ETV Bharat / sports

T20 ವಿಶ್ವಕಪ್​ನಲ್ಲಿ ರೋಹಿತ್ ಜೊತೆ ಕ್ರೀಡಾಂಗಣದಿಂದಾಚೆಗೆ ಸಿಕ್ಸರ್​ ಸಿಡಿಸುವ ಆಸೆ: ಸೂರ್ಯಕುಮಾರ್​

author img

By

Published : Sep 29, 2021, 10:07 PM IST

Suryakumar Yadav
Suryakumar Yadav

ಟಿ20 ವಿಶ್ವಕಪ್​ ಕುರಿತಾಗಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್​ಮನ್ ರೋಹಿತ್​ ಶರ್ಮಾ ಸ್ಫೂರ್ತಿದಾಯಕ ಸಂದೇಶ ಹಂಚಿಕೊಂಡಿದ್ದು, ಇದಕ್ಕೆ ಸೂರ್ಯಕುಮಾರ್​ ಯಾದವ್ ಕೂಡ ಸಾಥ್ ನೀಡಿದ್ದಾರೆ.

ದುಬೈ(ಯುಎಇ): ಅಕ್ಟೋಬರ್​ 17ರಿಂದ ಯುಎಇಯಲ್ಲಿ ಬಹುನೀರಿಕ್ಷಿತ ಐಸಿಸಿ ಟಿ-20 ವಿಶ್ವಕಪ್ ಆರಂಭಗೊಳ್ಳಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಪ್ಲೇಯರ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಟೂರ್ನಿಯಲ್ಲಿ ಭಾಗಿಯಾಗುವ ಅವಕಾಶ ಪಡೆದುಕೊಂಡಿರುವ ಸ್ಪೋಟಕ ಬ್ಯಾಟ್ಸ್​ಮನ್​ ಸೂರ್ಯಕುಮಾರ್​ ಯಾದವ್ ತಮ್ಮ ಇಂಗಿತ ಹೊರಹಾಕಿದ್ದಾರೆ.

Suryakumar Yadav
ಸೂರ್ಯಕುಮಾರ್ ಯಾದವ್ ಟ್ವೀಟ್​

ಟೀಂ ಇಂಡಿಯಾ ಹಿಟ್​ ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಜೊತೆ ಸೇರಿ ಮೈದಾನದಿಂದ ಆಚೆಗೆ ಸಿಕ್ಸರ್ ಸಿಡಿಸುವ ಇಂಗಿತವನ್ನ ಸೂರ್ಯಕುಮಾರ್ ಯಾದವ್​ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎಲ್ಲರೂ ಸೇರಿ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲಿದ್ದೇವೆ ಎಂದಿದ್ದಾರೆ. ಟಿ-20 ವಿಶ್ವಕಪ್​ಗೆ ಸಂಬಂಧಿಸಿದಂತೆ ರೋಹಿತ್ ಶರ್ಮಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸೂರ್ಯಕುಮಾರ್ ಯಾದವ್ ಈ ರೀತಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: T20 World Cup|2007ರ ಇತಿಹಾಸ ಮರುಸೃಷ್ಟಿಸಲು ಪ್ರತಿಯೊಬ್ಬರೂ ಪ್ರಯತ್ನಿಸಲಿದ್ದೇವೆ: ರೋಹಿತ್

ಟಿ-20 ವಿಶ್ವಕಪ್​ಗೆ ಸಂಬಂಧಿಸಿದಂತೆ ರೋಹಿತ್ ಶರ್ಮಾ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, "ಈ ವರ್ಷದ ಐಸಿಸಿ ಟಿ20 ವಿಶ್ವಕಪ್​ನಲ್ಲೂ ನಾವು ಪ್ರತಿಯೊಬ್ಬರೂ ಇತಿಹಾಸವನ್ನು ಮರು ಸೃಷ್ಟಿಸುವುದಕ್ಕಾಗಿ ನಮ್ಮಿಂದಾಗುವುದನ್ನೆಲ್ಲಾ ಮಾಡಲಿದ್ದೇವೆ. ನಾವು ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆ. ಮತ್ತೊಮ್ಮೆ ಸಾಧಿಸೋಣ ಭಾರತ. ನಾನು ಇಲ್ಲಿಗೆ ಗೆಲ್ಲುವುದಕ್ಕೆ ಇದ್ದೇನೆ" ಎಂದು ಸ್ಫೂರ್ತಿದಾಯಕ ವಾಕ್ಯಗಳನ್ನು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್​ ಸದ್ಯ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದು, ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕಳಪೆ ಬ್ಯಾಟಿಂಗ್ ಮುಂದುವರೆಸಿರುವ ಕಾರಣ ಅವರ ಆಯ್ಕೆಗೆ ಹೆಚ್ಚಿನ ಆಕ್ರೋಶ ಕೂಡ ವ್ಯಕ್ತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.