ETV Bharat / city

ಹುಬ್ಬಳ್ಳಿ ಬಿಜೆಪಿ ಸಭೆಯಲ್ಲಿ ಶಾಸಕ-ಎಂಎಲ್​ಸಿ ಗಲಾಟೆ: ​ಶೆಟ್ಟರ್ ಸಮ್ಮುಖದಲ್ಲೇ ಹೊಯ್‌ ಕೈ

author img

By

Published : Dec 1, 2021, 1:47 PM IST

ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್​ಸಿ ಆರ್.ಶಂಕರ್ ನಡುವೆ ಗಲಾಟೆ ನಡೆದಿದೆ.

clash between the MLA & MLC in Hubli BJP meting
ಹುಬ್ಬಳ್ಳಿ ಬಿಜೆಪಿ ಸಭೆಯಲ್ಲಿ ಶಾಸಕ-ಎಂಎಲ್​ಸಿ ನಡುವೆ ಗಲಾಟೆ

ಹುಬ್ಬಳ್ಳಿ: ಬಿಜೆಪಿ ಶಾಸಕ ಮತ್ತು ಎಂಎಲ್​ಸಿ ನಡುವಿನ ಭಿನ್ನಾಭಿಪ್ರಾಯ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಹುಬ್ಬಳ್ಳಿಯ ಖಾಸಗಿ ಹೊಟೇಲ್​ನಲ್ಲಿ ನಡೆಯಿತು. ರಾಣೆಬೆನ್ನೂರು ಶಾಸಕ ಅರುಣಕುಮಾರ ಹಾಗೂ ಎಂಎಲ್​ಸಿ ಆರ್.ಶಂಕರ್ ನಡುವೆ ಗಲಾಟೆ ನಡೆದಿದೆ.


ವಿಧಾನ ಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಖಾಸಗಿ ಹೊಟೇಲ್​ನಲ್ಲಿ ನಡೆಯುತ್ತಿದ್ದ ಸಭೆಯಲ್ಲಿ, ಚುನಾವಣೆಯ ಉಸ್ತುವಾರಿ ಹಂಚಿಕೆ ವಿಚಾರದಲ್ಲಿ ಗಲಾಟೆ ಪ್ರಾರಂಭವಾಗಿದೆ. ಮಾಜಿ‌ ಸಿಎಂ ಜಗದೀಶ್​​ ಶೆಟ್ಟರ್ ಸೇರಿದಂತೆ ಹಲವು ಮುಖಂಡರ ಸಮ್ಮುಖದಲ್ಲಿಯೇ ಈ ಡ್ರಾಮಾ ನಡೆದಿದೆ. ಬಳಿಕ ಶಾಸಕ ಅರುಣಕುಮಾರ ಅವರನ್ನು ಹಾವೇರಿ ಜಿಲ್ಲಾ ಬಿಜೆಪಿ ಮುಖಂಡರು ಸಮಾಧಾನಪಡಿಸಲು ಮುಂದಾದರು.

ಪ್ರತಿಕ್ರಿಯೆ ನೀಡಲು ಶಂಕರ್ ನಿರಾಕರಣೆ:

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಆರ್.ಶಂಕರ್ ನಿರಾಕರಿಸಿ ಸಭೆಯಿಂದ ಹೊರನಡೆದರು.

ಇದನ್ನೂ ಓದಿ: ಆಟೋ ದರ ಪರಿಷ್ಕರಣೆ ಬೆನ್ನಲ್ಲೆ ಗ್ಯಾಸ್ ದರ ಏರಿಕೆ.. ಸಂಕಷ್ಟದ ಸುಳಿಯಲ್ಲಿ ಚಾಲಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.