ETV Bharat / sitara

ಅಪ್ಪುಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' ನೀಡಲಿ : ತಮಿಳು ನಟ ಶರತ್​ ಕುಮಾರ್ ಒತ್ತಾಯ

author img

By

Published : Nov 16, 2021, 8:17 PM IST

ತಮಿಳು ನಟ ಶರತ್​ ಕುಮಾರ್
ತಮಿಳು ನಟ ಶರತ್​ ಕುಮಾರ್

ಅಪ್ಪುಗೆ ಅತ್ಯುನ್ನತ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ ತಮಿಳು ನಟ ಶರತ್​ ಕುಮಾರ್​, ಪುನೀತ್​ಗೆ 'ಭಾರತ ರತ್ನ' ಪ್ರಶಸ್ತಿ (Bharat Ratna To Puneeth) ನೀಡಬೇಕು ಎಂದು ಅಭಿಪ್ರಾಯಪಟ್ಟರು..

ಬೆಂಗಳೂರು : ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ 'ಪುನೀತ್​ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ತಮಿಳು ನಟ ಶರತ್​ ಕುಮಾರ್, ಅಪ್ಪುಗೆ ದೇಶದ ಅತ್ಯುನ್ನತ ಪ್ರಶಸ್ತಿ 'ಭಾರತ ರತ್ನ' (Bharat Ratna To Puneeth) ನೀಡಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಪ್ಪು ಕುರಿತು ತಮಿಳು ನಟ ಶರತ್​ ಕುಮಾರ್ ಅಭಿಮಾನದ ಮಾತು..

ಅಪ್ಪು ನಿಧನದ ಸುದ್ದಿ ಕೇಳಿದಾಗ ದೇವರನ್ನು ಕ್ಷಮಿಸಲು ಆಗಲಿಲ್ಲ. ಪುನೀತ್​ ಅವರು ಯಾವಾಗಲೂ ನಮ್ಮ ಹೃದಯದಲ್ಲಿ ಇರುತ್ತಾರೆ. ಪುನೀತ್​ ಈಗಲೂ ಎಂದೆಂದಿಗೂ ನಮ್ಮ ಮನದಲ್ಲಿ ಜೀವಂತ. ಪುನೀತ್​ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ. ನೇತ್ರದಾನದ ಮೂಲಕ ಉತ್ತಮ ಮೆಸೇಜ್​ ರವಾನಿಸಿದ್ದಾರೆ ಎಂದು ಹೇಳಿದರು.

ಬಲಗೈ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದಂತೆ ಎಂಬ ಮಾತಿದೆ. ಪುನೀತ್​ ಸಹ ಹಾಗೆಯೇ ಸಮಾಜ ಸೇವೆ ಮಾಡಿದ್ದಾರೆ. ನಾನು ಯಾವತ್ತು ಪುನೀತ್​ ಶ್ರದ್ಧಾಂಜಲಿಗೆ ಬರುತ್ತೇನೆ ಎಂದುಕೊಂಡಿರಲಿಲ್ಲ. ಪುನೀತ್​ ನನ್ನ ಶ್ರದ್ಧಾಂಜಲಿಗೆ ಬರುತ್ತಾರೆ ಎಂದುಕೊಂಡಿದ್ದೆ ಎಂದು ಭಾವುಕರಾದರು.

ಅಪ್ಪುಗೆ ಅತ್ಯುನ್ನತ 'ಕರ್ನಾಟಕ ರತ್ನ' ಪ್ರಶಸ್ತಿ ನೀಡಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ಅವರಿಗೆ 'ಭಾರತ ರತ್ನ' ಪ್ರಶಸ್ತಿ ನೀಡಬೇಕು ಎಂದು ಅಭಿಪ್ರಾಯಪಟ್ಟರು.

ಓದಿ: 'ಹೇಗಾದ್ರೂ ಮಾಡಿ ನನ್ನ ಕಳುಹಿಸಿ, ಅವನನ್ನು ಕರೆಯಿಸಿಕೊಂಡು ಬಿಡಿ ಪ್ಲೀಸ್​': ರಾಘಣ್ಣನ ಕಣ್ಣೀರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.