ETV Bharat / entertainment

'RRR​ ಪ್ರಚಾರಕ್ಕಾಗಿ ಖರ್ಚಾದ ಕಾಸಿನಲ್ಲಿ 8 ಸಿನಿಮಾ ಮಾಡಬಹುದು': ತಮ್ಮಾ ರೆಡ್ಡಿ ಟೀಕೆ

author img

By

Published : Mar 10, 2023, 10:58 AM IST

Updated : Mar 10, 2023, 1:29 PM IST

rrr
ಆರ್​ಆರ್​ಆರ್

ಆರ್​ಆರ್​ಆರ್​ ಸಿನಿಮಾದ ಪ್ರಚಾರಕ್ಕಾಗಿ ನಿರ್ದೇಶಕ ರಾಜಮೌಳಿ ಭಾರಿ ಮೊತ್ತದ ಹಣ ವ್ಯಯಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರತಿಷ್ಟಿತ ಆಸ್ಕರ್​ 2023 ಸಮಾರಂಭಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಅಕಾಡೆಮಿ ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆರ್​ಆರ್​ಆರ್​ ಚಿತ್ರದ ಸೂಪರ್​ಹಿಟ್​ ನಾಟು ನಾಟು ಹಾಡು ನಾಮನಿರ್ದೇಶನಗೊಂಡಿದೆ. ಆದರೆ ಆಸ್ಕರ್​ ನಾಮನಿರ್ದೇಶನದ ನಂತರ ಖ್ಯಾತ ನಿರ್ದೇಶಕ ಎಸ್.​ಎಸ್.ರಾಜಮೌಳಿ ಅವರು ಆರ್​ಆರ್​ಆರ್​ ಚಿತ್ರದ ಪ್ರಚಾರಕ್ಕಾಗಿ ಭಾರಿ ಮೊತ್ತ ವ್ಯಯಿಸಿರುವುದಾಗಿ ವರದಿಯಾಗಿದೆ. ಜೊತೆಗೆ ಈ ಬಗ್ಗೆ ಟಾಲಿವುಡ್​ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾ ರೆಡ್ಡಿ ಭಾರದ್ವಾಜ್​ ಕಮೆಂಟ್ ಮಾಡಿರುವುದು ಸಿನಿರಂಗದಲ್ಲಿ ಸಂಚಲನ ಮೂಡಿಸಿದೆ.​

ತಮ್ಮಾ ರೆಡ್ಡಿ ಭಾರದ್ವಾಜ್​ ಕಮೆಂಟ್ ತೆಲುಗು ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. "ಆರ್​ಆರ್​ಆರ್​ ಚಿತ್ರದ ಆಸ್ಕರ್​ ಪ್ರಚಾರಕ್ಕಾಗಿ ನಿರ್ದೇಶಕ ರಾಜಮೌಳಿ 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 8 ಸಿನಿಮಾ ಮಾಡಬಹುದು" ಎಂದಿದ್ದಾರೆ. "ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?" ಎಂದು ಲೇವಡಿ ಮಾಡಿದ್ದಾರೆ. ​ಭಾರದ್ವಾಜ್​ ಕಮೆಂಟ್​ಗಳಿಗೆ ಸಿನಿಮಾ ಕ್ಷೇತ್ರದ ಗಣ್ಯರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

ರಾಮ್​ಚರಣ್​, ಜೂನಿಯರ್​ ಎನ್​ಟಿಆರ್​ ಮತ್ತು ನಿರ್ದೇಶಕ ರಾಜಮೌಳಿ ಅವರು ಆಸ್ಕರ್​ ಮತ್ತು ಗೋಲ್ಡನ್​ ಗ್ಲೋಬ್​ ಪ್ರಚಾರಕ್ಕಾಗಿ 83 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೂಪರ್​ ಹಿಟ್​ ಸಿನಿಮಾ ಆರ್​ಆರ್​ಆರ್​ ಆಸ್ಕರ್​ ಪಟ್ಟಿಗೆ ಸೇರಲು ಎಸ್​ಎಸ್​ ರಾಜಮೌಳಿ ಕೋಟಿಗಟ್ಟಲೆ ಹಣವನ್ನು ಖರ್ಚು ಮಾಡಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಟಾಲಿವುಡ್​ ನಿರ್ದೇಶಕ ಮತ್ತು ನಿರ್ಮಾಪಕ ತಮ್ಮಾ ರೆಡ್ಡಿ ಭಾರದ್ವಾಜ್​ ಕಮೆಂಟ್ ತೆಲುಗು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿದೆ. ಆರ್​ಆರ್​ಆರ್​ ಚಿತ್ರವು ಆಸ್ಕರ್​ ಪ್ರಚಾರಕ್ಕಾಗಿ ನಿರ್ದೇಶಕ ಎಸ್​ಎಸ್​ ರಾಜಮೌಳಿಯವರು 80 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಹಣದಲ್ಲಿ 8 ಸಿನಿಮಾ ಮಾಡಬಹುದು ಎಂದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ? ಎಂದು ಲೇವಡಿ ಮಾಡಿದ್ದಾರೆ. ​ಭಾರದ್ವಾಜ್​ ಅವರ ಕಮೆಂಟ್​ಗಳಿಗೆ ಸಿನಿ ಗಣ್ಯರು ಕೂಡ ಪ್ರತಿಕ್ರಿಯಿಸುತ್ತಿದ್ದಾರೆ.

