ETV Bharat / entertainment

ಬಿಗ್​ ಬಾಸ್​​ ಮನೆಯಲ್ಲಿ ಧರಣಿಗೆ ಕುಳಿತ ಸ್ಪರ್ಧಿಗಳು

author img

By

Published : Sep 29, 2022, 12:44 PM IST

kannada bigg boss promo released
ಬಿಗ್​​ ಬಾಸ್​ ಪ್ರೋಮೋ ರಿಲೀಸ್

ಕಲರ್ಸ್ ಕನ್ನಡ ವಾಹಿನಿ ಬಿಗ್​​ ಬಾಸ್​ ಪ್ರೋಮೋ ರಿಲೀಸ್​ ಮಾಡಿದ್ದು, ಇದರಲ್ಲಿ ಸ್ಪರ್ಧಿ ಅರುಣ್ ​ಸಾಗರ್ ಧರಣಿಗೆ ಕೂರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಬಿಗ್​​ ಬಾಸ್​ ಮನೆಯಲ್ಲಿ ಟಾಸ್ಕ್​ ಮತ್ತು ತಂತ್ರಗಾರಿಕೆ ಚುರುಕಾಗಿದೆ. ಪ್ರತಿ ಸ್ಪರ್ಧಿಗಳು ತಮ್ಮ ಸಾಮರ್ಥ್ಯ, ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಪ್ರತೀ ಟಾಸ್ಕ್ ವಿಚಾರದಲ್ಲೂ ಕೊಂಚ ವಾದ ವಿವಾದ, ಚರ್ಚೆ, ಮನಸ್ತಾಪಗಳು ಆಗೋದು ಸಹಜ. ಅದರಂತೆ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಆಗಿದ್ದು, ಸ್ಪರ್ಧಿಗಳು ಟಾಸ್ಕ್ ವೇಳೆ ಧರಣಿಗೆ ಕುಳಿತಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್​ ಮಾಡಿದ್ದು, ಇದರಲ್ಲಿ ಸ್ಪರ್ಧಿ ಅರುಣ್​ಸಾಗರ್ ಧರಣಿಗೆ ಕೂರುತ್ತಿರುವುದಾಗಿ ತಿಳಿಸಿದ್ದಾರೆ. ಅರುಣ್​ಸಾಗರ್ ವರ್ತನೆಗೆ ಮನೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆ ಧರಣಿಗೆ ಕುಳಿತರು, ಸ್ಪರ್ಧಿಗಳ ಅಸಮಾಧಾನವೇನು? ಎಂಬುದು ಇಂದಿನ ಸಂಪೂರ್ಣ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನು, ಇದು ಬಿಗ್​​ ಬಾಸ್​ ಶೋನ ಮೊದಲ ವಾರ. ಪ್ರತಿ ವಾರವೂ ಸದಸ್ಯರ ಸಂಖ್ಯೆ ಕಡಿಮೆ ಆಗುತ್ತದೆ. ಈಗಾಗಲೇ ನಾಮಿನೇಷನ್​ ಪ್ರಕ್ರಿಯೆ ನಡೆದಿದೆ. ಅದರಲ್ಲಿ ಆರ್ಯವರ್ಧನ್​, ದರ್ಶ್​, ದಿವ್ಯಾ ಉರುಡುಗ, ಐಶ್ವರ್ಯಾ, ಪ್ರಶಾಂತ್​ ಸಂಬರಗಿ, ವಿನೋದ್​, ಅರುಣ್​ ಸಾಗರ್​, ​ನವಾಜ್​, ಸಾನ್ಯಾ ಅಯ್ಯರ್​, ಮಯೂರಿ, ರೂಪೇಶ್​ ರಾಜಣ್ಣ, ಕಾವ್ಯಶ್ರೀ ಅವರು ನಾಮಿನೇಟ್​ ಆಗಿದ್ದಾರೆ. ಶನಿವಾರದಂದು ಕಿಚ್ಚ ಸುದೀಪ್​ ಅವರ ಕಾರ್ಯಕ್ರಮದಲ್ಲಿ ಓರ್ವ ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ. ಇದು ಬಿಗ್​ ಬಾಸ್​​ 9 ಶೋನ ಮೊದಲ ಎಲಿಮಿನೇಶನ್​ ಆಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್ ಪ್ರೋಮೋ.. ರೂಪೇಶ್​ ರಾಜಣ್ಣ ನೀರಿನ ಪಾಠಕ್ಕೆ ಪ್ರಶಾಂತತೆ ಕಳೆದುಕೊಂಡ ಸಂಬರಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.