ETV Bharat / sports

ಭುವಿಯನ್ನು ಮ್ಯಾನ್​ ಆಫ್​ ಸಿರೀಸ್​ ಪ್ರಶಸ್ತಿಗಾಗಿ ಹೆಸರಿಸದ್ದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಮೈಕಲ್ ವಾನ್​

author img

By

Published : Mar 29, 2021, 5:20 PM IST

ಮೈಕಲ್ ವಾನ್ ಭುವನೇಶ್ವರ್ ಕುಮಾರ್
ಮೈಕಲ್ ವಾನ್ ಭುವನೇಶ್ವರ್ ಕುಮಾರ್

ಗಾಯದ ಕಾರಣ 2 ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಕಮ್​ಬ್ಯಾಕ್ ಮಾಡಿದ್ದರು. ಅವರು ಕೊನೆಯ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಸೇರಿದಂತೆ 3 ಪಂದ್ಯಗಳ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ವಿಕೆಟ್​ ಅಷ್ಟೇ ಅಲ್ಲದೆ ಕೇವಲ 4.6 ರ ಎಕಾನಮಿಯಲ್ಲಿ 29 ಓವರ್​ ಎಸೆಯುವ ಮೂಲಕ ಇಂಗ್ಲೆಂಡ್​ ರನ್ ​ಗಳಿಕೆಗೂ ಕಡಿವಾಣ ವಾಕಿದ್ದರು. ಇದೀಗ ಇವರನ್ನು ಮ್ಯಾನ್​ ಆಫ್​ ಸಿರೀಸ್​ ಪ್ರಶಸ್ತಿಗಾಗಿ ಹೆಸರಿಸದ್ದಕ್ಕೆ ಮೈಕಲ್​ ವ್ಯಾನ್​ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಪುಣೆ: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮೂಲಕ 2-1ರಲ್ಲಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ ವೇಗಿ ಭುವನೇಶ್ವರ್ ಕುಮಾರ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡದಿರುವುದಕ್ಕೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಡೆದ ಕೊನೆಯ ಪಂದ್ಯವನ್ನು ಭಾರತ ಗೆಲ್ಲುವುದರೊಂದಿಗೆ ಏಕದಿನ ಸರಣಿಯನ್ನು 2-1ರಲ್ಲಿ ಭಾರತ ವಶಪಡಿಸಿಕೊಂಡಿತು. ಮೂರು ಪಂದ್ಯಗಳಿಂದ 219 ರನ್​ಗಳಿಸಿದ್ದ ಜಾನಿ ಬೈರ್​ಸ್ಟೋವ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಇದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4 ವಿಕೆಟ್​ ಪಡೆದಿದ್ದ ಶಾರ್ದುಲ್ ಠಾಕೂರ್​ಗೆ ಪಂದ್ಯ ಶ್ರೇಷ್ಠ ಮತ್ತು ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಭುವನೇಶ್ವರ್ ಕುಮಾರ್​ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಕೊಹ್ಲಿ ಅಲ್ಲದೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಟ್ವಿಟರ್​ನಲ್ಲಿ " ಭುವನೇಶ್ವರ್ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾಗದಿರುವುದು ಹೇಗೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ಗಾಯದ ಕಾರಣ 2 ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್​ಗಳ ಸರಣಿಯಲ್ಲಿ ಕಮ್​ಬ್ಯಾಕ್ ಮಾಡಿದ್ದರು. ಅವರು ಕೊನೆಯ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಸೇರಿದಂತೆ 3 ಪಂದ್ಯಗಳ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ವಿಕೆಟ್​ ಅಷ್ಟೇ ಅಲ್ಲದೆ ಕೇವಲ 4.6 ರ ಎಕಾನಮಿಯಲ್ಲಿ 29 ಓವರ್​ ಎಸೆಯುವ ಮೂಲಕ ಇಂಗ್ಲೆಂಡ್​ ರನ್​ಗಳಿಕೆಗೂ ಕಡಿವಾಣ ಹಾಕಿದ್ದರು.

ಇದನ್ನು ಓದಿ:ರಿಷಭ್ ಪಂತ್ ಭಾರತ ಕ್ರಿಕೆಟ್​ನ ಭವಿಷ್ಯ, ಆತನಿಲ್ಲದ ತಂಡ ಊಹಿಸಲು ಅಸಾಧ್ಯ: ಇಯಾನ್ ಬೆಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.