಎರಡನೇ ಸೆಷನ್​ನಲ್ಲಿ 1 ವಿಕೆಟ್​ ಮಾತ್ರ ಕಬಳಿಸಿತು. ನಂತರ ಆಸ್ಟ್ರೇಲಿಯಾದ ಹೆಡ್​ ಮತ್ತು ಸ್ಮಿತ್​ ಬ್ಯಾಟಿಂಗ್​ ಪಾರಮ್ಯ ಮೆರೆದರು. ಇದರಿಂದ ಬೃಹತ್​ ಮೊತ್ತದತ್ತ ಆಸಿಸ್​ ಮುಖ ಮಾಡಿತು. ಹೆಡ್​ 90 ರ ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟಿಂಗ್​ ಮಾಡಿ ದಾಖಲೆ ಬರೆದರು.

ಎರಡನೇ ದಿನ ಭಾರತದ ಬೌಲರ್​ಗಳು ಕಮ್​ಬ್ಯಾಕ್​ ಮಾಡಿದರು. ಸಿರಾಜ್​ 3 ವಿಕೆಟ್​ ಪಡೆದು ಕಾಂಗರೂ ಪಡೆಗೆ ಮಾರಕವಾದರು. ಇದರಿಂದ 500+ ರನ್​ ಗಳಿಸಿ ಡಿಕ್ಲೇರ್ ಮಾಡಬಹುದು ಎಂದು ಕ್ರಿಕೆಟ್​ ವಿಮರ್ಶಕರ ಲೆಕ್ಕಾಚಾರ ಬುಡಮೇಲಾಯಿತು. 469 ರನ್‌ಗಳ​ ದೊಡ್ಡ ಮೊತ್ತದ ಮೊದಲ ಇನ್ನಿಂಗ್ಸ್​ ಅನ್ನು ಆಸಿಸ್ ಕಟ್ಟಿತು.

469 ರನ್ ಬೆನ್ನತ್ತಿದ್ದ ಭಾರತ ಆರಂಭಿಕ ಆಘಾತದ ಜೊತೆಗೆ ಮತ್ತೆರಡು ವಿಕೆಟ್‌ಗಳನ್ನು ಬೇಗ ಕಳೆದುಕೊಂಡಿತು. ಆರಂಭಿಕರಾದ ಶುಭಮನ್​ ಗಿಲ್​ ಔಟ್​ಸ್ವಿಂಗ್​ ಬಾಲ್​ ಎಂದು ಡ್ರಾಪ್​ ಮಾಡಿದ ಚೆಂಡು ಇನ್​ಸ್ವಿಂಗ್​ ಆಗಿ ವಿಕೆಟ್‌ಗೆ ಬಡಿದರೆ, ರೋಹಿತ್​ ಶರ್ಮಾ ಎಲ್​ಬಿಡಬ್ಲ್ಯೂಗೆ ಬಲಿಯಾದರು. ಗಿಲ್​ ಇನ್ನಿಂಗ್ಸ್​ನಲ್ಲಿ 13 ರನ್ ಕಲೆಹಾಕಿದರೆ, ರೋಹಿತ್​ ಶರ್ಮಾ 15 ರನ್​ ಮಾತ್ರ ಗಳಿಸಿದರು.

ವಿದೇಶಿ ಪಿಚ್​ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅನುಭವಿ ವಿರಾಟ್​ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಬಂದರೂ ಬೃಹತ್​ ಜೊತೆಯಾಟ ನೀಡಲಿಲ್ಲ. ಕೊಹ್ಲಿ (14) ಯನ್ನು ಮಿಚೆಲ್​ ಸ್ಟಾರ್ಕ್​ ಔಟ್​ ಸ್ವಿಂಗ್​ನಲ್ಲಿ ಕಾಡಿದರೆ, ಗ್ರೀನ್​ ಪೂಜಾರ (14) ಅವರನ್ನು ಕ್ಲೀನ್​ ಬೌಲ್ಡ್​ ಮಾಡಿ ಪೆವಿಲಿಯನ್​ಗೆ ಅಟ್ಟಿದರು. ಈ ವಿಕೆಟ್​​ ಬಿದ್ದ ಬಳಿಕ ಬಂದ ರಹಾನೆ ಮತ್ತು ಜಡೇಜಾ ಜೋಡಿ ತಂಡಕ್ಕೆ ಆಸರೆಯಾದರು. ಜಡೇಜಾ ಬಿರುಸಿನ ಬ್ಯಾಟಿಂಗ್​ ಮಾಡಿ 7 ಬೌಂಡರಿ ಮತ್ತು 1 ಸಿಕ್ಸ್​ನಿಂದ 48 ರನ್​ ಕಲೆಹಾಕಿ ವಿಕೆಟ್​ ಕೊಟ್ಟರೆ ರೆಹಾನೆ ಎರಡನೇ ದಿನದ ಆಟದ ಅಂತ್ಯದ ವರೆಗೆ ವಿಕೆಟ್​ ಕಾಯ್ದುಕೊಂಡರು.

ಮೂರನೇ ದಿನದ ಆಟದ ಆರಂಭದಲ್ಲಿ ಕ್ರೀಸ್​ನಲ್ಲಿದ್ದ ಶ್ರೀಕರ್​ ಭರತ್​ ವಿಕೆಟ್​ ಕೊಟ್ಟಿದ್ದಾರೆ. ಅಜಿಂಕ್ಯಾ ರೆಹಾನೆ ಅರ್ಧಶತಕ ಗಳಿಸಿ ಆಡುತ್ತಿದ್ದರೆ, ಶಾರ್ದೂಲ್​ ವಿಕೆಟ್​ ಕಾಯ್ದುಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ICC WTC Final 2023: ಮರುಕಳಿಸುತ್ತಾ ಲಕ್ಷ್ಮಣ್​​-ದ್ರಾವಿಡ್​ ಜೊತೆಯಾಟ..ಭಾರತಕ್ಕೆ ಭರತ್- ರಹಾನೆಯೇ ಇಂದಿನ ಭರವಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.