ETV Bharat / city

ಕಾಂಗ್ರೆಸ್​ನವರು ಎಷ್ಟೇ ನೋಟು ಕೊಟ್ಟರೂ ಜನ ನಮ್ಮನ್ನು ಗುರುತಿಸಿ ವೋಟು ಹಾಕ್ತಾರೆ : ಸಿದ್ದೇಶ್ವರ್

author img

By

Published : Dec 3, 2021, 7:05 PM IST

mp gm siddeshwar criticize on congress
ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್​ ವಿರುದ್ಧ ಮಾತನಾಡಿರುವುದು..

ನಾವು ಚುನಾವಣೆಗೆ ಹಣ ಕೊಡಲ್ಲ. ಹಾಗೆಯೇ ಮತ ಪಡೆಯುತ್ತೇವೆ. ಕಾಂಗ್ರೆಸ್​ನಿಂದ ಯಾರೇ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ನಮಗಿದೆ. ಕಳೆದ ಬಾರಿ ನಮ್ಮ ಬಳಿ ಹೆಚ್ಚು ಜನ ಶಾಸಕರು, ವಿಧಾನ ಪರಿಷತ್ ಸದಸ್ಯರಿರಲಿಲ್ಲ..

ದಾವಣಗೆರೆ : ಕಾಂಗ್ರೆಸ್​​ನವರು ಒಂದು ಮತಕ್ಕೆ ಐವತ್ತು ಸಾವಿರ ಅಲ್ಲ ಒಂದು ಲಕ್ಷ ರೂ. ಕೊಡಲಿ, ಆದ್ರೂ ಜನ ನಮ್ಮನ್ನು ಗುರುತಿಸಿ ಮತ ಹಾಕುತ್ತಾರೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಸಂಸದ ಜಿಎಂ ಸಿದ್ದೇಶ್ವರ್ ಹರಿಹಾಯ್ದರು.

ದಾವಣಗೆರೆಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್​ ವಿರುದ್ಧ ಮಾತನಾಡಿರುವುದು..

ನಗರದಲ್ಲಿಂದು ಮಾತನಾಡಿದ ಅವರು, ನಾವು ಚುನಾವಣೆಗೆ ಹಣ ಕೊಡಲ್ಲ. ಹಾಗೆಯೇ ಮತ ಪಡೆಯುತ್ತೇವೆ. ಕಾಂಗ್ರೆಸ್​ನಿಂದ ಯಾರೇ ಪರಿಷತ್ ಚುನಾವಣೆಗೆ ಸ್ಪರ್ಧಿಸಲಿ, ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ಶಕ್ತಿ ನಮಗಿದೆ. ಕಳೆದ ಬಾರಿ ನಮ್ಮ ಬಳಿ ಹೆಚ್ಚು ಜನ ಶಾಸಕರು, ವಿಧಾನ ಪರಿಷತ್ ಸದಸ್ಯರಿರಲಿಲ್ಲ.

ಆದ್ರೆ, ಈ ಬಾರಿ ನಮ್ಮ ಬಳಿ ಚಿತ್ರದುರ್ಗ ಸೇರಿ ಹತ್ತು ಜನ ಶಾಸಕರು, ಮಹಾನಗರ ಪಾಲಿಕೆ, ನಗರಸಭೆಗಳು, ಪಟ್ಟಣ ಪಂಚಾಯತ್​, ಪುರಸಭೆಗಳು ಸೇರಿ ಇಬ್ಬರು ಲೋಕಸಭಾ ಸದಸ್ಯರಿದ್ದೇವೆ. ಯಾವುದೇ ಕಾರಣಕ್ಕೂ ಸೋಲಿನ ಪ್ರಶ್ನೆಯೇ ಇಲ್ಲ. ನಾವು ಗೆದ್ದೆ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮಂಗಳೂರು: ಸಿಮ್ ಬದಲಾವಣೆ ಮಾಡಲು ಹೋಗಿ 29 ಸಾವಿರ ಕಳೆದುಕೊಂಡ ವ್ಯಕ್ತಿ

ಬಿಜೆಪಿ ಅಭ್ಯರ್ಥಿ ನವೀನ್ ಅವರು ಚಿತ್ರದುರ್ಗದ ಮಗ, ದಾವಣಗೆರೆಯ ಮೊಮ್ಮಗ. ಜನರು ಇವರ ಮೇಲೆ ಅನುಕಂಪ ತೋರಿಸಿ ಮತ ನೀಡುತ್ತಾರೆಂಬ ನಂಬಿಕೆ ಇದೆ ಎಂದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.