ETV Bharat / city

ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರ ಅಮಾನತು: ಸೇಠ್​ ಬೆಂಬಲಿಗರಿಂದ ರಾಜೀನಾಮೆ ಪರ್ವ

author img

By

Published : Mar 20, 2021, 3:42 PM IST

Updated : Mar 20, 2021, 3:59 PM IST

slogans against Siddaramaiah issue
ಶುರುವಾದ ರಾಜೀನಾಮೆ ಪರ್ವ

ಮೈಸೂರು ನಗರ ಕಾಂಗ್ರೆಸ್​ ಅಧ್ಯಕ್ಷ ಆರ್.ಮೂರ್ತಿ ಅವರಿಗೆ, ಎನ್.ಆರ್.ಕ್ಷೇತ್ರದ 9 ವಾಡ್೯ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ರಾಜೀನಾಮೆ ಪತ್ರ ನೀಡಿ ಬೇಸರ ಹೊರಹಾಕಿದ್ದಾರೆ. ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದವರನ್ನು ಅಮಾನತು ಮಾಡಿದ್ದಕ್ಕೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕ ತನ್ವೀರ್ ಸೇಠ್ ಬೆಂಬಲಿಗರು ಘೋಷಣೆ ಕೂಗಿ ಅಮಾನತುಗೊಂಡ ಹಿನ್ನೆಲೆ, ಎನ್.ಆರ್.ಕ್ಷೇತ್ರದ ತನ್ವೀರ್ ಸೇಠ್ ಬೆಂಬಲಿಗರ ಅಸಮಾಧಾನ ಭುಗಿಲೆದ್ದಿದೆ.

ಶುರುವಾದ ರಾಜೀನಾಮೆ ಪರ್ವ

ಓದಿ: ಶಾಲಾ ವಿದ್ಯಾರ್ಥಿನಿಗೆ ಯುವಕ ತಾಳಿ ಕಟ್ಟಿದ ವಿಡಿಯೋ ವೈರಲ್​... ಆರೋಪಿಯ ಬಂಧನ

ಮೈಸೂರು ನಗರ ಕಾಂಗ್ರೆಸ್​ ಅಧ್ಯಕ್ಷ ಆರ್.ಮೂರ್ತಿ ಅವರಿಗೆ ಎನ್.ಆರ್.ಕ್ಷೇತ್ರದ 9 ವಾಡ್೯ಗಳ ಅಧ್ಯಕ್ಷರು ಹಾಗೂ 141 ಬೂತ್ ಅಧ್ಯಕ್ಷರು ರಾಜೀನಾಮೆ ಪತ್ರ ನೀಡಿ ಬೇಸರ ಹೊರಹಾಕಿದ್ದಾರೆ.

ಸಿದ್ದರಾಮಯ್ಯ ಅವರ ವಿರುದ್ಧ ಅಮಾನತುಗೊಂಡವರು ಘೋಷಣೆ ಕೂಗಿಲ್ಲ. ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ ಎಂದು ಮನವಿ ಮಾಡಿದ್ದಾರೆ.

Last Updated :Mar 20, 2021, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.