ಈಗಾಗಲೇ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್​ಆರ್​ಆರ್​ ಚಿತ್ರತಂಡದ ಮೇಲೆ ಭಾರತೀಯ ಸಿನಿಮಾ ರಂಗದ ಗಮನ ಕೇಂದ್ರಿಕೃತವಾಗಿದೆ. ರಾಮ್​ಚರಣ್​ ಅಮೆರಿಕದಲ್ಲಿ ಎರಡು ಅಂತಾರಾಷ್ಟ್ರೀಯ ಶೋಗಳಲ್ಲಿ ಭಾಗಿಯಾಗಿ ಚಿತ್ರದ ಪ್ರಚಾರ ಮಾಡಿದ್ದಾರೆ. ಎಂಟರ್​ಟೈನ್​ಮೆಂಟ್​ ಟುನೈಡ್​, ಕಲ್ಚರ್​ ಪಾಪ್​ ಹೆಸರಿನ ಶೋಗಳಲ್ಲಿ ಭಾಗಿಯಾದ ರಾಮ್​ಚರಣ್​ ಜಾಗತಿಕ ಮಟ್ಟದಲ್ಲಿ ಆರ್​ಆರ್​ಆರ್​ ಜನಪ್ರಿಯತೆ ಬಗ್ಗೆ ಮಾತನಾಡಿದ್ದಾರೆ. ಈ ಮಧ್ಯೆ ಸಿನಿಮಾ ಪ್ರಚಾರಕ್ಕಾಗಿ ಕೋಟಿ ಕೋಟಿ ಹಣವನ್ನು ರಾಜಮೌಳಿ ವ್ಯಯಿಸಿದ್ದಾರೆ ಎಂಬುದು ಎಲ್ಲೆಡೆ ಸುದ್ದಿಯಾಗುತ್ತಿದೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ: ಮತ್ತೊಂದು ಗೆಲುವು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು

ಇದೇ ಮಾರ್ಚ್​ 12 ರಂದು ಅಮೆರಿಕದಲ್ಲಿ ಆಸ್ಕರ್​ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಅಂದು ನಾಟು ನಾಟು ಹಾಡಿನ ಪ್ರದರ್ಶನ ಇರಲಿದೆ. ನಾಟು ನಾಟು ಹಾಡನ್ನು ಮೂಲ ಬೀಟ್‌ನೊಂದಿಗೆ ಆಸ್ಕರ್‌ ಪ್ರಶಸ್ತಿ ಪ್ರದಾನ ಸಮಾರಂಭದ ವೇದಿಕೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಈ ಹಾಡಿನ ಇಬ್ಬರು ಗಾಯಕರಾದ ಕಾಲಭೈರವ ಮತ್ತು ರಾಹುಲ್​ ಸಿಪ್ಲಿಗಂಜ್ ಸ್ವತಃ ಹಾಡಲಿದ್ದಾರೆ​. ಈ ಕ್ಷಣಕ್ಕಾಗಿ ಚಿತ್ರತಂಡ ಮಾತ್ರವಲ್ಲದೇ ಇಡೀ ದೇಶ ಕಾಯುತ್ತಿದೆ. ಆಸ್ಕರ್​ನಲ್ಲಿ ಲೇಡಿ ಗಾಗಾ ಮತ್ತು ರಿಹನ್ನಾ ಅವರ ಹಾಡುಗಳ ವಿರುದ್ಧ ನಾಟು ನಾಟು ಹಾಡು ಸ್ಪರ್ಧಿಸುತ್ತಿದೆ.

ನಾಟು ನಾಟು ರಚಿಸಲು ಚಂದ್ರಬೋಸ್​ ಅವರು 1 ವರ್ಷ 7 ತಿಂಗಳು ವ್ಯಯಿಸಿದ್ದಾರೆ. ಶೇ 90 ರಷ್ಟು ಹಾಡನ್ನು ಅರ್ಧ ದಿನದಲ್ಲಿ ಬರೆದು ಮುಗಿಸಿದ ಅವರು ಶೇ.10 ರಷ್ಟು ಹಾಡನ್ನು ಬರೆಯಲು 19 ತಿಂಗಳು ತೆಗೆದುಕೊಂಡಿದ್ದಾರೆ. ಕೊನೆಗೂ ಅವರ ಸತತ ಪ್ರಯತ್ನಕ್ಕೆ ಫಲವೆಂಬಂತೆ ಅನೇಕ ಪ್ರಶಸ್ತಿಗಳನ್ನು ನಾಟು ನಾಟು ಪಡೆದುಕೊಂಡಿದೆ.

ಇದನ್ನೂ ಓದಿ: ಖಳನಟ ವಜ್ರಮುನಿಯ ‘‘ಯಲಾ‌ ಕುನ್ನಿ’’ ಡೈಲಾಗ್ ಈಗ ಕೋಮಲ್ ಅಭಿನಯದ ಹೊಸ ಚಿತ್ರದ ಟೈಟಲ್

Last Updated :Mar 10, 2023, 1:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.