ETV Bharat / city

ಯೋಗೇಶ್ ಗೌಡ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾದ ವಿನಯ್ ಕುಲಕರ್ಣಿ ಸಂಬಂಧಿಕರು

author img

By

Published : Dec 4, 2020, 11:41 AM IST

ನ್ಯಾಯಾಲಯಕ್ಕೆ ಹಾಜರಾದ ವಿನಯ್ ಸಂಬಂಧಿಗಳು
ನ್ಯಾಯಾಲಯಕ್ಕೆ ಹಾಜರಾದ ವಿನಯ್ ಸಂಬಂಧಿಗಳು

ಧಾರವಾಡ ಜಿ.ಪಂ ಸದಸ್ಯ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯಕ್ಕೆ ವಿಜಯ್​ ಕುಲಕರ್ಣಿ ಹಾಗೂ ಚಂದ್ರಶೇಖರ್​ ಇಂಡಿ ಮತ್ತು ಸೋಮು ನ್ಯಾಮಗೌಡ ಆಗಮಿಸಿದ್ದಾರೆ.

ಧಾರವಾಡ: ಜಿ.ಪಂ. ಸದಸ್ಯ ಯೋಗೇಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾಲಯಕ್ಕೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಹೋದರ ವಿಜಯ್​ ಕುಲಕರ್ಣಿ ಹಾಗೂ ವಿನಯ್ ಸೋದರ ಮಾವ ಚಂದ್ರಶೇಖರ್​ ಇಂಡಿ ಮತ್ತು ವಿನಯ್ ಆಪ್ತ ಕಾರ್ಯದರ್ಶಿಯಾಗಿದ್ದ ಸೋಮು ನ್ಯಾಮಗೌಡ ಹಾಜರಾಗಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾದ ವಿನಯ್ ಸಂಬಂಧಿಗಳು

ಹೆಚ್ಚಿನ ವಿಚಾರಣೆ ಹಿನ್ನೆಲೆ ಸಿಬಿಐ ವಿಶೇಷ ನ್ಯಾಯಾಲಯ ನೋಟಿಸ್ ನೀಡಿದ್ದು, ಈ ಹಿನ್ನೆಲೆ ಕೋರ್ಟ್​ಗೆ ಹಾಜರಾಗಿದ್ದಾರೆ. ಮೂವರು ಕೋರ್ಟ್ ಆವರಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಒಳ ಹೋಗಿದ್ದಾರೆ. ಇಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಇದನ್ನೂ ಓದಿ: ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿಜಯ್ ಕುಲಕರ್ಣಿ, ಸೋಮು ನ್ಯಾಮಗೌಡ ಸಿಬಿಐ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.