ETV Bharat / city

ಸಿದ್ದರಾಮಯ್ಯಗೆ ಸದ್ಯದಲ್ಲೇ ಆರ್‌ಎಸ್‌ಎಸ್‌ ಕುರಿತ ಪುಸ್ತಕ ಕಳುಹಿಸಿಕೊಡುವೆ: ಎಸ್.ಟಿ.ಸೋಮಶೇಖರ್‌

author img

By

Published : May 29, 2022, 12:07 PM IST

Updated : May 29, 2022, 12:37 PM IST

minister st somashekar
ಸಚಿವ ಎಸ್‌ ಟಿ ಸೋಮಶೇಖರ್

ಆರ್​​​ಎಸ್​ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ಸಿದ್ದರಾಮಯ್ಯ ಕುರಿತು ಸಚಿವ ಎಸ್‌.ಟಿ.ಸೋಮಶೇಖರ್ ಟೀಕಿಸಿದ್ದಾರೆ.

ಮೈಸೂರು: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಮಾತನಾಡುತ್ತಿದ್ದಾಗ ಅವರ ಮಾತಿಗೆ ತೂಕ ಇತ್ತು. ಆದರೀಗ ಅವರ ಮಾತಿಗೆ ತೂಕವಿಲ್ಲ. ಅವರ ಮಾತನ್ನು ಅವರ ಪಕ್ಷದಲ್ಲಿಯೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್ ವ್ಯಂಗ್ಯವಾಡಿದರು.


ಆರ್​​​ಎಸ್​ಎಸ್ ಮೂಲದ ಬಗ್ಗೆ ಪ್ರಶ್ನಿಸಿದ್ದ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಆರ್​ಎಸ್ಎಸ್ ಬಗ್ಗೆ ಸ್ಟಡಿ ಮಾಡಿಲ್ಲ. ಈ‌ ಹಿಂದೆ ಅವರಿಗೆ ಬನ್ನಿ ಆರ್​ಎಸ್​ಎಸ್ ಕಚೇರಿಗೆ ಕರೆದುಕೊಂಡು ಹೋಗುತ್ತೇನೆ, ಅಲ್ಲಿನ ಕೆಲಸದ ಬಗ್ಗೆ ಸ್ಟಡಿ ಮಾಡಿ ಎಂದಿದ್ದೆ. ಆರ್​ಎಸ್​ಎಸ್ ದೇಶ ಭಕ್ತಿ, ಸಂಘಟನೆ, ದೇಶದ ಅಭಿವೃದ್ಧಿ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತದೆ. ಸಿದ್ದರಾಮಯ್ಯನವರಿಗೆ ಸದ್ಯದಲ್ಲೇ ಆರ್​ಎಸ್​ಎಸ್ ಸಂಘಟನೆಯ ಪುಸ್ತಕ ಕಳುಹಿಸಿಕೊಡುತ್ತೇನೆ, ತಿಳಿದುಕೊಳ್ಳಲಿ ಎಂದರು.

ಇದನ್ನೂ ಓದಿ: ಮೈಸೂರು: 509 ಅಂಕ ಬಂದರೂ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ

ಪಠ್ಯ ಪುಸ್ತಕ ಸಮಿತಿಯನ್ನು ಕೈಬಿಡಬೇಕೆಂಬ ಹೆಚ್.ವಿಶ್ವನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವಾಗಲೂ ಅಡ್ವೈಸ್ ಕೊಡುತ್ತಿರುತ್ತಾರೆ. ಒಳ್ಳೆ ಅಂಶಗಳನ್ನು ಪರಿಗಣಿಸುತ್ತೇವೆ. ನಾವು ಯಾವುದೇ ಕಾರಣಕ್ಕೂ ಕೇಸರೀಕರಣ ಮಾಡುತ್ತಿಲ್ಲ. ಯಾರೂ ಕೂಡ ಕಂಪ್ಲೀಟ್ ಆಗಿ ಪುಸ್ತಕವನ್ನು ಓದಿಲ್ಲ. ಆದರೆ ರಾಜಕೀಯವಾಗಿ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

Last Updated :May 29, 2022, 12:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.