ETV Bharat / jagte-raho

ಲಾರಿ-ಕಾರು-ಬೈಕ್​ ಡಿಕ್ಕಿ: ಸರಣಿ ಅಪಘಾತದಲ್ಲಿ ನಾಲ್ವರ ದುರ್ಮರಣ

author img

By

Published : Aug 30, 2020, 1:42 PM IST

road accident
ಸರಣಿ ಅಪಘಾತ

ಲಾರಿಯೊಂದು ಬೈಕ್​ಗೆ ಗುದ್ದಿದ್ದು, ಹಿಂದಿನಿಂದ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಹಾಗೂ ಬೈಕ್​ ಸವಾರ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ.

ಚಿತ್ತೂರು: ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು​ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಲಾರಿ-ಕಾರು-ಬೈಕ್​ ಡಿಕ್ಕಿ

ಲಾರಿಯೊಂದು ಬೈಕ್​ಗೆ ಗುದ್ದಿದ್ದು, ಹಿಂದಿನಿಂದ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಹಾಗೂ ಬೈಕ್​ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಕಾರಿನಲ್ಲಿದ್ದ ವೆಂಕಟೇಶ್ವರ ರೆಡ್ಡಿ (29), ರತ್ನಮ್ಮ (49), ಶ್ರೀನಿವಾಸುಲು ರೆಡ್ಡಿ (55) ಕರ್ನಾಟಕದಿಂದ ತಿರುಪತಿಗೆ ಬರುತ್ತಿದ್ದರು. ಮೃತ ಬೈಕ್​ ಸವಾರನನ್ನು ಬಂಗಾರಪಾಲಯಂ ನಿವಾಸಿ ಬಾಬು (45) ಎಂದು ಗುರುತಿಸಲಾಗಿದೆ.

ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.